ಕೆಮ್ಮಿನ ಸಿರಪ್ನಿಂದ ಅಮಲೇರುತ್ತದೆ ಎಂದು ಭಾವಿಸಿದ್ದ 15–17 ವರ್ಷದೊಳಗಿನ ಈ ಮಕ್ಕಳು 10 ಬಾಟಲ್ಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಈ ಬಗ್ಗೆ ಬಾಲಾರೋಪಿಯೊಬ್ಬ ವಾರ್ಡನ್ಗೆ ಮಾಹಿತಿ ನೀಡಿದ್ದ. ಕೋಣೆ ತಪಾಸಣೆಗೆ ವೇಳೆ ವಾರ್ಡನ್ ವಿಜಯೇಂದ್ರ ಕುಮಾರ್ ಅವರಿಗೆ ಚೀಲದಲ್ಲಿ ಬಾಟಲ್ ಸಿಕ್ಕಿದ್ದವು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಾರ್ಡನ್, ಬಾಲಕರನ್ನು ಶೇಕ್ಪುರ ಬಾಲಗೃಹಕ್ಕೆ ಸ್ಥಳಾಂತರಿಸುವ ಎಚ್ಚರಿಕೆ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಬಾಲಕರು ಮೇಲ್ವಿಚಾರಕನಿಗೆ ಗುಂಡಿಟ್ಟು ಕೊಂದು ಪರಾರಿಯಾಗಿದ್ದಾರೆ.