<p><strong>ನವದೆಹಲಿ</strong>: ‘ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಮೌಲ್ಯಯುತ ಚಿಂತನೆಗಳನ್ನು ಇನ್ನಷ್ಟು ಜನಪ್ರಿಯಗೊಳಿಸಲು ಸಮಷ್ಟಿ ಯತ್ನ ಅಗತ್ಯವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.</p>.<p>ಹುತಾತ್ಮರ ದಿನದ ನಿಮಿತ್ತ ಅವರು ಭಾನುವಾರ ರಾಜಘಾಟ್ನಲ್ಲಿ ಗಾಂಧೀಜಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಗಾಂಧೀಜಿ ಅವರು 1948ರ ಜನವರಿ 30ರಂದು ನಾಥೂರಾಂ ಗೋಡ್ಸೆ ಅವರ ಗುಂಡೇಟಿನಿಂದ ಮೃತಪಟ್ಟಿದ್ದರು.</p>.<p>‘ಹುತಾತ್ಮರ ದಿನದಂದು ಬಾಪು ಅವರನ್ನು ಸ್ಮರಿಸಲಾಗುತ್ತಿದೆ. ಅವರ ಚಿಂತನೆಗಳನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕಿದೆ. ಅವರು ಧೈರ್ಯದಿಂದ ದೇಶ ರಕ್ಷಿಸಿದ್ದಾರೆ. ಅವರ ಸೇವೆ, ಸ್ಥೈರ್ಯ ಎಂದಿಗೂ ಸ್ಮರಣೀಯ’ ಎಂದೂ ಮೋದಿ ಟ್ವೀಟ್ ಮಾಡಿದ್ದಾರೆ.</p>.<p><strong>ಗಾಂಧೀಜಿ ಉಬ್ಬುಚಿತ್ರ ಅನಾವರಣ:</strong> ‘ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಎಂಬುದು ಗಾಂಧೀಜಿ ಆರಂಭಿಸಿದ್ದ ಸ್ವದೇಶಿ ಆಂದೋಲನದ ಹೊಸ ವ್ಯಾಖ್ಯಾನಗಳಾಗಿವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.</p>.<p>‘ಸ್ವಾತಂತ್ರ್ಯದ ನಂತರ ದೇಶ ಮರುನಿರ್ಮಿಸಲು ಗಾಂಧೀಜಿ ಹಮ್ಮಿಕೊಂಡಿದ್ದ ಸ್ವದೇಶಿ ಆಂದೋಲನವನ್ನು ಹಲವು ವರ್ಷ ಮರೆಯಾಗಿತ್ತು. ಪ್ರಧಾನಿ ಈಗ ಅವುಗಳಿಗೆ ಮರುಜೀವ ನೀಡಿದ್ದಾರೆ’ ಎಂದು ಹೇಳಿದರು.</p>.<p>ಗಾಂಧೀಜಿ ಪುಣ್ಯಸ್ಮರಣೆಯಂದು ಅಹಮದಾಬಾದ್ನಲ್ಲಿ ಅವರ ಉಬ್ಬುಚಿತ್ರ ಅನಾವರಣಗೊಳಿಸಿ ಅವರು ಮಾತನಾಡಿದರು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಈ ಉಬ್ಬಚಿತ್ರವನ್ನು ಸ್ಥಾಪಿಸಿದೆ.</p>.<p>100 ಚದರ ಮೀಟರ್ನ ಅಲ್ಯುಮೀನಿಯಂ ಪ್ಲೇಟ್ನಲ್ಲಿ 2,975 ಕ್ಲೇಪಾಟ್ ಬಳಸಿ ಉಬ್ಬುಚಿತ್ರ ರೂಪಿಸಲಾಗಿದೆ. ಗಾಂಧೀಜಿ ಕೇವಲ ಭಾರತ ಸ್ವಾತಂತ್ರ್ಯಕ್ಕಷ್ಟೇ ಹೋರಾಡಲಿಲ್ಲ. ದೇಶದ ಮರುನಿರ್ಮಾಣಕ್ಕಾಗಿ ಹಲವು ಮಾರ್ಗ ನೀಡಿದ್ದಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಮೌಲ್ಯಯುತ ಚಿಂತನೆಗಳನ್ನು ಇನ್ನಷ್ಟು ಜನಪ್ರಿಯಗೊಳಿಸಲು ಸಮಷ್ಟಿ ಯತ್ನ ಅಗತ್ಯವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.</p>.<p>ಹುತಾತ್ಮರ ದಿನದ ನಿಮಿತ್ತ ಅವರು ಭಾನುವಾರ ರಾಜಘಾಟ್ನಲ್ಲಿ ಗಾಂಧೀಜಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಗಾಂಧೀಜಿ ಅವರು 1948ರ ಜನವರಿ 30ರಂದು ನಾಥೂರಾಂ ಗೋಡ್ಸೆ ಅವರ ಗುಂಡೇಟಿನಿಂದ ಮೃತಪಟ್ಟಿದ್ದರು.</p>.<p>‘ಹುತಾತ್ಮರ ದಿನದಂದು ಬಾಪು ಅವರನ್ನು ಸ್ಮರಿಸಲಾಗುತ್ತಿದೆ. ಅವರ ಚಿಂತನೆಗಳನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕಿದೆ. ಅವರು ಧೈರ್ಯದಿಂದ ದೇಶ ರಕ್ಷಿಸಿದ್ದಾರೆ. ಅವರ ಸೇವೆ, ಸ್ಥೈರ್ಯ ಎಂದಿಗೂ ಸ್ಮರಣೀಯ’ ಎಂದೂ ಮೋದಿ ಟ್ವೀಟ್ ಮಾಡಿದ್ದಾರೆ.</p>.<p><strong>ಗಾಂಧೀಜಿ ಉಬ್ಬುಚಿತ್ರ ಅನಾವರಣ:</strong> ‘ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಎಂಬುದು ಗಾಂಧೀಜಿ ಆರಂಭಿಸಿದ್ದ ಸ್ವದೇಶಿ ಆಂದೋಲನದ ಹೊಸ ವ್ಯಾಖ್ಯಾನಗಳಾಗಿವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.</p>.<p>‘ಸ್ವಾತಂತ್ರ್ಯದ ನಂತರ ದೇಶ ಮರುನಿರ್ಮಿಸಲು ಗಾಂಧೀಜಿ ಹಮ್ಮಿಕೊಂಡಿದ್ದ ಸ್ವದೇಶಿ ಆಂದೋಲನವನ್ನು ಹಲವು ವರ್ಷ ಮರೆಯಾಗಿತ್ತು. ಪ್ರಧಾನಿ ಈಗ ಅವುಗಳಿಗೆ ಮರುಜೀವ ನೀಡಿದ್ದಾರೆ’ ಎಂದು ಹೇಳಿದರು.</p>.<p>ಗಾಂಧೀಜಿ ಪುಣ್ಯಸ್ಮರಣೆಯಂದು ಅಹಮದಾಬಾದ್ನಲ್ಲಿ ಅವರ ಉಬ್ಬುಚಿತ್ರ ಅನಾವರಣಗೊಳಿಸಿ ಅವರು ಮಾತನಾಡಿದರು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಈ ಉಬ್ಬಚಿತ್ರವನ್ನು ಸ್ಥಾಪಿಸಿದೆ.</p>.<p>100 ಚದರ ಮೀಟರ್ನ ಅಲ್ಯುಮೀನಿಯಂ ಪ್ಲೇಟ್ನಲ್ಲಿ 2,975 ಕ್ಲೇಪಾಟ್ ಬಳಸಿ ಉಬ್ಬುಚಿತ್ರ ರೂಪಿಸಲಾಗಿದೆ. ಗಾಂಧೀಜಿ ಕೇವಲ ಭಾರತ ಸ್ವಾತಂತ್ರ್ಯಕ್ಕಷ್ಟೇ ಹೋರಾಡಲಿಲ್ಲ. ದೇಶದ ಮರುನಿರ್ಮಾಣಕ್ಕಾಗಿ ಹಲವು ಮಾರ್ಗ ನೀಡಿದ್ದಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>