<p>ರಾಜ್ಯ, ದೇಶ, ವಿದೇಶಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p>ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತದ ಬೌಲರ್ಗಳು ತೋರಿದ ಸಂಘಟಿತ ಪ್ರದರ್ಶನ ಎದುರು ಕಂಗೆಟ್ಟ ಪಾಕಿಸ್ತಾನ ತಂಡ 191 ರನ್ಗಳಿಗೆ ಆಲೌಟ್ ಆಗಿದೆ.</p><p><strong>ಪೂರ್ತಿ ಓದಲು:</strong> <a href="https://www.prajavani.net/sports/world-cup/icc-odi-world-cup-2023-ind-vs-pak-batting-collapses-pakistan-all-out-for-191-runs-2521108">IND vs PAK | ಮಧ್ಯಮ ಕ್ರಮಾಂಕದ ಕುಸಿತ; ಭಾರತಕ್ಕೆ 192 ರನ್ ಗುರಿ ನೀಡಿದ ಪಾಕ್</a></p>.<p>ಇಸ್ರೇಲ್ನಿಂದ ಹೊರಟ 235 ಭಾರತೀಯರನ್ನು ಹೊತ್ತ ಎರಡನೇ ವಿಮಾನ ಇಂದು ಬೆಳಿಗ್ಗೆ ನವದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.</p><p><strong>ಪೂರ್ತಿ ಓದಲು: </strong><a href="https://www.prajavani.net/news/india-news/operation-ajay-second-batch-of-235-indian-nationals-who-were-safely-evacuated-from-israel-on-friday-arrives-at-delhi-airport-2520946">ದೆಹಲಿಗೆ ಬಂದಿಳಿದ ಇಸ್ರೇಲ್ನಿಂದ 235 ಭಾರತೀಯರನ್ನು ಹೊತ್ತ ಎರಡನೇ ವಿಮಾನ</a></p>.<p>ಮದ್ಯದ ಅಂಗಡಿ ಆರಂಭಕ್ಕೆ ಪರವಾನಗಿ ಕೊಡಲು ಲಂಚ ಪಡೆಯುತ್ತಿರುವಾಗ ಅಬಕಾರಿ ಡಿ.ಸಿ. ಸೇರಿದಂತೆ ನಾಲ್ವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.</p><p><strong>ಪೂರ್ತಿ ಓದಲು: </strong><a href="https://www.prajavani.net/news/karnataka-news/exersise-dc-and-four-other-staff-arrested-by-lokayukta-while-taking-bribe-2521244">ಮದ್ಯದಂಗಡಿ ಪರವಾನಗಿಗೆ ಲಂಚ: ಅಬಕಾರಿ ಡಿ.ಸಿ. ಸೇರಿ ನಾಲ್ವರು ಲೋಕಾಯುಕ್ತ ಬಲೆಗೆ</a></p>.<p>ಇಸ್ರೇಲ್ ಮೇಲೆ ದಾಳಿ ಮಾಡಿ ಸಾವಿರಾರು ಜನರ ಸಾವಿಗೆ ಕಾರಣವಾದ ಹಮಾಸ್ ಬಂಡುಕೋರರು ಅಲ್ ಖೈದಾಕ್ಕಿಂತ ದುಷ್ಟರು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.</p><p><strong>ಪೂರ್ತಿ ಓದಲು: </strong><a href="https://www.prajavani.net/news/world-news/israel-palestine-war-joe-biden-slams-hamas-and-says-they-make-al-qaeda-look-pure-2520956">ಹಮಾಸ್ ಬಂಡುಕೋರರು ಅಲ್ ಖೈದಾಗಿಂತ ಕ್ರೂರಿಗಳು: ಜೋ ಬೈಡನ್</a></p>.<p>ಉತ್ತರ ಗಾಜಾದಲ್ಲಿರುವ 10 ಲಕ್ಷಕ್ಕೂ ಅಧಿಕ ಜನರು 24 ತಾಸಿನೊಳಗೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲ್ ನೀಡಿದ ಎಚ್ಚರಿಕೆಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.</p><p><strong>ಪೂರ್ತಿ ಓದಲು: </strong><a href="https://www.prajavani.net/news/world-news/isreals-relocation-order-extremely-dangerous-un-chief-guterres-2520960">ಗಾಜಾ: 24 ತಾಸಿನಲ್ಲಿ ಸ್ಥಳಾಂತರಕ್ಕೆ ಇಸ್ರೇಲ್ ಎಚ್ಚರಿಕೆ; ವಿಶ್ವಸಂಸ್ಥೆ ಕಳವಳ</a></p>.<p>'ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ತಕ್ಷಣ ಅದಕ್ಕೆ ಕಡಿವಾಣ ಹಾಕಬೇಕು' ಎಂದು ರಾಜ್ಯ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.</p><p><strong>ಪೂರ್ತಿ ಓದಲು:<a href="https://www.prajavani.net/news/karnataka-news/contractors-association-kempanna-urge-to-curb-corruption-2521031"> </a></strong><a href="https://www.prajavani.net/news/karnataka-news/contractors-association-kempanna-urge-to-curb-corruption-2521031">ಭ್ರಷ್ಟಾಚಾರ ನಿಗ್ರಹ ಅಗತ್ಯ: ಮುಖ್ಯಮಂತ್ರಿಗೆ ಗುತ್ತಿಗೆದಾರರ ಸಂಘದ ಆಗ್ರಹ</a></p>.<p>ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್ ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಶನಿವಾರ ಸರಣಿ ಅಪಘಾತವಾಗಿದ್ದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರು ಸೇರಿ ನಾಲ್ಕು ಕಾರು ಜಖಂಗೊಂಡಿವೆ, ಒಂದು ಕಾರು ಹೊತ್ತಿ ಉರಿದಿದೆ.</p><p><strong>ಪೂರ್ತಿ ಓದಲು: <a href="https://www.prajavani.net/district/mandya/serial-accident-in-mysore-bangalore-highway-car-burnt-sp-car-damage-2521033">ಬೆಂಗಳೂರು-ಮೈಸೂರು ಹೆದ್ದಾರಿ | ಸರಣಿ ಅಪಘಾತ: ಹೊತ್ತಿ ಉರಿದ ಕಾರು, SP ಕಾರು ಜಖಂ</a></strong></p>.<p>ದಸರಾ ಕಾರ್ಯಕ್ರಮದಲ್ಲಿ ಅವಕಾಶ ಒದಗಿಸಿ, ಹಣ ಬಿಡುಗಡೆ ಮಾಡಿಸಲು ಅಧಿಕಾರಿಗಳು ಕಮಿಷನ್ ಕೇಳಿದ ಆರೋಪ ಕುರಿತಂತೆ ಸ್ಪಷ್ಟನೆ ನೀಡಿರುವ ಸರೋದ್ ವಾದಕ ಪಂ. ರಾಜೀವ ತಾರಾನಾಥ್ ಅವರು, ‘ಯಾವ ಅಧಿಕಾರಿಯೂ ನನ್ನ ಬಳಿ ಬಂದಿಲ್ಲ’ ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.</p><p><strong>ಪೂರ್ತಿ ಓದಲು: </strong><a href="https://www.prajavani.net/news/karnataka-news/no-officer-meet-and-ask-for-commission-said-pt-rajeev-taranath-2521036">ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ: ಪಂ. ರಾಜೀವ ತಾರಾನಾಥ ಸ್ಪಷ್ಟನೆ</a></p>.<p>‘ಕೆ. ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಸರ್ಕಾರವು ಯುವಜನರ ಕನಸುಗಳು ಮತ್ತು ಆಶೋತ್ತರಗಳನ್ನು ಕೊಂದಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.</p><p><strong>ಪೂರ್ತಿ ಓದಲು: </strong><a href="https://www.prajavani.net/news/india-news/murder-of-dreams-aspirations-of-youths-rahul-slams-brs-govt-over-woman-job-aspirants-suicide-in-telangana-2521075">ಯುವಜನರ ಕನಸುಗಳನ್ನು ಬಿಆರ್ಎಸ್ ಕೊಂದಿದೆ: ರಾಹುಲ್ ಗಾಂಧಿ</a></p>.<p>ಗುತ್ತಿಗೆದಾರ ಮತ್ತು ಅವರ ಸಂಬಂಧಿಕರ ಮನೆಗಳಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ₹ 42 ಕೋಟಿ ನಗದು ಮೂಲದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.</p><p><strong>ಪೂರ್ತಿ ಓದಲು: </strong><a href="https://www.prajavani.net/news/karnataka-news/bjps-basavaraj-bommayi-demand-for-cbi-inquiry-on-huge-cash-siezed-from-contractors-house-2521083">₹ 42 ಕೋಟಿ ವಶ: ಸಿಬಿಐ ತನಿಖೆಗೆ ಬೊಮ್ಮಾಯಿ ಆಗ್ರಹ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ, ದೇಶ, ವಿದೇಶಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p>ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತದ ಬೌಲರ್ಗಳು ತೋರಿದ ಸಂಘಟಿತ ಪ್ರದರ್ಶನ ಎದುರು ಕಂಗೆಟ್ಟ ಪಾಕಿಸ್ತಾನ ತಂಡ 191 ರನ್ಗಳಿಗೆ ಆಲೌಟ್ ಆಗಿದೆ.</p><p><strong>ಪೂರ್ತಿ ಓದಲು:</strong> <a href="https://www.prajavani.net/sports/world-cup/icc-odi-world-cup-2023-ind-vs-pak-batting-collapses-pakistan-all-out-for-191-runs-2521108">IND vs PAK | ಮಧ್ಯಮ ಕ್ರಮಾಂಕದ ಕುಸಿತ; ಭಾರತಕ್ಕೆ 192 ರನ್ ಗುರಿ ನೀಡಿದ ಪಾಕ್</a></p>.<p>ಇಸ್ರೇಲ್ನಿಂದ ಹೊರಟ 235 ಭಾರತೀಯರನ್ನು ಹೊತ್ತ ಎರಡನೇ ವಿಮಾನ ಇಂದು ಬೆಳಿಗ್ಗೆ ನವದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.</p><p><strong>ಪೂರ್ತಿ ಓದಲು: </strong><a href="https://www.prajavani.net/news/india-news/operation-ajay-second-batch-of-235-indian-nationals-who-were-safely-evacuated-from-israel-on-friday-arrives-at-delhi-airport-2520946">ದೆಹಲಿಗೆ ಬಂದಿಳಿದ ಇಸ್ರೇಲ್ನಿಂದ 235 ಭಾರತೀಯರನ್ನು ಹೊತ್ತ ಎರಡನೇ ವಿಮಾನ</a></p>.<p>ಮದ್ಯದ ಅಂಗಡಿ ಆರಂಭಕ್ಕೆ ಪರವಾನಗಿ ಕೊಡಲು ಲಂಚ ಪಡೆಯುತ್ತಿರುವಾಗ ಅಬಕಾರಿ ಡಿ.ಸಿ. ಸೇರಿದಂತೆ ನಾಲ್ವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.</p><p><strong>ಪೂರ್ತಿ ಓದಲು: </strong><a href="https://www.prajavani.net/news/karnataka-news/exersise-dc-and-four-other-staff-arrested-by-lokayukta-while-taking-bribe-2521244">ಮದ್ಯದಂಗಡಿ ಪರವಾನಗಿಗೆ ಲಂಚ: ಅಬಕಾರಿ ಡಿ.ಸಿ. ಸೇರಿ ನಾಲ್ವರು ಲೋಕಾಯುಕ್ತ ಬಲೆಗೆ</a></p>.<p>ಇಸ್ರೇಲ್ ಮೇಲೆ ದಾಳಿ ಮಾಡಿ ಸಾವಿರಾರು ಜನರ ಸಾವಿಗೆ ಕಾರಣವಾದ ಹಮಾಸ್ ಬಂಡುಕೋರರು ಅಲ್ ಖೈದಾಕ್ಕಿಂತ ದುಷ್ಟರು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.</p><p><strong>ಪೂರ್ತಿ ಓದಲು: </strong><a href="https://www.prajavani.net/news/world-news/israel-palestine-war-joe-biden-slams-hamas-and-says-they-make-al-qaeda-look-pure-2520956">ಹಮಾಸ್ ಬಂಡುಕೋರರು ಅಲ್ ಖೈದಾಗಿಂತ ಕ್ರೂರಿಗಳು: ಜೋ ಬೈಡನ್</a></p>.<p>ಉತ್ತರ ಗಾಜಾದಲ್ಲಿರುವ 10 ಲಕ್ಷಕ್ಕೂ ಅಧಿಕ ಜನರು 24 ತಾಸಿನೊಳಗೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲ್ ನೀಡಿದ ಎಚ್ಚರಿಕೆಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.</p><p><strong>ಪೂರ್ತಿ ಓದಲು: </strong><a href="https://www.prajavani.net/news/world-news/isreals-relocation-order-extremely-dangerous-un-chief-guterres-2520960">ಗಾಜಾ: 24 ತಾಸಿನಲ್ಲಿ ಸ್ಥಳಾಂತರಕ್ಕೆ ಇಸ್ರೇಲ್ ಎಚ್ಚರಿಕೆ; ವಿಶ್ವಸಂಸ್ಥೆ ಕಳವಳ</a></p>.<p>'ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ತಕ್ಷಣ ಅದಕ್ಕೆ ಕಡಿವಾಣ ಹಾಕಬೇಕು' ಎಂದು ರಾಜ್ಯ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.</p><p><strong>ಪೂರ್ತಿ ಓದಲು:<a href="https://www.prajavani.net/news/karnataka-news/contractors-association-kempanna-urge-to-curb-corruption-2521031"> </a></strong><a href="https://www.prajavani.net/news/karnataka-news/contractors-association-kempanna-urge-to-curb-corruption-2521031">ಭ್ರಷ್ಟಾಚಾರ ನಿಗ್ರಹ ಅಗತ್ಯ: ಮುಖ್ಯಮಂತ್ರಿಗೆ ಗುತ್ತಿಗೆದಾರರ ಸಂಘದ ಆಗ್ರಹ</a></p>.<p>ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್ ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಶನಿವಾರ ಸರಣಿ ಅಪಘಾತವಾಗಿದ್ದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರು ಸೇರಿ ನಾಲ್ಕು ಕಾರು ಜಖಂಗೊಂಡಿವೆ, ಒಂದು ಕಾರು ಹೊತ್ತಿ ಉರಿದಿದೆ.</p><p><strong>ಪೂರ್ತಿ ಓದಲು: <a href="https://www.prajavani.net/district/mandya/serial-accident-in-mysore-bangalore-highway-car-burnt-sp-car-damage-2521033">ಬೆಂಗಳೂರು-ಮೈಸೂರು ಹೆದ್ದಾರಿ | ಸರಣಿ ಅಪಘಾತ: ಹೊತ್ತಿ ಉರಿದ ಕಾರು, SP ಕಾರು ಜಖಂ</a></strong></p>.<p>ದಸರಾ ಕಾರ್ಯಕ್ರಮದಲ್ಲಿ ಅವಕಾಶ ಒದಗಿಸಿ, ಹಣ ಬಿಡುಗಡೆ ಮಾಡಿಸಲು ಅಧಿಕಾರಿಗಳು ಕಮಿಷನ್ ಕೇಳಿದ ಆರೋಪ ಕುರಿತಂತೆ ಸ್ಪಷ್ಟನೆ ನೀಡಿರುವ ಸರೋದ್ ವಾದಕ ಪಂ. ರಾಜೀವ ತಾರಾನಾಥ್ ಅವರು, ‘ಯಾವ ಅಧಿಕಾರಿಯೂ ನನ್ನ ಬಳಿ ಬಂದಿಲ್ಲ’ ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.</p><p><strong>ಪೂರ್ತಿ ಓದಲು: </strong><a href="https://www.prajavani.net/news/karnataka-news/no-officer-meet-and-ask-for-commission-said-pt-rajeev-taranath-2521036">ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ: ಪಂ. ರಾಜೀವ ತಾರಾನಾಥ ಸ್ಪಷ್ಟನೆ</a></p>.<p>‘ಕೆ. ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಸರ್ಕಾರವು ಯುವಜನರ ಕನಸುಗಳು ಮತ್ತು ಆಶೋತ್ತರಗಳನ್ನು ಕೊಂದಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.</p><p><strong>ಪೂರ್ತಿ ಓದಲು: </strong><a href="https://www.prajavani.net/news/india-news/murder-of-dreams-aspirations-of-youths-rahul-slams-brs-govt-over-woman-job-aspirants-suicide-in-telangana-2521075">ಯುವಜನರ ಕನಸುಗಳನ್ನು ಬಿಆರ್ಎಸ್ ಕೊಂದಿದೆ: ರಾಹುಲ್ ಗಾಂಧಿ</a></p>.<p>ಗುತ್ತಿಗೆದಾರ ಮತ್ತು ಅವರ ಸಂಬಂಧಿಕರ ಮನೆಗಳಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ₹ 42 ಕೋಟಿ ನಗದು ಮೂಲದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.</p><p><strong>ಪೂರ್ತಿ ಓದಲು: </strong><a href="https://www.prajavani.net/news/karnataka-news/bjps-basavaraj-bommayi-demand-for-cbi-inquiry-on-huge-cash-siezed-from-contractors-house-2521083">₹ 42 ಕೋಟಿ ವಶ: ಸಿಬಿಐ ತನಿಖೆಗೆ ಬೊಮ್ಮಾಯಿ ಆಗ್ರಹ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>