<blockquote>ಮುಖ್ಯಾಂಶಗಳು * ಬಾಂಗ್ಲಾದೇಶದ ನಡೆಯ ಬೆನ್ನಲ್ಲೇ ಭಾರತ ಸಮನ್ಸ್ * ಎಲ್ಲ ಒಪ್ಪಂದಗಳನ್ನು ಬಾಂಗ್ಲಾ ಜಾರಿಗೆ ತರುತ್ತದೆ ಎಂಬ ನಿರೀಕ್ಷೆಯಿದೆ * ಅಪರಾಧ ಮುಕ್ತ ಗಡಿಗೆ ಭಾರತ ಬದ್ಧ</blockquote>.<p><strong>ನವದೆಹಲಿ:</strong> ಬಾಂಗ್ಲಾದೇಶದ ಹಿರಿಯ ರಾಯಭಾರಿ, ಹಂಗಾಮಿ ಹೈಕಮಿಷನರ್ ನೂರುಲ್ ಇಸ್ಲಾಂ ಅವರನ್ನು ಸೋಮವಾರ ಕರೆಸಿದ ಭಾರತವು, ಉಭಯ ದೇಶಗಳ ನಡುವಿನ ಗಡಿಯಲ್ಲಿನ ಬೇಲಿ ನಿರ್ಮಿಸುವ ಕಾರ್ಯದಲ್ಲಿ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸಿದೆ.</p>.<p>ಗಡಿ ಭದ್ರತಾ ಪಡೆಯ ಚಟುವಟಿಕೆಗಳ ಬಗ್ಗೆ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಭಾನುವಾರ ಭಾರತದ ರಾಯಭಾರಿ ಪ್ರಣಯ್ ವರ್ಮಾ ಅವರನ್ನು ಕಚೇರಿಗೆ ಕರೆಸಿ ಕಳವಳ ವ್ಯಕ್ತಪಡಿಸಿತ್ತು. ಇದಾದ ಒಂದು ದಿನದ ಬಳಿಕ ಭಾರತವು ಬಾಂಗ್ಲಾದ ಹೈಕಮಿಷನರ್ಗೆ ಸಮನ್ಸ್ ಜಾರಿ ಮಾಡಿ ಕರೆಸಿಕೊಂಡಿತ್ತು.</p>.<p>ಗಡಿ ಭದ್ರತಾ ವಿಷಯದಲ್ಲಿ ಎರಡೂ ದೇಶಗಳ ಸರ್ಕಾರಗಳ ನಡವಿನ ಒಪ್ಪಂದಗಳು ಮತ್ತು ನಿಯಮಗಳನ್ನು ಭಾರತ ಗಮನಿಸಿದೆ ಎಂಬ ವಿಚಾರವನ್ನು ನೂರುಲ್ ಇಸ್ಲಾಂ ಅವರಿಗೆ ಮನವರಿಕೆ ಮಾಡಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. </p>.<p>ಅಂತೆಯೇ ಗಡಿಯಾಚೆಗಿನ ಅಪರಾಧಗಳ ನಿಯಂತ್ರಣ ಸೇರಿದಂತೆ ಹಿಂದಿನ ಎಲ್ಲ ಒಪ್ಪಂದಗಳನ್ನು ಬಾಂಗ್ಲಾದೇಶ ಸರ್ಕಾರವು ಸಹಕಾರಿ ವಿಧಾನದೊಂದಿಗೆ ಜಾರಿಗೆ ತರುತ್ತದೆ ಎಂಬ ನಿರೀಕ್ಷೆಯಿದೆ ಎಂಬುದನ್ನೂ ಹೈಕಮಿಷನರ್ಗೆ ತಿಳಿಸಿರುವುದಾಗಿ ಸಚಿವಾಲಯದ ಪ್ರಕಟಣೆ ಹೇಳಿದೆ.</p>.<p>‘ಗಡಿಯಾಚೆಗಿನ ಅಪರಾಧ ಚಟುವಟಿಕೆಗಳು, ಕಳ್ಳಸಾಗಣೆ, ಅಪರಾಧಿಗಳ ಚಲನವಲನ ಮತ್ತು ಕಳ್ಳಸಾಗಣೆಯ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಮೂಲಕ ಅಪರಾಧ ಮುಕ್ತ ಗಡಿಯನ್ನು ಖಚಿತಪಡಿಸಿಕೊಳ್ಳಲು ಭಾರತ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ’ ಎಂದು ಪ್ರಕಟಣೆ ತಿಳಿಸಿದೆ.</p>.<p>ಮುಳ್ಳುತಂತಿ ಬೇಲಿ, ಗಡಿ ದೀಪ, ತಾಂತ್ರಿಕ ಸಾಧನಗಳ ಅಳವಡಿಕೆ ಮತ್ತು ಜಾನುವಾರು ಬೇಲಿಗಳು ಗಡಿಯನ್ನು ಭದ್ರಪಡಿಸುವ ಕ್ರಮಗಳ ಭಾಗವಾಗಿವೆ ಎಂದು ಎಂಇಎ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಮುಖ್ಯಾಂಶಗಳು * ಬಾಂಗ್ಲಾದೇಶದ ನಡೆಯ ಬೆನ್ನಲ್ಲೇ ಭಾರತ ಸಮನ್ಸ್ * ಎಲ್ಲ ಒಪ್ಪಂದಗಳನ್ನು ಬಾಂಗ್ಲಾ ಜಾರಿಗೆ ತರುತ್ತದೆ ಎಂಬ ನಿರೀಕ್ಷೆಯಿದೆ * ಅಪರಾಧ ಮುಕ್ತ ಗಡಿಗೆ ಭಾರತ ಬದ್ಧ</blockquote>.<p><strong>ನವದೆಹಲಿ:</strong> ಬಾಂಗ್ಲಾದೇಶದ ಹಿರಿಯ ರಾಯಭಾರಿ, ಹಂಗಾಮಿ ಹೈಕಮಿಷನರ್ ನೂರುಲ್ ಇಸ್ಲಾಂ ಅವರನ್ನು ಸೋಮವಾರ ಕರೆಸಿದ ಭಾರತವು, ಉಭಯ ದೇಶಗಳ ನಡುವಿನ ಗಡಿಯಲ್ಲಿನ ಬೇಲಿ ನಿರ್ಮಿಸುವ ಕಾರ್ಯದಲ್ಲಿ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸಿದೆ.</p>.<p>ಗಡಿ ಭದ್ರತಾ ಪಡೆಯ ಚಟುವಟಿಕೆಗಳ ಬಗ್ಗೆ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಭಾನುವಾರ ಭಾರತದ ರಾಯಭಾರಿ ಪ್ರಣಯ್ ವರ್ಮಾ ಅವರನ್ನು ಕಚೇರಿಗೆ ಕರೆಸಿ ಕಳವಳ ವ್ಯಕ್ತಪಡಿಸಿತ್ತು. ಇದಾದ ಒಂದು ದಿನದ ಬಳಿಕ ಭಾರತವು ಬಾಂಗ್ಲಾದ ಹೈಕಮಿಷನರ್ಗೆ ಸಮನ್ಸ್ ಜಾರಿ ಮಾಡಿ ಕರೆಸಿಕೊಂಡಿತ್ತು.</p>.<p>ಗಡಿ ಭದ್ರತಾ ವಿಷಯದಲ್ಲಿ ಎರಡೂ ದೇಶಗಳ ಸರ್ಕಾರಗಳ ನಡವಿನ ಒಪ್ಪಂದಗಳು ಮತ್ತು ನಿಯಮಗಳನ್ನು ಭಾರತ ಗಮನಿಸಿದೆ ಎಂಬ ವಿಚಾರವನ್ನು ನೂರುಲ್ ಇಸ್ಲಾಂ ಅವರಿಗೆ ಮನವರಿಕೆ ಮಾಡಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. </p>.<p>ಅಂತೆಯೇ ಗಡಿಯಾಚೆಗಿನ ಅಪರಾಧಗಳ ನಿಯಂತ್ರಣ ಸೇರಿದಂತೆ ಹಿಂದಿನ ಎಲ್ಲ ಒಪ್ಪಂದಗಳನ್ನು ಬಾಂಗ್ಲಾದೇಶ ಸರ್ಕಾರವು ಸಹಕಾರಿ ವಿಧಾನದೊಂದಿಗೆ ಜಾರಿಗೆ ತರುತ್ತದೆ ಎಂಬ ನಿರೀಕ್ಷೆಯಿದೆ ಎಂಬುದನ್ನೂ ಹೈಕಮಿಷನರ್ಗೆ ತಿಳಿಸಿರುವುದಾಗಿ ಸಚಿವಾಲಯದ ಪ್ರಕಟಣೆ ಹೇಳಿದೆ.</p>.<p>‘ಗಡಿಯಾಚೆಗಿನ ಅಪರಾಧ ಚಟುವಟಿಕೆಗಳು, ಕಳ್ಳಸಾಗಣೆ, ಅಪರಾಧಿಗಳ ಚಲನವಲನ ಮತ್ತು ಕಳ್ಳಸಾಗಣೆಯ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಮೂಲಕ ಅಪರಾಧ ಮುಕ್ತ ಗಡಿಯನ್ನು ಖಚಿತಪಡಿಸಿಕೊಳ್ಳಲು ಭಾರತ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ’ ಎಂದು ಪ್ರಕಟಣೆ ತಿಳಿಸಿದೆ.</p>.<p>ಮುಳ್ಳುತಂತಿ ಬೇಲಿ, ಗಡಿ ದೀಪ, ತಾಂತ್ರಿಕ ಸಾಧನಗಳ ಅಳವಡಿಕೆ ಮತ್ತು ಜಾನುವಾರು ಬೇಲಿಗಳು ಗಡಿಯನ್ನು ಭದ್ರಪಡಿಸುವ ಕ್ರಮಗಳ ಭಾಗವಾಗಿವೆ ಎಂದು ಎಂಇಎ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>