ಜಯಂತ ಚೌಧರಿ ಅವರ ತಾತ ಹಾಗೂ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ‘ಭಾರತ ರತ್ನ’ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬಿಜೆಪಿ ಜೊತೆ ಕೈ ಜೋಡಿಸುವಿರಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಇಲ್ಲ ಎಂದು ಹೇಳಲಿಲ್ಲ. ಅಲ್ಲದೆ, ‘ಈ ವಿಚಾರದಲ್ಲಿ ಇನ್ನೂ ಅನುಮಾನವಿದೆಯೇ? ನಿಮ್ಮ ಪ್ರಶ್ನೆಗೆ ಹೇಗೆ ಇಲ್ಲ ಎಂದು ಹೇಳಲಿ’ ಎಂದು ಮರು ಪ್ರಶ್ನೆ ಮಾಡಿದ್ದಾರೆ.