<p><strong>ನವದೆಹಲಿ:</strong> ಇಂಡಿಯಾವನ್ನು ಭಾರತ ಅಥವಾ ಹಿಂದೂಸ್ತಾನ ಎಂದು ಮರುನಾಮಕರಣ ಮಾಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಆದರೆ, ಈ ಅರ್ಜಿಯನ್ನು ಕೇಂದ್ರ ಸರ್ಕಾರಕ್ಕೆ ಪ್ರಾತಿನಿಧ್ಯವಾಗಿ ಕಳುಹಿಸಬಹುದು ಎಂದು ಹೇಳಿದೆ.</p>.<p>‘ನಾವು ಮರುನಾಮಕರಣ ಮಾಡಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಈಗಾಗಲೇ ಭಾರತ ಎಂದು ನಮೂದಿಸಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬಡೆ, ನ್ಯಾಯಮೂರ್ತಿ ಎ.ಎಸ್. ಬೊಪ್ಪಣ್ಣ ಹಾಗೂ ರಿಷಿಕೇಷ್ ರಾಯ್ ತ್ರಿಸದಸ್ಯ ಪೀಠ ಹೇಳಿದೆ. ‘ನೀವು ಯಾಕೆ ನ್ಯಾಯಾಲಯಕ್ಕೆ ಈ ವಿಷಯವನ್ನು ತಂದಿರಿ’ ಎಂದು ಅರ್ಜಿದಾರಿಗೆ ನ್ಯಾಯಾಲಯ ಕೇಳಿತು.</p>.<p>ಮರುನಾಮಕರಣದ ಕುರಿತು, ಸಂವಿಧಾನದ ಮೊದಲ ಆರ್ಕಿಕಲ್ಗೆ ತಿದ್ದುಪಡಿ ತರಬೇಕು ಎಂದು ಕೋರಿ ಅರ್ಜಿದಾರ ನಮ್ಹ ಅವರ ವಕೀಲ ಅಶ್ವಿನ್ ವೈಶ್ ಕೋರಿದರು.</p>.<p>ಸಂವಿಧಾನ ಸಭೆ ಚರ್ಚೆ ವೇಳೆಯಲ್ಲೂ ಇಂಡಿಯಾ ಪದವನ್ನು ಬಳಸಿರಲಿಲ್ಲ. ಇಂಡಿಯಾ ಹೆಸರು ಗ್ರೀಕ್ನ ‘ಇಂಡಿಕಾ’ ಪದದಿಂದ ತೆಗೆದುಕೊಳ್ಳಲಾಗಿದೆ. ಈ ಹೆಸರು ಈ ದೇಶದಲ್ಲಿ ಹೆಟ್ಟಿದ್ದಲ್ಲ.ಜತೆಗೆ, ಇತಿಹಾಸದ ತುಂಬೆಲ್ಲಾ ‘ಭಾರತ ಮಾತಾಕಿ ಜೈ’ ಎಂದೇ ಉಪಯೋಗಿಸಲಾಗಿದೆ ಎಂದು ವಕೀಲ ಅಶ್ವಿನ್ ವಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಇಂಡಿಯಾವನ್ನು ಭಾರತ ಅಥವಾ ಹಿಂದೂಸ್ತಾನ ಎಂದು ಮರುನಾಮಕರಣ ಮಾಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಆದರೆ, ಈ ಅರ್ಜಿಯನ್ನು ಕೇಂದ್ರ ಸರ್ಕಾರಕ್ಕೆ ಪ್ರಾತಿನಿಧ್ಯವಾಗಿ ಕಳುಹಿಸಬಹುದು ಎಂದು ಹೇಳಿದೆ.</p>.<p>‘ನಾವು ಮರುನಾಮಕರಣ ಮಾಡಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಈಗಾಗಲೇ ಭಾರತ ಎಂದು ನಮೂದಿಸಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬಡೆ, ನ್ಯಾಯಮೂರ್ತಿ ಎ.ಎಸ್. ಬೊಪ್ಪಣ್ಣ ಹಾಗೂ ರಿಷಿಕೇಷ್ ರಾಯ್ ತ್ರಿಸದಸ್ಯ ಪೀಠ ಹೇಳಿದೆ. ‘ನೀವು ಯಾಕೆ ನ್ಯಾಯಾಲಯಕ್ಕೆ ಈ ವಿಷಯವನ್ನು ತಂದಿರಿ’ ಎಂದು ಅರ್ಜಿದಾರಿಗೆ ನ್ಯಾಯಾಲಯ ಕೇಳಿತು.</p>.<p>ಮರುನಾಮಕರಣದ ಕುರಿತು, ಸಂವಿಧಾನದ ಮೊದಲ ಆರ್ಕಿಕಲ್ಗೆ ತಿದ್ದುಪಡಿ ತರಬೇಕು ಎಂದು ಕೋರಿ ಅರ್ಜಿದಾರ ನಮ್ಹ ಅವರ ವಕೀಲ ಅಶ್ವಿನ್ ವೈಶ್ ಕೋರಿದರು.</p>.<p>ಸಂವಿಧಾನ ಸಭೆ ಚರ್ಚೆ ವೇಳೆಯಲ್ಲೂ ಇಂಡಿಯಾ ಪದವನ್ನು ಬಳಸಿರಲಿಲ್ಲ. ಇಂಡಿಯಾ ಹೆಸರು ಗ್ರೀಕ್ನ ‘ಇಂಡಿಕಾ’ ಪದದಿಂದ ತೆಗೆದುಕೊಳ್ಳಲಾಗಿದೆ. ಈ ಹೆಸರು ಈ ದೇಶದಲ್ಲಿ ಹೆಟ್ಟಿದ್ದಲ್ಲ.ಜತೆಗೆ, ಇತಿಹಾಸದ ತುಂಬೆಲ್ಲಾ ‘ಭಾರತ ಮಾತಾಕಿ ಜೈ’ ಎಂದೇ ಉಪಯೋಗಿಸಲಾಗಿದೆ ಎಂದು ವಕೀಲ ಅಶ್ವಿನ್ ವಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>