<p><strong>ಜೈಪುರ:</strong> ಜೈಪುರ ಸಾಹಿತ್ಯ ಉತ್ಸವದಲ್ಲಿ ನಾಲ್ಕನೇ ದಿನವಾದ ಭಾನುವಾರ ಗಿಗ್ ಕಾರ್ಮಿಕರು ಮತ್ತು ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಬಗ್ಗೆ ಗಂಭೀರ ಚರ್ಚೆಗಳು ನಡೆದವು.</p>.<p>ಲೇಖಕಿಯರಾದ ವಂದನಾ ವಾಸುದೇವನ್ ಮತ್ತು ಕೇತಕಿ ಕಾರ್ಣಿಕ್ ಮತ್ತು ಅರ್ಥಶಾಸ್ತ್ರಜ್ಞ ರಾಕೇಶ್ ಮೋಹನ್ ಅವರು ಗಿಗ್ ಕಾರ್ಮಿಕರು ಮತ್ತು ಗಿಗ್ ಆರ್ಥಿಕತೆಯ ಬಗ್ಗೆ ಒಳನೋಟ ಬೀರಿದರು.</p>.<p>‘ಭಾರತದಲ್ಲಿ ಅನೌಪಚಾರಿಕ ಆರ್ಥಿಕತೆ ಪ್ರಧಾನ ಪಾತ್ರ ವಹಿಸುತ್ತಿದ್ದು, ಗಿಗ್ ಕಾರ್ಮಿಕರೂ ಇದೇ ವರ್ಗಕ್ಕೆ ಸೇರುತ್ತಾರೆ. ಆದರೆ, ಈ ವಲಯದ ಇತರರಿಗೆ ಇರುವ ಸ್ವಾತಂತ್ರ್ಯ ಗಿಗ್ ಕಾರ್ಮಿಕರಿಗೆ ಇಲ್ಲ. ವರ್ಷವೊಂದಕ್ಕೆ ಗಿಗ್ ಕಾರ್ಮಿಕರಿಗೆ ಸರಾಸರಿ 38 ದಿನಗಳ ಕೆಲಸ ಮಾತ್ರ ಸಿಗುತ್ತಿದೆ. ಈ ವಲಯದಲ್ಲಿ ಇರುವವರ ಭವಿಷ್ಯದ ಬಗ್ಗೆ ಆತಂಕವಾಗುತ್ತದೆ’ ಎಂದು ವಂದನಾ ವಾಸುದೇವನ್ ಹೇಳಿದರು.</p>.<p>‘ನಿರಂತರವಾಗಿ ಡಿಜಿಟಲ್ ನಿಗಾದಲ್ಲಿ ಕೆಲಸ ಮಾಡುವ ಕಾರ್ಮಿಕರು ಖಿನ್ನತೆ, ಒತ್ತಡಗಳಿಗೆ ಗುರಿಯಾಗುತ್ತಿದ್ದಾರೆ’ ಎಂದು ಅವರು ವಿವರಿಸಿದರು.</p>.<p>‘ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ನಕಾರಾತ್ಮಕ ಧೋರಣೆ ತಳೆಯುವ ಅಗತ್ಯವಿಲ್ಲ. ಇದರಿಂದ ಅನೇಕ ರೀತಿಯಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿವೆ’ ಎನ್ನುವುದು ರಾಕೇಶ್ ಮೋಹನ್ ಅವರ ಅಭಿಪ್ರಾಯ.</p>.<p>ಗಿಗ್ ಕಾರ್ಮಿಕರ ಕೆಲಸ ಅಲ್ಪ ಅವಧಿಯದ್ದಾದರೂ ಹಲವು ರೀತಿಯ ಸಮಸ್ಯೆಗಳನ್ನು, ಅಪಾಯಗಳನ್ನು ಎದುರಿಸಬೇಕು. ಕನಿಷ್ಠ ಇವರಿಗೆ ಸಾಮಾಜಿಕ ಭದ್ರತೆ, ಸುರಕ್ಷತೆ, ಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕು ಎನ್ನುವ ಅಭಿಪ್ರಾಯ ಸಂವಾದದಲ್ಲಿ ಮೂಡಿತು.</p>.<p>ಆರೋಗ್ಯ ಕ್ಷೇತ್ರದಲ್ಲಿ ಉತ್ತರದಾಯಿತ್ವ ಸಮಸ್ಯೆ: ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತ ಗೋಷ್ಠಿಯಲ್ಲಿ ದಿ ಲ್ಯಾನ್ಸೆಟ್ ಪತ್ರಿಕೆಯ ಮುಖ್ಯ ಸಂಪಾದಕ ರಿಚರ್ಡ್ ಹಾಟರ್ನ್, ವೈದ್ಯ ವಿಕ್ರಮ್ ಪಟೇಲ್, ಪ್ರಾಧ್ಯಾಪಕ ತರುಣ್ ಖನ್ನಾ ಮತ್ತು ಮಹಿಳಾ ಹಕ್ಕು ಹೋರಾಟಗಾರ್ತಿ ಪೂನಂ ಮುತ್ರೇಜಾ ಭಾಗವಹಿಸಿದ್ದರು.</p>.<p>‘ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಉತ್ತರದಾಯಿತ್ವದ ಸಮಸ್ಯೆ ಮತ್ತು ಗುಣಮಟ್ಟದ ಕೊರತೆ ಇದೆ. ಖಾಸಗಿ ಆಸ್ಪತ್ರೆಗಳ ವಲಯಕ್ಕೆ ಯಾವುದೇ ನಿಯಂತ್ರಣ ಇಲ್ಲವಾಗಿದೆ’ ಎಂದು ವಿಕ್ರಮ್ ಪಟೇಲ್ ವ್ಯಾಖ್ಯಾನಿಸಿದರು.</p>.<p>‘ಲ್ಯಾನ್ಸೆಟ್ ಪತ್ರಿಕೆಯು ಭಾರತದಲ್ಲಿ ಜನರ ಆರೋಗ್ಯ ಕ್ಷೇತ್ರವನ್ನು ಪುನರ್ ರೂಪಿಸುವ ಬಗ್ಗೆ ಹಲವು ವರ್ಷಗಳ ಹಿಂದೆಯೇ ವರದಿ ಪ್ರಕಟಿಸಿದೆ. ಆದರೆ, ಈ ದಿಸೆಯಲ್ಲಿ ಯಾವುದೇ ಕೆಲಸ ಆಗಲಿಲ್ಲ’ ಎಂದು ಪೂನಂ ಮುತ್ರೇಜಾ ಹೇಳಿದರು.</p>.<p>‘ಸಾರ್ವಜನಿಕ ಆರೋಗ್ಯ ಸೇವೆಗಳ ವಲಯದಲ್ಲಿ ಜನರ ಭಾಗೀದಾರಿಕೆ ಅಗತ್ಯವಾಗಿದೆ. ಇದನ್ನು ಸಾಧ್ಯವಾಗಿಸಲು ಭಾರತೀಯರು ಹೋರಾಡಬೇಕಿದೆ’ ಎಂದು ರಿಚರ್ಡ್ ಹಾಟರ್ನ್ ನುಡಿದರು.</p>.<p>ಭಾರತದ ಕಳಪೆ ಸಾರ್ವಜನಿಕ ಆರೋಗ್ಯ ಸೇವೆಗಳ ವ್ಯವಸ್ಥೆಯಲ್ಲಿ ಮಹಿಳೆ ಅತಿ ಹೆಚ್ಚು ಸಂತ್ರಸ್ತಳು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.</p>.<h2> <strong>ಭಾರಿ ಜನಸಂದಣಿ </strong></h2><p>ಭಾನುವಾರದ ಉತ್ಸವದಲ್ಲಿ ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಸಂವಾದ ಗೋಷ್ಠಿ ನಡೆಯಿತು. ಅದನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಬಾರಿಯ ಉತ್ಸವದಲ್ಲಿ ಅತಿ ಹೆಚ್ಚು ಜನ ಸೇರಿದ್ದ ಗೋಷ್ಠಿ ಅದಾಗಿತ್ತು. ಜನ ನಿಲ್ಲಲೂ ಸ್ಥಳ ಇರಲಿಲ್ಲ. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದೂ ಕಷ್ಟವಾಗಿತ್ತು. ಆದರೆ ನ್ಯಾ.ಚಂದ್ರಚೂಡ್ ಮಾತು ಆರಂಭಿಸಿದ ನಂತರ ಎಲ್ಲರೂ ನಿಶ್ಯಬ್ದದಿಂದ ಕೇಳಿಸಿಕೊಂಡರು. ಅವರ ಮಾತು ಮೆಚ್ಚಿ ಆಗಾಗ್ಗೆ ಚಪ್ಪಾಳೆ ಹೊಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ:</strong> ಜೈಪುರ ಸಾಹಿತ್ಯ ಉತ್ಸವದಲ್ಲಿ ನಾಲ್ಕನೇ ದಿನವಾದ ಭಾನುವಾರ ಗಿಗ್ ಕಾರ್ಮಿಕರು ಮತ್ತು ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಬಗ್ಗೆ ಗಂಭೀರ ಚರ್ಚೆಗಳು ನಡೆದವು.</p>.<p>ಲೇಖಕಿಯರಾದ ವಂದನಾ ವಾಸುದೇವನ್ ಮತ್ತು ಕೇತಕಿ ಕಾರ್ಣಿಕ್ ಮತ್ತು ಅರ್ಥಶಾಸ್ತ್ರಜ್ಞ ರಾಕೇಶ್ ಮೋಹನ್ ಅವರು ಗಿಗ್ ಕಾರ್ಮಿಕರು ಮತ್ತು ಗಿಗ್ ಆರ್ಥಿಕತೆಯ ಬಗ್ಗೆ ಒಳನೋಟ ಬೀರಿದರು.</p>.<p>‘ಭಾರತದಲ್ಲಿ ಅನೌಪಚಾರಿಕ ಆರ್ಥಿಕತೆ ಪ್ರಧಾನ ಪಾತ್ರ ವಹಿಸುತ್ತಿದ್ದು, ಗಿಗ್ ಕಾರ್ಮಿಕರೂ ಇದೇ ವರ್ಗಕ್ಕೆ ಸೇರುತ್ತಾರೆ. ಆದರೆ, ಈ ವಲಯದ ಇತರರಿಗೆ ಇರುವ ಸ್ವಾತಂತ್ರ್ಯ ಗಿಗ್ ಕಾರ್ಮಿಕರಿಗೆ ಇಲ್ಲ. ವರ್ಷವೊಂದಕ್ಕೆ ಗಿಗ್ ಕಾರ್ಮಿಕರಿಗೆ ಸರಾಸರಿ 38 ದಿನಗಳ ಕೆಲಸ ಮಾತ್ರ ಸಿಗುತ್ತಿದೆ. ಈ ವಲಯದಲ್ಲಿ ಇರುವವರ ಭವಿಷ್ಯದ ಬಗ್ಗೆ ಆತಂಕವಾಗುತ್ತದೆ’ ಎಂದು ವಂದನಾ ವಾಸುದೇವನ್ ಹೇಳಿದರು.</p>.<p>‘ನಿರಂತರವಾಗಿ ಡಿಜಿಟಲ್ ನಿಗಾದಲ್ಲಿ ಕೆಲಸ ಮಾಡುವ ಕಾರ್ಮಿಕರು ಖಿನ್ನತೆ, ಒತ್ತಡಗಳಿಗೆ ಗುರಿಯಾಗುತ್ತಿದ್ದಾರೆ’ ಎಂದು ಅವರು ವಿವರಿಸಿದರು.</p>.<p>‘ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ನಕಾರಾತ್ಮಕ ಧೋರಣೆ ತಳೆಯುವ ಅಗತ್ಯವಿಲ್ಲ. ಇದರಿಂದ ಅನೇಕ ರೀತಿಯಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿವೆ’ ಎನ್ನುವುದು ರಾಕೇಶ್ ಮೋಹನ್ ಅವರ ಅಭಿಪ್ರಾಯ.</p>.<p>ಗಿಗ್ ಕಾರ್ಮಿಕರ ಕೆಲಸ ಅಲ್ಪ ಅವಧಿಯದ್ದಾದರೂ ಹಲವು ರೀತಿಯ ಸಮಸ್ಯೆಗಳನ್ನು, ಅಪಾಯಗಳನ್ನು ಎದುರಿಸಬೇಕು. ಕನಿಷ್ಠ ಇವರಿಗೆ ಸಾಮಾಜಿಕ ಭದ್ರತೆ, ಸುರಕ್ಷತೆ, ಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕು ಎನ್ನುವ ಅಭಿಪ್ರಾಯ ಸಂವಾದದಲ್ಲಿ ಮೂಡಿತು.</p>.<p>ಆರೋಗ್ಯ ಕ್ಷೇತ್ರದಲ್ಲಿ ಉತ್ತರದಾಯಿತ್ವ ಸಮಸ್ಯೆ: ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತ ಗೋಷ್ಠಿಯಲ್ಲಿ ದಿ ಲ್ಯಾನ್ಸೆಟ್ ಪತ್ರಿಕೆಯ ಮುಖ್ಯ ಸಂಪಾದಕ ರಿಚರ್ಡ್ ಹಾಟರ್ನ್, ವೈದ್ಯ ವಿಕ್ರಮ್ ಪಟೇಲ್, ಪ್ರಾಧ್ಯಾಪಕ ತರುಣ್ ಖನ್ನಾ ಮತ್ತು ಮಹಿಳಾ ಹಕ್ಕು ಹೋರಾಟಗಾರ್ತಿ ಪೂನಂ ಮುತ್ರೇಜಾ ಭಾಗವಹಿಸಿದ್ದರು.</p>.<p>‘ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಉತ್ತರದಾಯಿತ್ವದ ಸಮಸ್ಯೆ ಮತ್ತು ಗುಣಮಟ್ಟದ ಕೊರತೆ ಇದೆ. ಖಾಸಗಿ ಆಸ್ಪತ್ರೆಗಳ ವಲಯಕ್ಕೆ ಯಾವುದೇ ನಿಯಂತ್ರಣ ಇಲ್ಲವಾಗಿದೆ’ ಎಂದು ವಿಕ್ರಮ್ ಪಟೇಲ್ ವ್ಯಾಖ್ಯಾನಿಸಿದರು.</p>.<p>‘ಲ್ಯಾನ್ಸೆಟ್ ಪತ್ರಿಕೆಯು ಭಾರತದಲ್ಲಿ ಜನರ ಆರೋಗ್ಯ ಕ್ಷೇತ್ರವನ್ನು ಪುನರ್ ರೂಪಿಸುವ ಬಗ್ಗೆ ಹಲವು ವರ್ಷಗಳ ಹಿಂದೆಯೇ ವರದಿ ಪ್ರಕಟಿಸಿದೆ. ಆದರೆ, ಈ ದಿಸೆಯಲ್ಲಿ ಯಾವುದೇ ಕೆಲಸ ಆಗಲಿಲ್ಲ’ ಎಂದು ಪೂನಂ ಮುತ್ರೇಜಾ ಹೇಳಿದರು.</p>.<p>‘ಸಾರ್ವಜನಿಕ ಆರೋಗ್ಯ ಸೇವೆಗಳ ವಲಯದಲ್ಲಿ ಜನರ ಭಾಗೀದಾರಿಕೆ ಅಗತ್ಯವಾಗಿದೆ. ಇದನ್ನು ಸಾಧ್ಯವಾಗಿಸಲು ಭಾರತೀಯರು ಹೋರಾಡಬೇಕಿದೆ’ ಎಂದು ರಿಚರ್ಡ್ ಹಾಟರ್ನ್ ನುಡಿದರು.</p>.<p>ಭಾರತದ ಕಳಪೆ ಸಾರ್ವಜನಿಕ ಆರೋಗ್ಯ ಸೇವೆಗಳ ವ್ಯವಸ್ಥೆಯಲ್ಲಿ ಮಹಿಳೆ ಅತಿ ಹೆಚ್ಚು ಸಂತ್ರಸ್ತಳು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.</p>.<h2> <strong>ಭಾರಿ ಜನಸಂದಣಿ </strong></h2><p>ಭಾನುವಾರದ ಉತ್ಸವದಲ್ಲಿ ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಸಂವಾದ ಗೋಷ್ಠಿ ನಡೆಯಿತು. ಅದನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಬಾರಿಯ ಉತ್ಸವದಲ್ಲಿ ಅತಿ ಹೆಚ್ಚು ಜನ ಸೇರಿದ್ದ ಗೋಷ್ಠಿ ಅದಾಗಿತ್ತು. ಜನ ನಿಲ್ಲಲೂ ಸ್ಥಳ ಇರಲಿಲ್ಲ. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದೂ ಕಷ್ಟವಾಗಿತ್ತು. ಆದರೆ ನ್ಯಾ.ಚಂದ್ರಚೂಡ್ ಮಾತು ಆರಂಭಿಸಿದ ನಂತರ ಎಲ್ಲರೂ ನಿಶ್ಯಬ್ದದಿಂದ ಕೇಳಿಸಿಕೊಂಡರು. ಅವರ ಮಾತು ಮೆಚ್ಚಿ ಆಗಾಗ್ಗೆ ಚಪ್ಪಾಳೆ ಹೊಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>