<p><strong>ಕೋಲ್ಕತ್ತ</strong>: ಬಿಹಾರದ ಬಾಗಲ್ಪುರ ಜಿಲ್ಲೆಯಲ್ಲಿ ಕಾನೂನುಬಾಹಿರ ಬಂದೂಕು ತಯಾರಿಕಾ ಕಾರ್ಖಾನೆಯನ್ನು ಭೇದಿಸಲಾಗಿದ್ದು, ಈ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತ ಪೊಲೀಸರು ಬುಧವಾರ ಹೇಳಿದ್ದಾರೆ.</p>.<p>ಸುಳಿವಿನ ಮೇರೆಗೆ ಕೋಲ್ಕತ್ತ ಪೊಲೀಸ್ ಎಸ್ಟಿಎಫ್ ಮತ್ತು ಬಿಹಾರ ಪೊಲೀಸರ ಜಂಟಿ ತಂಡವು, ಸೋಮವಾರ ಸಂಜೆ ಇಲ್ಲಿನ ಮಧುಸೂದನಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಹಮತ್ಬಾಗ್ ಗ್ರಾಮದ ಮನೆಯೊಂದರ ಮೇಲೆ ಕಾರ್ಯಾಚರಣೆ ಮಾಡಿ ಕಾರ್ಖಾನೆಯನ್ನು ಪತ್ತೆಹಚ್ಚಿದ್ದಾರೆ ಎಂದು ಹೇಳಿಕೆಯೊಂದು ತಿಳಿಸಿದೆ.</p>.<p>ಮನೆಯ ಮೊದಲ ಮಹಡಿಯಲ್ಲಿ ಕಾರ್ಖಾನೆ ಇದ್ದು, ಅದನ್ನು ಮರೆಮಾಚಲು ಕೆಳಗಿನ ಮಹಡಿಯಲ್ಲಿ ನೂಲಿನ ಗಿರಣಿಯನ್ನು ಸ್ಥಾಪಿಸಲಾಗಿತ್ತು.</p>.<p>‘ಘಟಕದ ಸಹ–ಮಾಲೀಕ ಮತ್ತು ನಾಲ್ವರು ನುರಿತ ಬಂದೂಕು ತಯಾರಕರನ್ನು ಕಾರ್ಯಾಚರಣೆಯ ವೇಳೆ ಬಂಧಿಸಲಾಗಿದೆ. ಈ ವೇಳೆ ಅರೆ ಸಿದ್ಧವಾದ 20 ನಾಡ ಪಿಸ್ತೂಲ್ಗಳು, 8 ಪಿಸ್ತೂಲ್ ಬ್ಯಾರೆಲ್ಗಳು, ಭಾರಿ ಪ್ರಮಾಣದ ಯಂತ್ರೋಪಕರಣಗಳು ಮತ್ತು ಕಚ್ಛಾವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿಕೆ ತಿಳಿಸಿದೆ.</p>.<p>ಬಂಧಿತರೆಲ್ಲರೂ ಮುಂಗೆರ್ ಜಿಲ್ಲೆಯ ಕಾಶಿಂಬಜಾರ್ ಪೊಲೀಸ್ ವ್ಯಾಪ್ತಿಯ ನಿವಾಸಿಗಳಾಗಿದ್ದಾರೆ. ಅವರ ಸರಬರಾಜು ಜಾಲ ಮತ್ತು ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ದಂಧೆಯೊಂದಿಗಿನ ಸಂಭಾವ್ಯ ಸಂಪರ್ಕಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಕೋಲ್ಕತ್ತ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಬಿಹಾರದ ಬಾಗಲ್ಪುರ ಜಿಲ್ಲೆಯಲ್ಲಿ ಕಾನೂನುಬಾಹಿರ ಬಂದೂಕು ತಯಾರಿಕಾ ಕಾರ್ಖಾನೆಯನ್ನು ಭೇದಿಸಲಾಗಿದ್ದು, ಈ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತ ಪೊಲೀಸರು ಬುಧವಾರ ಹೇಳಿದ್ದಾರೆ.</p>.<p>ಸುಳಿವಿನ ಮೇರೆಗೆ ಕೋಲ್ಕತ್ತ ಪೊಲೀಸ್ ಎಸ್ಟಿಎಫ್ ಮತ್ತು ಬಿಹಾರ ಪೊಲೀಸರ ಜಂಟಿ ತಂಡವು, ಸೋಮವಾರ ಸಂಜೆ ಇಲ್ಲಿನ ಮಧುಸೂದನಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಹಮತ್ಬಾಗ್ ಗ್ರಾಮದ ಮನೆಯೊಂದರ ಮೇಲೆ ಕಾರ್ಯಾಚರಣೆ ಮಾಡಿ ಕಾರ್ಖಾನೆಯನ್ನು ಪತ್ತೆಹಚ್ಚಿದ್ದಾರೆ ಎಂದು ಹೇಳಿಕೆಯೊಂದು ತಿಳಿಸಿದೆ.</p>.<p>ಮನೆಯ ಮೊದಲ ಮಹಡಿಯಲ್ಲಿ ಕಾರ್ಖಾನೆ ಇದ್ದು, ಅದನ್ನು ಮರೆಮಾಚಲು ಕೆಳಗಿನ ಮಹಡಿಯಲ್ಲಿ ನೂಲಿನ ಗಿರಣಿಯನ್ನು ಸ್ಥಾಪಿಸಲಾಗಿತ್ತು.</p>.<p>‘ಘಟಕದ ಸಹ–ಮಾಲೀಕ ಮತ್ತು ನಾಲ್ವರು ನುರಿತ ಬಂದೂಕು ತಯಾರಕರನ್ನು ಕಾರ್ಯಾಚರಣೆಯ ವೇಳೆ ಬಂಧಿಸಲಾಗಿದೆ. ಈ ವೇಳೆ ಅರೆ ಸಿದ್ಧವಾದ 20 ನಾಡ ಪಿಸ್ತೂಲ್ಗಳು, 8 ಪಿಸ್ತೂಲ್ ಬ್ಯಾರೆಲ್ಗಳು, ಭಾರಿ ಪ್ರಮಾಣದ ಯಂತ್ರೋಪಕರಣಗಳು ಮತ್ತು ಕಚ್ಛಾವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿಕೆ ತಿಳಿಸಿದೆ.</p>.<p>ಬಂಧಿತರೆಲ್ಲರೂ ಮುಂಗೆರ್ ಜಿಲ್ಲೆಯ ಕಾಶಿಂಬಜಾರ್ ಪೊಲೀಸ್ ವ್ಯಾಪ್ತಿಯ ನಿವಾಸಿಗಳಾಗಿದ್ದಾರೆ. ಅವರ ಸರಬರಾಜು ಜಾಲ ಮತ್ತು ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ದಂಧೆಯೊಂದಿಗಿನ ಸಂಭಾವ್ಯ ಸಂಪರ್ಕಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಕೋಲ್ಕತ್ತ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>