ಸಂಪುಟ ಸಭೆಯಲ್ಲಿ ವಿದಾಯ ಭಾಷಣ ಮಾಡಿದ್ದ ಅವರು, ‘ಉದ್ದೇಶವಿಲ್ಲದೇ ಯಾರಿಗಾದರೂ ನೋವುಂಟು ಮಾಡಿದ್ದರೆ ನನ್ನನ್ನು ಕ್ಷಮಿಸಿ’ ಎಂದು ಸಹೋದ್ಯೋಗಿಗಳಲ್ಲಿ ಕೇಳಿಕೊಂಡರು ಎಂದು ಮೂಲಗಳು ತಿಳಿಸಿವೆ. ಎರಡೂವರೆ ವರ್ಷಗಳ ಕಾಲ ಸಹಕಾರ ನೀಡಿದ ಸಂಪುಟ ಸದಸ್ಯರಿಗೆ
ಠಾಕ್ರೆ ಧನ್ಯವಾದ ಹೇಳಿದರು. ಉದ್ಧವ್ ಮಾತನಾಡಿದ ಬಳಿಕ ಸಚಿವರು ಚಪ್ಪಾಳೆ ತಟ್ಟಿದರು ಎಂದು ಮೂಲಗಳು ತಿಳಿಸಿವೆ.