<p><strong>ನವದೆಹಲಿ:</strong> ಸ್ವಚ್ಛತೆಯಲ್ಲಿ ಯಶವಂತ ಪುರ ರೈಲು ನಿಲ್ದಾಣ ರಾಜ್ಯಕ್ಕೆ ಪ್ರಥಮ ಮತ್ತು ಶಿವಮೊಗ್ಗ ಟೌನ್ ರೈಲು ನಿಲ್ದಾಣ ದ್ವಿತೀಯ ಸ್ಥಾನ ಪಡೆದಿವೆ.ರೈಲ್ವೆ ವಲಯ ವಿಭಾಗದ ರಾಷ್ಟ್ರಮಟ್ಟದಲ್ಲಿ ರಾಜ್ಯದ ನೈರುತ್ಯ ವಲಯ 5ನೇ ಸ್ಥಾನ ಪಡೆದಿದೆ.</p>.<p>ಅಖಿಲ ಭಾರತ ಸ್ವಚ್ಛತಾ ಸಮೀಕ್ಷೆಯ ಶ್ರೇಯಾಂಕದಲ್ಲಿ ರಾಜಸ್ಥಾನದ ಜೈಪುರ, ಜೋಧಪುರ ಹಾಗೂ ದುರ್ಗಾಪುರ ರೈಲು ನಿಲ್ದಾಣಗಳು ರಾಷ್ಟ್ರಮಟ್ಟದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿವೆ. ಯಶವಂತಪುರ ನಿಲ್ದಾಣವು 30ನೇ ಸ್ಥಾನ ಗಳಿಸಿದೆ.</p>.<p>ರೈಲು ನಿಲ್ದಾಣಗಳ ಸ್ವಚ್ಛತೆ ಕುರಿತು ಬಾಹ್ಯ ಸಂಸ್ಥೆಯಿಂದ ನಡೆಸಿದ ಸಮೀಕ್ಷೆಯ ವರದಿಯನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಬುಧವಾರ ಬಿಡುಗಡೆ ಮಾಡಿದರು.</p>.<p>ಸಮೀಕ್ಷೆಯನ್ನು 2019ರಲ್ಲಿ ದೇಶದ 720 ರೈಲು ನಿಲ್ದಾಣಗಳಲ್ಲಿ ನಡೆಸಲಾಗಿದೆ. ಕಳೆದ ವರ್ಷ 6ನೇ ಸ್ಥಾನ ಪಡೆದಿದ್ದ ನೈಋತ್ಯ ವಲಯ ಈ ಬಾರಿ ಒಂದು ಸ್ಥಾನ ಏರಿಕೆಯಾಗಿದೆ. ವಾಯವ್ಯ ವಲಯ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ.</p>.<p>ಅಖಿಲ ಭಾರತ ಮಟ್ಟದಲ್ಲಿ ರಾಜ್ಯದ ವಿವಿಧ ರೈಲು ನಿಲ್ದಾಣಗಳು ಪಡೆದ ಸ್ಥಾನದ ವಿವರ: ಯಶವಂತಪುರ–30, ಶಿವಮೊಗ್ಗ ಟೌನ್– 37, ಮೈಸೂರು–37, ಕೆ.ಆರ್.ಪುರ–48, ಬೆಂಗಳೂರು ಸಿಟಿ–148</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸ್ವಚ್ಛತೆಯಲ್ಲಿ ಯಶವಂತ ಪುರ ರೈಲು ನಿಲ್ದಾಣ ರಾಜ್ಯಕ್ಕೆ ಪ್ರಥಮ ಮತ್ತು ಶಿವಮೊಗ್ಗ ಟೌನ್ ರೈಲು ನಿಲ್ದಾಣ ದ್ವಿತೀಯ ಸ್ಥಾನ ಪಡೆದಿವೆ.ರೈಲ್ವೆ ವಲಯ ವಿಭಾಗದ ರಾಷ್ಟ್ರಮಟ್ಟದಲ್ಲಿ ರಾಜ್ಯದ ನೈರುತ್ಯ ವಲಯ 5ನೇ ಸ್ಥಾನ ಪಡೆದಿದೆ.</p>.<p>ಅಖಿಲ ಭಾರತ ಸ್ವಚ್ಛತಾ ಸಮೀಕ್ಷೆಯ ಶ್ರೇಯಾಂಕದಲ್ಲಿ ರಾಜಸ್ಥಾನದ ಜೈಪುರ, ಜೋಧಪುರ ಹಾಗೂ ದುರ್ಗಾಪುರ ರೈಲು ನಿಲ್ದಾಣಗಳು ರಾಷ್ಟ್ರಮಟ್ಟದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿವೆ. ಯಶವಂತಪುರ ನಿಲ್ದಾಣವು 30ನೇ ಸ್ಥಾನ ಗಳಿಸಿದೆ.</p>.<p>ರೈಲು ನಿಲ್ದಾಣಗಳ ಸ್ವಚ್ಛತೆ ಕುರಿತು ಬಾಹ್ಯ ಸಂಸ್ಥೆಯಿಂದ ನಡೆಸಿದ ಸಮೀಕ್ಷೆಯ ವರದಿಯನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಬುಧವಾರ ಬಿಡುಗಡೆ ಮಾಡಿದರು.</p>.<p>ಸಮೀಕ್ಷೆಯನ್ನು 2019ರಲ್ಲಿ ದೇಶದ 720 ರೈಲು ನಿಲ್ದಾಣಗಳಲ್ಲಿ ನಡೆಸಲಾಗಿದೆ. ಕಳೆದ ವರ್ಷ 6ನೇ ಸ್ಥಾನ ಪಡೆದಿದ್ದ ನೈಋತ್ಯ ವಲಯ ಈ ಬಾರಿ ಒಂದು ಸ್ಥಾನ ಏರಿಕೆಯಾಗಿದೆ. ವಾಯವ್ಯ ವಲಯ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ.</p>.<p>ಅಖಿಲ ಭಾರತ ಮಟ್ಟದಲ್ಲಿ ರಾಜ್ಯದ ವಿವಿಧ ರೈಲು ನಿಲ್ದಾಣಗಳು ಪಡೆದ ಸ್ಥಾನದ ವಿವರ: ಯಶವಂತಪುರ–30, ಶಿವಮೊಗ್ಗ ಟೌನ್– 37, ಮೈಸೂರು–37, ಕೆ.ಆರ್.ಪುರ–48, ಬೆಂಗಳೂರು ಸಿಟಿ–148</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>