<p><strong>ಮ್ಯೂನಿಚ್</strong>: ಭಾರತ– ಕೆನಡಾ ನಡುವಿನ ಸಹಕಾರ ಮತ್ತು ಪಾಲುದಾರಿಕೆಯ ಅವಕಾಶಗಳ ಕುರಿತಂತೆ ಉಭಯ ದೇಶಗಳ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಹಾಗೂ ಅನಿತಾ ಆನಂದ್ ಅವರು ಇಲ್ಲಿ ಚರ್ಚಿಸಿದರು.</p>.<p>ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವಿನ ಬಾಂಧವ್ಯ 2023ರಿಂದಲೂ ಹದಗೆಟ್ಟಿತ್ತು. ರಾಜತಾಂತ್ರಿಕ ಸಂಬಂಧವು ಮುರಿದುಬಿದ್ದಿತ್ತು. ಇದೀಗ ಉಭಯ ದೇಶಗಳು ತಮ್ಮ ನಡುವಿನ ಬಾಂಧವ್ಯ ವೃದ್ಧಿಗೆ ಪರಸ್ಪರ ಮುಂದಾಗಿವೆ.</p>.<p>ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಮುನ್ನವೇ ವಿದೇಶಾಂಗ ಸಚಿವರು ಮ್ಯೂನಿಚ್ನಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.</p>.<p>ಸುಮಧುರ ಬಾಂಧವ್ಯ ಪುನರ್ಸ್ಥಾಪನೆಗೆ ಎರಡೂ ದೇಶಗಳು ಉತ್ಸುಕವಾಗಿದ್ದು, 2025ರ ಸೆಪ್ಟೆಂಬರ್ನಿಂದ ಈಚೆಗೆ ಉಭಯ ದೇಶಗಳ ಸಚಿವರ ನಡುವೆ ನಡೆದ ಐದನೇ ಸಭೆ ಇದಾಗಿದೆ ಎಂದು ಗ್ಲೋಬಲ್ ಅಪೇರ್ಸ್ ಕೆನಡಾ (ಜಿಎಸಿ) ಭಾನುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮ್ಯೂನಿಚ್</strong>: ಭಾರತ– ಕೆನಡಾ ನಡುವಿನ ಸಹಕಾರ ಮತ್ತು ಪಾಲುದಾರಿಕೆಯ ಅವಕಾಶಗಳ ಕುರಿತಂತೆ ಉಭಯ ದೇಶಗಳ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಹಾಗೂ ಅನಿತಾ ಆನಂದ್ ಅವರು ಇಲ್ಲಿ ಚರ್ಚಿಸಿದರು.</p>.<p>ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವಿನ ಬಾಂಧವ್ಯ 2023ರಿಂದಲೂ ಹದಗೆಟ್ಟಿತ್ತು. ರಾಜತಾಂತ್ರಿಕ ಸಂಬಂಧವು ಮುರಿದುಬಿದ್ದಿತ್ತು. ಇದೀಗ ಉಭಯ ದೇಶಗಳು ತಮ್ಮ ನಡುವಿನ ಬಾಂಧವ್ಯ ವೃದ್ಧಿಗೆ ಪರಸ್ಪರ ಮುಂದಾಗಿವೆ.</p>.<p>ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಮುನ್ನವೇ ವಿದೇಶಾಂಗ ಸಚಿವರು ಮ್ಯೂನಿಚ್ನಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.</p>.<p>ಸುಮಧುರ ಬಾಂಧವ್ಯ ಪುನರ್ಸ್ಥಾಪನೆಗೆ ಎರಡೂ ದೇಶಗಳು ಉತ್ಸುಕವಾಗಿದ್ದು, 2025ರ ಸೆಪ್ಟೆಂಬರ್ನಿಂದ ಈಚೆಗೆ ಉಭಯ ದೇಶಗಳ ಸಚಿವರ ನಡುವೆ ನಡೆದ ಐದನೇ ಸಭೆ ಇದಾಗಿದೆ ಎಂದು ಗ್ಲೋಬಲ್ ಅಪೇರ್ಸ್ ಕೆನಡಾ (ಜಿಎಸಿ) ಭಾನುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>