ಮಾಹಿತಿ ಆಧರಿಸಿ ಮಾರ್ಚ್ 8ರಂದು ಕೇರಳ ತಲುಪಿದ ರಾಜಸ್ಥಾನ ಪೊಲೀಸರ ತಂಡ, ಅಲ್ಲಿ ಶೋಧ ನಡೆಸಿ, ಗುರುವಾರ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿತ್ತು.
ಜೆಇಇ ತಯಾರಿಗೆ ಹಾಗೂ ನೌಕರಿ ಪಡೆಯಲು ಹಲವು ವರ್ಷಗಳು ಬೇಕಾಗಿರುವುದರಿಂದ, ಆನ್ಲೈನ್ ವ್ಯಾಪಾರದಲ್ಲಿ ತೊಡಗಿಕೊಳ್ಳುವ ಬಯಕೆ ಹೊಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಮುದ್ರ ಇಷ್ಟವಾಗಿದ್ದರಿಂದ ವರ್ಕಳದ ಶಿವಗಿರಿಯಲ್ಲಿರುವ ಕಪ್ಪು ಬೀಚ್ಗೆ ಬಂದಿದ್ದ. ವಿದ್ಯಾರ್ಥಿಯನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಬಳಿಕ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.