ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತೀಯ ನೌಕಾಪಡೆ ನೆರವು: ಅಪಹೃತ ಬಾಂಗ್ಲಾದೇಶ ಹಡಗಿನ ರಕ್ಷಣೆ

Published 15 ಮಾರ್ಚ್ 2024, 16:18 IST
Last Updated 15 ಮಾರ್ಚ್ 2024, 16:18 IST
ಅಕ್ಷರ ಗಾತ್ರ

ನವದೆಹಲಿ: ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ ಬಾಂಗ್ಲದೇಶದ ಸರಕು ಸಾಗನೆ ಹಡಗಿನ ರಕ್ಷಣೆಗೆ ನಡೆದ ಕಾರ್ಯಾಚರಣೆಗೆ ಭಾರತೀಯ ನೌಕಾಪಡೆಯ ಯುದ್ಧನೌಕೆ ಹಾಗೂ ಗಸ್ತು ವಿಮಾನ ನೆರವು ನೀಡಿ, ಗಮನ ಸೆಳೆದಿವೆ.

ಹಿಂದೂಮಹಾಸಾಗರದಲ್ಲಿ ಈ ಹಡಗನ್ನು ಅಪಹರಣ ಮಾಡಲಾಗಿತ್ತು. ಈ ಕಡಲ ಪ್ರದೇಶದಲ್ಲಿ ಅಪಹೃತ ಹಡಗುಗಳ ರಕ್ಷಣೆಗೆ ಭಾರತೀಯ ನೌಕಾಪಡೆಯು ನೆರವಿನ ಹಸ್ತಚಾಚುತ್ತಿದ್ದು, ಈ ಕಾರ್ಯಾಚರಣೆ ತಾಜಾ ನಿದರ್ಶನವಾಗಿದೆ.

ಈ ಹಡಗು ರಕ್ಷಣೆಗೆ ನಡೆಸಿದ ಕಾರ್ಯಾಚರಣೆ ಕುರಿತು ಶುಕ್ರವಾರ ಮಾಹಿತಿ ನೀಡಿರುವ ನೌಕಾಪಡೆ, ಹಡಗಿನಲ್ಲಿರುವ ಎಲ್ಲ ಸಿಬ್ಬಂದಿ (ಬಾಂಗ್ಲದೇಶ ಪ್ರಜೆಗಳು) ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.

ಬಾಂಗ್ಲಾದೇಶಕ್ಕೆ ಸೇರಿದ ಹಡಗು ಮಾರ್ಚ್‌ 12ರಂದು ಅಪಹರಣಗೊಂಡಿತ್ತು. ಈ ಕುರಿತು ಮಾಹಿತಿ ಲಭಿಸುತ್ತಿದ್ದಂತೆಯೇ, ದೀರ್ಘ ವ್ಯಾಪ್ತಿ ಕಡಲ ಗಡಿ ಗಸ್ತು (ಎಲ್‌ಆರ್‌ಎಂಪಿ) ಯುದ್ಧನೌಕೆ ‘ಪಿ–8ಐ’ ಅನ್ನು ನಿಯೋಜಿಸಲಾಯಿತು. ಹಡಗು ಸೋಮಾಲಿಯಾ ಕಡಲ ಗಡಿ ತಲುಪುವವರೆಗೂ, ಅದರ ಸಮೀಪದಲ್ಲಿಯೇ ಸಾಗಿದ ಯುದ್ಧನೌಕೆ ಹಡಗಿನ ಸುರಕ್ಷತೆಯನ್ನು ಖಾತರಿಪಡಿಸಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT