ನವದೆಹಲಿ: ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯು (ಐಸಿಸಿಆರ್) ಸೆಪ್ಟೆಂಬರ್ 17ರಂದು ಆಯೋಜಿಸಿರುವ ಅಂತರರಾಷ್ಟ್ರೀಯರಾಮಾಯಣ ಉತ್ಸವವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಉದ್ಘಾಟಿಸಲಿದ್ದಾರೆ.
ದೆಹಲಿ ಮಾತ್ರವಲ್ಲದೆ ಲಖನೌ, ಅಯೋಧ್ಯಾ ಹಾಗೂ ಪುಣೆಯಲ್ಲಿಯೂಆಯೋಜನೆಗೊಂಡಿರುವ ಈ ಉತ್ಸವವು ಮೂರು ದಿನಗಳ ಕಾಲ(ಸೆ.17,18,19) ನಡೆಯಲಿದೆ.
ಈ ವೇಳೆ ಥಾಯ್ಲೆಂಡ್, ಟ್ರಿನಿಡಾಡ್ ಅಂಡ್ ಟೊಬಾಗೊ, ಇಂಡೋನೇಷ್ಯಾ, ಕಾಂಬೋಡಿಯಾ, ಶ್ರೀಲಂಕಾ, ಮಾರಿಷಸ್, ಬಾಂಗ್ಲಾದೇಶ ಹಾಗೂ ಫಿಜಿ ದೇಶದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.