ಅಧೀರ್ ರಂಜನ್ ಅವರು ತಾರತಮ್ಯದ ವಿಚಾರವನ್ನು ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಿಸಿದರು. ಆದರೆ, ನಿರ್ಮಲಾ ಸೀತಾರಾಮನ್ ಇದನ್ನು ಬಲವಾಗಿ ಅಲ್ಲಗಳೆದರು. ‘ಪಟ್ಟಭದ್ರ ಹಿತಾಸಕ್ತಿಗಳು ಇಂತಹ ರಾಜಕೀಯಪ್ರೇರಿತ ಆರೋಪ ಮಾಡುತ್ತಿವೆ. ಆ ಮೂಲಕ ಸಂತೋಷ ಪಡುತ್ತಿವೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.