ಭುವನೇಶ್ವರ: ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಒಡಿಶಾ ಮೂಲದ ಡಿಸ್ಟಿಲರಿ ಕಂಪನಿಯೊಂದರ ಕಚೇರಿ ಮೇಲೆ ದಾಳಿ ನಡೆಸಿದ್ದು, ಸುಮಾರು ₹ 30 ಕೋಟಿಯಿಂದ 50 ಕೋಟಿ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.
ಬುಧವಾರ ದಾಳಿ ನಡೆಸಲಾಗಿದೆ. ನಿಖರವಾದ ಮೊತ್ತ ಗೊತ್ತಾಗಿಲ್ಲ. ಯಂತ್ರದ ಮೂಲಕ ಹಣ ಎಣಿಕೆ ಮಾಡಲಾಗುತ್ತಿದೆ. ಭುವನೇಶ್ವರ, ಬೊಲಾಂಗಿರ್, ಸಂಬಾಲ್ಪುರ್, ರಾಂಚಿ ಹಾಗೂ ಕೋಲ್ಕತ್ತದಲ್ಲಿ ದಾಳಿ ನಡೆದಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.