<p><strong>ರಾಯಪುರ:</strong> ‘ಪ್ರತಿ ದಿನ ಕೇವಲ ₹66 ದಿನಗೂಲಿ ಪಡೆದು ನಾವು ಬದುಕು ಸಾಗಿಸುವುದು ಹೇಗೆ?’ ಛತ್ತೀಸಗಢ ರಾಜಧಾನಿ ರಾಯಪುರದಲ್ಲಿ ಕಳೆದ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಮಧ್ಯಾಹ್ನದ ಬಿಸಿಯೂಟ ಅಡುಗೆದಾರರು ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಂಡಿದ್ದು ಹೀಗೆ.</p>.<p>ದಿನಗೂಲಿಯನ್ನು ₹66 ಗಳಿಂದ ₹400ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿರುವ ಅವರು, ತಮ್ಮ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿಯೂ ಹೇಳಿದ್ದಾರೆ. </p>.<p>‘ಇತರರ ಮಕ್ಕಳಿಗೆ ಅನ್ನ ಬೇಯಿಸಿ ನೀಡುವ ನಾವು, ನಮ್ಮ ಮಕ್ಕಳಿಗೆ ಊಟ ಹಾಕಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದೇವೆ’ ಎಂದು ಹೇಳಿಕೊಂಡಿದ್ದಾರೆ. </p>.<p class="title">ಪ್ರತಿಭಟನಕಾರರ ಪೈಕಿ ಶೇ 95ರಷ್ಟು ಮಹಿಳೆಯರೇ ಇದ್ದಾರೆ. ಇವರಲ್ಲಿ ಹಲವರು ಗ್ರಾಮೀಣ ಪ್ರದೇಶ, ಬುಡಕಟ್ಟು ಪ್ರದೇಶಗಳ ನಿವಾಸಿಗಳಾಗಿದ್ದಾರೆ.</p>.<p>‘ಸರ್ಕಾರಗಳು ಬದಲಾಗುತ್ತಿವೆ. ಆದರೆ, ನಮ್ಮ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ದಿನವೂ ಬರೀ ₹66 ದಿನಗೂಲಿಯಲ್ಲಿ ನಾವು ಹೇಗೆ ಜೀವಿಸಬೇಕು ? ಸರ್ಕಾರ ಏಕೆ ನಮ್ಮ ಬದುಕಿನ ಜತೆ ಆಟವಾಡುತ್ತಿದೆ’ ಎಂದು ಸವಿತಾ ಮಾಣಿಕಪುರಿ (38) ಎನ್ನುವವರು ಪ್ರಶ್ನಿಸಿದ್ದಾರೆ. </p>.<p>ಮೇಘರಾಜ್ ಬಘೇಲ್ (45) ಎಂಬವರು ಮಾತನಾಡಿ, ‘ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅಡಿಯಲ್ಲಿ 87 ಸಾವಿರ ಬಿಸಿಯೂಟ ಕಾರ್ಮಿಕರು ಕೆಲಸ ಮಾಡುತ್ತಿದ್ದೇವೆ. 1995ರಲ್ಲಿ ಯೋಜನೆ ಪ್ರಾರಂಭವಾದಾಗ ಪ್ರತಿದಿನ ಕೇವಲ ₹15 ದಿನಗೂಲಿ ಪಡೆದು ಕೆಲಸ ಮಾಡುತ್ತಿದ್ದೆವು. ಈಗ 30 ವರ್ಷದ ಬಳಿಕವೂ ನಮ್ಮ ದಿನಗೂಲಿ ₹66 ಆಗಿದೆ. ರಾಜ್ಯ ಸರ್ಕಾರವು ಬಿಸಿಯೂಟ ಕಾರ್ಮಿಕರಿಗಾಗಿ ಏನೂ ಕೆಲಸ ಮಾಡಿಲ್ಲ. ನಮ್ಮ ದಿನಗೂಲಿ ₹440ಕ್ಕೆ ಹೆಚ್ಚಿಸಲಿ’ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಪುರ:</strong> ‘ಪ್ರತಿ ದಿನ ಕೇವಲ ₹66 ದಿನಗೂಲಿ ಪಡೆದು ನಾವು ಬದುಕು ಸಾಗಿಸುವುದು ಹೇಗೆ?’ ಛತ್ತೀಸಗಢ ರಾಜಧಾನಿ ರಾಯಪುರದಲ್ಲಿ ಕಳೆದ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಮಧ್ಯಾಹ್ನದ ಬಿಸಿಯೂಟ ಅಡುಗೆದಾರರು ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಂಡಿದ್ದು ಹೀಗೆ.</p>.<p>ದಿನಗೂಲಿಯನ್ನು ₹66 ಗಳಿಂದ ₹400ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿರುವ ಅವರು, ತಮ್ಮ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿಯೂ ಹೇಳಿದ್ದಾರೆ. </p>.<p>‘ಇತರರ ಮಕ್ಕಳಿಗೆ ಅನ್ನ ಬೇಯಿಸಿ ನೀಡುವ ನಾವು, ನಮ್ಮ ಮಕ್ಕಳಿಗೆ ಊಟ ಹಾಕಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದೇವೆ’ ಎಂದು ಹೇಳಿಕೊಂಡಿದ್ದಾರೆ. </p>.<p class="title">ಪ್ರತಿಭಟನಕಾರರ ಪೈಕಿ ಶೇ 95ರಷ್ಟು ಮಹಿಳೆಯರೇ ಇದ್ದಾರೆ. ಇವರಲ್ಲಿ ಹಲವರು ಗ್ರಾಮೀಣ ಪ್ರದೇಶ, ಬುಡಕಟ್ಟು ಪ್ರದೇಶಗಳ ನಿವಾಸಿಗಳಾಗಿದ್ದಾರೆ.</p>.<p>‘ಸರ್ಕಾರಗಳು ಬದಲಾಗುತ್ತಿವೆ. ಆದರೆ, ನಮ್ಮ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ದಿನವೂ ಬರೀ ₹66 ದಿನಗೂಲಿಯಲ್ಲಿ ನಾವು ಹೇಗೆ ಜೀವಿಸಬೇಕು ? ಸರ್ಕಾರ ಏಕೆ ನಮ್ಮ ಬದುಕಿನ ಜತೆ ಆಟವಾಡುತ್ತಿದೆ’ ಎಂದು ಸವಿತಾ ಮಾಣಿಕಪುರಿ (38) ಎನ್ನುವವರು ಪ್ರಶ್ನಿಸಿದ್ದಾರೆ. </p>.<p>ಮೇಘರಾಜ್ ಬಘೇಲ್ (45) ಎಂಬವರು ಮಾತನಾಡಿ, ‘ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅಡಿಯಲ್ಲಿ 87 ಸಾವಿರ ಬಿಸಿಯೂಟ ಕಾರ್ಮಿಕರು ಕೆಲಸ ಮಾಡುತ್ತಿದ್ದೇವೆ. 1995ರಲ್ಲಿ ಯೋಜನೆ ಪ್ರಾರಂಭವಾದಾಗ ಪ್ರತಿದಿನ ಕೇವಲ ₹15 ದಿನಗೂಲಿ ಪಡೆದು ಕೆಲಸ ಮಾಡುತ್ತಿದ್ದೆವು. ಈಗ 30 ವರ್ಷದ ಬಳಿಕವೂ ನಮ್ಮ ದಿನಗೂಲಿ ₹66 ಆಗಿದೆ. ರಾಜ್ಯ ಸರ್ಕಾರವು ಬಿಸಿಯೂಟ ಕಾರ್ಮಿಕರಿಗಾಗಿ ಏನೂ ಕೆಲಸ ಮಾಡಿಲ್ಲ. ನಮ್ಮ ದಿನಗೂಲಿ ₹440ಕ್ಕೆ ಹೆಚ್ಚಿಸಲಿ’ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>