ಘಟನಾ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದಾಗಲೇ ಅವರು ಕಲ್ಲು ಮತ್ತು ಬಡಿಗೆಯಿಂದ ದಾಳಿ ನಡೆಸಿದರು. ಆರೋಪಿ ಮೊಹಮ್ಮದ್ ಆರಿಫ್ ಮೊದಲು ಗುಂಡು ಹಾರಿಸಿದ. ಮೊದಲಿಗೆ ಸಂಯಮ ತೋರಿದ ಪೊಲೀಸರು, ಶರಣಾಗುವಂತೆ ಆರೋಪಿಗಳಿಗೆ ಹೇಳಿದರು. ಆದರೆ, ‘ಅನ್ಲಾಕ್’ ಮಾಡಿರಿಸಿದ್ದ ಬಂದೂಕನ್ನು ಕಸಿದುಕೊಂಡು ಆರೋಪಿಗಳು ಗುಂಡು ಹಾರಿಸಿದರು ಎಂದು ಸೈಬರಾ ಬಾದ್ಪೊಲೀಸ್ ಆಯುಕ್ತ ಸಿ.ವಿ. ಸಜ್ಜನರ್ ಹೇಳಿದ್ದಾರೆ.