<p><strong>ನವದೆಹಲಿ:</strong> ಮಲೇರಿಯಾ ವಾಸಿ ಮಾಡುವ ಔಷಧಗಳ ವಿರುದ್ಧ ಮಲೇರಿಯಾ ರೋಗಾಣುಗಳು ನಿರೋಧಕ ಶಕ್ತಿ ಪಡೆದುಕೊಂಡಿರುವ ಪ್ರಕರಣ ಇದೇ ಮೊದಲ ಬಾರಿಗೆ ಭಾರತದಲ್ಲಿ ಪತ್ತೆಯಾಗಿದೆ.</p>.<p>ಈ ಮೊದಲು ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಮಾತ್ರ ಇಂತಹ ಪ್ರಕರಣ ಪತ್ತೆಯಾಗಿದ್ದವು.</p>.<p>ಮಲೇರಿಯಾಕ್ಕೆ ಕಾರಣವಾದ ‘ಪ್ಲಾಸ್ಮೋಡಿಯಂ ಫಾಲ್ಸಿಪರಂ’ ಎಂಬ ಪರಾವಲಂಬಿ ಸೂಕ್ಷ್ಮಾಣು ಜೀವಿಗಳು ನಿರೋಧಕ ಶಕ್ತಿ ಗಳಿಸಿರುವುದನ್ನು ಪಶ್ಚಿಮ ಬಂಗಾಳದ ಸಂಶೋಧಕರು ಪತ್ತೆ ಹಚ್ಚಿದ್ದಾರೆ.</p>.<p>ರೋಗಾಣುಗಳ ಪ್ರತಿರೋಧ ಶಕ್ತಿ ಹೆಚ್ಚಿದರೆ ಮಲೇರಿಯಾ ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವುದು ವಿಜ್ಞಾನಿಗಳ ಆತಂಕಕ್ಕೆ ಕಾರಣವಾಗಿದೆ.</p>.<p><strong>ಹೊಸ ಔಷಧ ಅನಿವಾರ್ಯ:</strong> ಮಲೇರಿಯಾ ನಿಯಂತ್ರಣಕ್ಕೆ ಹೊಸ ಔಷಧ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಪಶ್ಚಿಮ ಬಂಗಾಳದ ವಿದ್ಯಾಸಾಗರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಸಂಶೋಧಕ ಸೋಮನಾಥ್ ರಾಯ್ ಸಲಹೆ ಮಾಡಿದ್ದಾರೆ.</p>.<p>ಇದರಿಂದಾಗಿ ಮಲೇರಿಯಾ ನಿವಾರಣೆಗೆ ಸರ್ಕಾರ ರೂಪಿಸಿರುವ ಕಾರ್ಯಕ್ರಮಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.</p>.<p>ರಾಯ್ ಅವರು ಕೋಲ್ಕತ್ತ ಮತ್ತು ಪುಣೆಯ ಸಹೋದ್ಯೋಗಿಗಳ ಜತೆ ಸೇರಿ ಪಶ್ಚಿಮ ಬಂಗಾಳದ ಗಂಗಾ ನದಿ ಸುತ್ತಮುತ್ತಲಿನಲ್ಲಿ ನೆಲೆಸಿರುವ ಮಲೇರಿಯಾ ಸೋಂಕು ತಗುಲಿದ136 ರೋಗಿಗಳ ರಕ್ತಪರೀಕ್ಷೆ ಮಾಡಿದ್ದಾರೆ. ಆ ಪೈಕಿ ಐವರು ರೋಗಿಗಳು ಗುಣಮಟ್ಟದ ಚಿಕಿತ್ಸೆಗೆ ಸ್ಪಂದಿಸಲಿಲ್ಲ.</p>.<p>ಲಂಡನ್ನಿಂದ ಪ್ರಕಟವಾಗುವ ನ್ಯೂ ಇಂಗ್ಲೆಂಡ್ ಅಂತರರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕದ ನವೆಂಬರ್ ಆವೃತ್ತಿಯಲ್ಲಿ ಈ ಸಂಬಂಧದ ವರದಿ ಪ್ರಕಟವಾಗಿದೆ.</p>.<p><strong>ಆಫ್ರಿಕಾ, ಏಷ್ಯಾ ತವರೂರು</strong><br />ಮಲೇರಿಯಾ ರೋಗಾಣುಗಳು ಔಷಧಗಳ ವಿರುದ್ಧ ನಿರೋಧಕ ಶಕ್ತಿ ಪಡೆದಿರುವುದುಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಪತ್ತೆಯಾಗಿದೆ.</p>.<p>ಕಾಂಬೋಡಿಯಾ, ಥಾಯ್ಲೆಂಡ್, ವಿಯೆಟ್ನಾಂ ಮತ್ತು ಮ್ಯಾನ್ಮಾರ್ ಮತ್ತು ಲಾವೋಸ್ನಲ್ಲಿ ಇಂತಹ ಪ್ರಕರಣಗಳು ಐದಾರು ವರ್ಷಗಳ ಹಿಂದೆ ವರದಿಯಾಗಿದ್ದವು. ಆಫ್ರಿಕಾ ರಾಷ್ಟ್ರಗಳನ್ನು ಹೊರತುಪಡಿಸಿದರೆ ದಕ್ಷಿಣ ಏಷ್ಯಾದಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಲೇರಿಯಾ ಪ್ರಕರಣ ವರದಿಯಾಗುತ್ತವೆ ಎಂದು ಕಳೆದ ವರ್ಷದ ವಿಶ್ವ ಮಲೇರಿಯಾ ವರದಿ ಹೇಳಿದೆ.</p>.<p>ಆದರೆ, ಇದುವರೆಗೂ ಭಾರತದಲ್ಲಿ ಮಲೇರಿಯಾ ರೋಗಾಣುಗಳು ಪ್ರತಿರೋಧ ಶಕ್ತಿ ಪಡೆದ ಪ್ರಕರಣ ಪತ್ತೆಯಾಗಿರಲಿಲ್ಲ.</p>.<p>*<br />ಮಲೇರಿಯಾ ರೋಗಾಣುಗಳು ನಿರೋಧಕ ಶಕ್ತಿ ಪಡೆದಿರುವ ವಿಷಯ ನಿಜಕ್ಕೂ ಆತಂಕಕಾರಿ. ವೈದ್ಯಕೀಯ ವಿಜ್ಞಾನಿಗಳು, ವೈದ್ಯರು ಮತ್ತು ಆರೋಗ್ಯ ಸಂಸ್ಥೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.<br /><em><strong>– ಸೋಮನಾಥ್ ರಾಯ್, ಸಂಶೋಧಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮಲೇರಿಯಾ ವಾಸಿ ಮಾಡುವ ಔಷಧಗಳ ವಿರುದ್ಧ ಮಲೇರಿಯಾ ರೋಗಾಣುಗಳು ನಿರೋಧಕ ಶಕ್ತಿ ಪಡೆದುಕೊಂಡಿರುವ ಪ್ರಕರಣ ಇದೇ ಮೊದಲ ಬಾರಿಗೆ ಭಾರತದಲ್ಲಿ ಪತ್ತೆಯಾಗಿದೆ.</p>.<p>ಈ ಮೊದಲು ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಮಾತ್ರ ಇಂತಹ ಪ್ರಕರಣ ಪತ್ತೆಯಾಗಿದ್ದವು.</p>.<p>ಮಲೇರಿಯಾಕ್ಕೆ ಕಾರಣವಾದ ‘ಪ್ಲಾಸ್ಮೋಡಿಯಂ ಫಾಲ್ಸಿಪರಂ’ ಎಂಬ ಪರಾವಲಂಬಿ ಸೂಕ್ಷ್ಮಾಣು ಜೀವಿಗಳು ನಿರೋಧಕ ಶಕ್ತಿ ಗಳಿಸಿರುವುದನ್ನು ಪಶ್ಚಿಮ ಬಂಗಾಳದ ಸಂಶೋಧಕರು ಪತ್ತೆ ಹಚ್ಚಿದ್ದಾರೆ.</p>.<p>ರೋಗಾಣುಗಳ ಪ್ರತಿರೋಧ ಶಕ್ತಿ ಹೆಚ್ಚಿದರೆ ಮಲೇರಿಯಾ ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವುದು ವಿಜ್ಞಾನಿಗಳ ಆತಂಕಕ್ಕೆ ಕಾರಣವಾಗಿದೆ.</p>.<p><strong>ಹೊಸ ಔಷಧ ಅನಿವಾರ್ಯ:</strong> ಮಲೇರಿಯಾ ನಿಯಂತ್ರಣಕ್ಕೆ ಹೊಸ ಔಷಧ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಪಶ್ಚಿಮ ಬಂಗಾಳದ ವಿದ್ಯಾಸಾಗರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಸಂಶೋಧಕ ಸೋಮನಾಥ್ ರಾಯ್ ಸಲಹೆ ಮಾಡಿದ್ದಾರೆ.</p>.<p>ಇದರಿಂದಾಗಿ ಮಲೇರಿಯಾ ನಿವಾರಣೆಗೆ ಸರ್ಕಾರ ರೂಪಿಸಿರುವ ಕಾರ್ಯಕ್ರಮಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.</p>.<p>ರಾಯ್ ಅವರು ಕೋಲ್ಕತ್ತ ಮತ್ತು ಪುಣೆಯ ಸಹೋದ್ಯೋಗಿಗಳ ಜತೆ ಸೇರಿ ಪಶ್ಚಿಮ ಬಂಗಾಳದ ಗಂಗಾ ನದಿ ಸುತ್ತಮುತ್ತಲಿನಲ್ಲಿ ನೆಲೆಸಿರುವ ಮಲೇರಿಯಾ ಸೋಂಕು ತಗುಲಿದ136 ರೋಗಿಗಳ ರಕ್ತಪರೀಕ್ಷೆ ಮಾಡಿದ್ದಾರೆ. ಆ ಪೈಕಿ ಐವರು ರೋಗಿಗಳು ಗುಣಮಟ್ಟದ ಚಿಕಿತ್ಸೆಗೆ ಸ್ಪಂದಿಸಲಿಲ್ಲ.</p>.<p>ಲಂಡನ್ನಿಂದ ಪ್ರಕಟವಾಗುವ ನ್ಯೂ ಇಂಗ್ಲೆಂಡ್ ಅಂತರರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕದ ನವೆಂಬರ್ ಆವೃತ್ತಿಯಲ್ಲಿ ಈ ಸಂಬಂಧದ ವರದಿ ಪ್ರಕಟವಾಗಿದೆ.</p>.<p><strong>ಆಫ್ರಿಕಾ, ಏಷ್ಯಾ ತವರೂರು</strong><br />ಮಲೇರಿಯಾ ರೋಗಾಣುಗಳು ಔಷಧಗಳ ವಿರುದ್ಧ ನಿರೋಧಕ ಶಕ್ತಿ ಪಡೆದಿರುವುದುಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಪತ್ತೆಯಾಗಿದೆ.</p>.<p>ಕಾಂಬೋಡಿಯಾ, ಥಾಯ್ಲೆಂಡ್, ವಿಯೆಟ್ನಾಂ ಮತ್ತು ಮ್ಯಾನ್ಮಾರ್ ಮತ್ತು ಲಾವೋಸ್ನಲ್ಲಿ ಇಂತಹ ಪ್ರಕರಣಗಳು ಐದಾರು ವರ್ಷಗಳ ಹಿಂದೆ ವರದಿಯಾಗಿದ್ದವು. ಆಫ್ರಿಕಾ ರಾಷ್ಟ್ರಗಳನ್ನು ಹೊರತುಪಡಿಸಿದರೆ ದಕ್ಷಿಣ ಏಷ್ಯಾದಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಲೇರಿಯಾ ಪ್ರಕರಣ ವರದಿಯಾಗುತ್ತವೆ ಎಂದು ಕಳೆದ ವರ್ಷದ ವಿಶ್ವ ಮಲೇರಿಯಾ ವರದಿ ಹೇಳಿದೆ.</p>.<p>ಆದರೆ, ಇದುವರೆಗೂ ಭಾರತದಲ್ಲಿ ಮಲೇರಿಯಾ ರೋಗಾಣುಗಳು ಪ್ರತಿರೋಧ ಶಕ್ತಿ ಪಡೆದ ಪ್ರಕರಣ ಪತ್ತೆಯಾಗಿರಲಿಲ್ಲ.</p>.<p>*<br />ಮಲೇರಿಯಾ ರೋಗಾಣುಗಳು ನಿರೋಧಕ ಶಕ್ತಿ ಪಡೆದಿರುವ ವಿಷಯ ನಿಜಕ್ಕೂ ಆತಂಕಕಾರಿ. ವೈದ್ಯಕೀಯ ವಿಜ್ಞಾನಿಗಳು, ವೈದ್ಯರು ಮತ್ತು ಆರೋಗ್ಯ ಸಂಸ್ಥೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.<br /><em><strong>– ಸೋಮನಾಥ್ ರಾಯ್, ಸಂಶೋಧಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>