<p><strong>ಬೆಂಗಳೂರು</strong>: ಆಂಧ್ರಪ್ರದೇಶದ ಗುಂಟೂರು ನಗರದ ಹೊರವಲಯದ ಎಟುಕೂರು ಬಳಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರಿದ್ದ ವಾಹನಕ್ಕೆ ಸಿಲುಕಿ ಪಕ್ಷದ ಕಾರ್ಯಕರ್ತ ಚೀಲಿ ಸಿಂಗಯ್ಯ ಎನ್ನುವವರು ಮೃತಪಟ್ಟಿದ್ದಾರೆ.</p><p>ಜೂನ್ 18ರಂದು ಈ ಘಟನೆ ನಡೆದಿದ್ದು, ಈ ಕುರಿತು ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿವೆ. ಆರಂಭದಲ್ಲಿ ರೆಡ್ಡಿ ಅವರ ಅನಧಿಕೃತ ಬೆಂಗಾವಲು ವಾಹನಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.</p><p>ಈ ಹಿಂದೆ ಮೃತಪಟ್ಟಿದ್ದ ಕಾರ್ಯಕರ್ತನ ಕುಟುಂಬದ ಭೇಟಿಗೆ ಜಗನ್ಮೋಹನ್ ರೆಡ್ಡಿ ಅವರು ಸತ್ತೇನಪಲ್ಲಿಗೆ ತೆರಳುವಾಗ ಈ ಘಟನೆ ನಡೆದಿದೆ. ಗ್ರಾಮದಲ್ಲಿ ರ್ಯಾಲಿ ಆಯೋಜಿಸಿದ್ದು, ಪೊಲೀಸರು 100 ಬೆಂಬಲಿಗರು ಸೇರಲು ಹಾಗೂ ಮೂರು ವಾಹನಗಳ ಬಳಕೆಗೆ ಅನುಮತಿ ನೀಡಿದ್ದರು.</p><p>ಆದರೆ, ಅಧಿಕ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು. ವಾಹನದಲ್ಲಿದ್ದ ಜಗನ್ ಅವರಿಗೆ ಪುಷ್ಪಗುಚ್ಛ ನೀಡಲು ನೂಕುನುಗ್ಗಲು ದಾಟಿ ಸಿಂಗಯ್ಯ ಹೋಗಲು ಯತ್ನಿಸುವಾಗ ಅವಘಡ ನಡೆದಿದೆ ಎನ್ನಲಾಗಿದೆ.</p><p>ಸಿಂಗಯ್ಯ ವಾಹನದಡಿ ಸಿಲುಕಿದಾಗ ಇತರರು ಕೂಗಿಕೊಂಡರು ಚಾಲಕ ವಾಹನ ನಿಲ್ಲಿಸಲಿಲ್ಲ. ಆಸ್ಪತ್ರೆಗೆ ಕರೆದೊಯ್ಯುವಾಗ ಆತ ಮೃತಪಟ್ಟ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ವರದಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಆಂಧ್ರಪ್ರದೇಶದ ಗುಂಟೂರು ನಗರದ ಹೊರವಲಯದ ಎಟುಕೂರು ಬಳಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರಿದ್ದ ವಾಹನಕ್ಕೆ ಸಿಲುಕಿ ಪಕ್ಷದ ಕಾರ್ಯಕರ್ತ ಚೀಲಿ ಸಿಂಗಯ್ಯ ಎನ್ನುವವರು ಮೃತಪಟ್ಟಿದ್ದಾರೆ.</p><p>ಜೂನ್ 18ರಂದು ಈ ಘಟನೆ ನಡೆದಿದ್ದು, ಈ ಕುರಿತು ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿವೆ. ಆರಂಭದಲ್ಲಿ ರೆಡ್ಡಿ ಅವರ ಅನಧಿಕೃತ ಬೆಂಗಾವಲು ವಾಹನಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.</p><p>ಈ ಹಿಂದೆ ಮೃತಪಟ್ಟಿದ್ದ ಕಾರ್ಯಕರ್ತನ ಕುಟುಂಬದ ಭೇಟಿಗೆ ಜಗನ್ಮೋಹನ್ ರೆಡ್ಡಿ ಅವರು ಸತ್ತೇನಪಲ್ಲಿಗೆ ತೆರಳುವಾಗ ಈ ಘಟನೆ ನಡೆದಿದೆ. ಗ್ರಾಮದಲ್ಲಿ ರ್ಯಾಲಿ ಆಯೋಜಿಸಿದ್ದು, ಪೊಲೀಸರು 100 ಬೆಂಬಲಿಗರು ಸೇರಲು ಹಾಗೂ ಮೂರು ವಾಹನಗಳ ಬಳಕೆಗೆ ಅನುಮತಿ ನೀಡಿದ್ದರು.</p><p>ಆದರೆ, ಅಧಿಕ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು. ವಾಹನದಲ್ಲಿದ್ದ ಜಗನ್ ಅವರಿಗೆ ಪುಷ್ಪಗುಚ್ಛ ನೀಡಲು ನೂಕುನುಗ್ಗಲು ದಾಟಿ ಸಿಂಗಯ್ಯ ಹೋಗಲು ಯತ್ನಿಸುವಾಗ ಅವಘಡ ನಡೆದಿದೆ ಎನ್ನಲಾಗಿದೆ.</p><p>ಸಿಂಗಯ್ಯ ವಾಹನದಡಿ ಸಿಲುಕಿದಾಗ ಇತರರು ಕೂಗಿಕೊಂಡರು ಚಾಲಕ ವಾಹನ ನಿಲ್ಲಿಸಲಿಲ್ಲ. ಆಸ್ಪತ್ರೆಗೆ ಕರೆದೊಯ್ಯುವಾಗ ಆತ ಮೃತಪಟ್ಟ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ವರದಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>