<p><strong>ಶ್ರೀನಗರ:</strong> ಜಮ್ಮು–ಕಾಶ್ಮೀರದಲ್ಲಿ ಕೆಲ ಮತಾಂಧ ಧರ್ಮಗುರುಗಳು ಇಸ್ಲಾಂ ತತ್ವಗಳನ್ನು ತಿರುಚಿ ಬೋಧಿಸುವ ಮೂಲಕ ಯುವ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ಅದರಲ್ಲೂ, ಖಾಸಗಿ ಶಾಲೆಗಳಲ್ಲಿನ ಬಾಲಕಿಯರನ್ನು ತೀವ್ರಗಾಮಿಗಳನ್ನಾಗಿ ಮಾಡಲಾಗುತ್ತಿದೆ. ಮಾಜಿ ಪ್ರತ್ಯೇಕತಾವಾದಿಗಳಲ್ಲಿಯೂ ಈ ಬೆಳವಣಿಗೆ ದಿಗಿಲು ಮೂಡಿಸಿದೆ ಎಂದು ಮೂಲಗಳು ಹೇಳಿವೆ. </p>.<p>ಈ ಬೆಳವಣಿಗೆ ಜಮ್ಮು–ಕಾಶ್ಮೀರದಲ್ಲಿ ಮತ್ತೊಂದು ಧಾರ್ಮಿಕ ಉಗ್ರವಾದದ ಅಲೆ ಏಳಲು ಕಾರಣವಾಗುತ್ತಿದೆಯೇ ಎಂಬ ಆತಂಕವನ್ನು ಕೂಡ ಮಾಜಿ ಪ್ರತ್ಯೇಕತಾವಾದಿಗಳು ವ್ಯಕ್ತಪಡಿಸುತ್ತಿದ್ದಾರೆ. </p>.<p>ಇನ್ನೊಂದೆಡೆ, ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ, ವಿಶೇಷವಾಗಿ ಖಾಸಗಿ ಶಾಲೆಗಳ ಬಾಲಕಿಯರನ್ನು ತೀವ್ರಗಾಮಿಗಳನ್ನಾಗಿ ಮಾಡಲಾಗುತ್ತಿರುವ ಕುರಿತು ಕೈಗೊಂಡಿರುವ ತನಿಖೆಯನ್ನು ಭದ್ರತಾಪಡೆಗಳು ಚುರುಕುಗೊಳಿಸಿವೆ.</p>.<p>ಕೆಲ ಖಾಸಗಿ ಶಾಲೆಗಳಲ್ಲಿ, ಮಾದಕದ್ರವ್ಯಗಳ ಬಳಕೆ ಹೆಚ್ಚುತ್ತಿದೆ ಎಂಬ ಬಗ್ಗೆಯೂ ವ್ಯಾಪಕ ಕಳವಳ ವ್ಯಕ್ತವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ಜಮ್ಮು–ಕಾಶ್ಮೀರದ ಬೇರುಮಟ್ಟದಲ್ಲಿ ಉಗ್ರವಾದದ ಕುರಿತು ಸಂಕಥನಗಳನ್ನು ಪ್ರಚುರಪಡಿಸಲಾಗುತ್ತಿದೆ. ಇದರ ವಿರುದ್ಧದ ಹೋರಾಟದ ಭಾಗವಾಗಿ ಶಾಲೆಗಳಲ್ಲಿ ನಡೆಯುತ್ತಿರುವ ಇಂತಹ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುತ್ತಿದೆ. ಈ ಕುರಿತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ ಎಂಧು ಅಧಿಕಾರಿಗಳು ಹೇಳಿದ್ದಾರೆ. </p>.<p>ಭದ್ರತಾ ಪಡೆಗಳು ಮಾತ್ರವಲ್ಲ, ಈಗಾಗಲೇ ಪ್ರತ್ಯೇಕತಾವಾದದಿಂದ ದೂರವಾಗಿರುವ ಗುಂಪುಗಳಲ್ಲಿ ಕೂಡ ಈ ವಿದ್ಯಮಾನ ಆತಂಕ ಮೂಡಿಸಿದೆ.</p>.<p>‘ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಆಚೆ ಕಡೆಯಿಂದ ನುಗ್ಗಿ ಬರುತ್ತಿರುವ ಧಾರ್ಮಿಕ ಉಗ್ರವಾದದ ಮತ್ತೊಂದು ಅಲೆಯು, ಶತಮಾನಗಳಿಂದ ಕಣಿವೆಯಲ್ಲಿ ನೆಲೆಯೂರಿರುವ ಸೂಫಿ ಪರಂಪರೆಯನ್ನು ನಾಶ ಮಾಡಲಿದೆಯೇ ಎಂಬ ಆತಂಕ ಕಾಡುತ್ತಿದೆ’ ಎಂದು ಮಾಜಿ ಪ್ರತ್ಯೇಕತಾವಾದಿಗಳು ಹೇಳುತ್ತಾರೆ.</p>.<p>ಕೆಲ ಸಂಸ್ಥೆಗಳು ಹಾಗೂ ‘ಅನಧಿಕೃತ’ ಮದರಸಾಗಳು ಕೂಡ ಯುವ ಸಮುದಾಯವನ್ನು ಉಗ್ರವಾದದತ್ತ ಸೆಳೆಯುವ ಕಾರ್ಯದಲ್ಲಿ ತೊಡಗಿವೆ ಎಂದು ಇವೇ ಮೂಲಗಳು ಹೇಳುತ್ತವೆ.</p>.<p>‘ಸೂಫಿ ಸಂತರು ಹಾಗೂ ಋಷಿಗಳ ಹೆಸರಿನಲ್ಲಿ ನಿರ್ಮಿಸಿರುವ ಶ್ರದ್ಧಾಕೇಂದ್ರಗಳಿಗೆ ಭೇಟಿ ನೀಡುವುದು, ಪ್ರಾರ್ಥನೆ ಸಲ್ಲಿಸುವುದು ಸೇರಿ ಪರಂಪರಾಗತವಾಗಿ ರೂಢಿಯಲ್ಲಿರುವ ಕಾಶ್ಮೀರಿ ಜನರ ಪದ್ಧತಿಗಳನ್ನು ಧಿಕ್ಕರಿಸುವಂತೆ ಪ್ರಚೋದಿಸಲಾಗುತ್ತಿದೆ. ಇಂತಹ ಪದ್ಧತಿಗಳ ಪಾಲನೆ ಇಸ್ಲಾಂ ಬೋಧನೆಗಳ ಉಲ್ಲಂಘನೆ ಎಂಬುದಾಗಿ ಬೋಧಿಸಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.</p>.<p>‘ಉಗ್ರರು ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡುತ್ತಿರುವುದು ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ. ಇದು, ಜಮ್ಮು–ಕಾಶ್ಮೀರದಲ್ಲಿನ ಭದ್ರತೆಗೆ ಹೊಸ ಸವಾಲಾಗಿ ಪರಿಣಿಮಿಸಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<div><blockquote>ಜಮ್ಮು–ಕಾಶ್ಮೀರದ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲಾಗದ ರೀತಿಯಲ್ಲಿ ಹಾನಿ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಭವಿಷ್ಯದ ದಿನಗಳಿಗಾಗಿ ತಯಾರು ಮಾಡುತ್ತಿಲ್ಲ. ಕಿರುಕುಳ ಅಪಾಯದಿಂದ ಇಸ್ಲಾಂ ಮಾತ್ರ ರಕ್ಷಣೆ ನೀಡಬಲ್ಲದು ಎಂದು ಅವರು ನಂಬುವಂತೆ ಬೋಧಿಸಲಾಗುತ್ತಿದೆ</blockquote><span class="attribution"> ಭದ್ರತಾ ಪಡೆಗಳ ಅಧಿಕಾರಿಗಳು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ಜಮ್ಮು–ಕಾಶ್ಮೀರದಲ್ಲಿ ಕೆಲ ಮತಾಂಧ ಧರ್ಮಗುರುಗಳು ಇಸ್ಲಾಂ ತತ್ವಗಳನ್ನು ತಿರುಚಿ ಬೋಧಿಸುವ ಮೂಲಕ ಯುವ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ಅದರಲ್ಲೂ, ಖಾಸಗಿ ಶಾಲೆಗಳಲ್ಲಿನ ಬಾಲಕಿಯರನ್ನು ತೀವ್ರಗಾಮಿಗಳನ್ನಾಗಿ ಮಾಡಲಾಗುತ್ತಿದೆ. ಮಾಜಿ ಪ್ರತ್ಯೇಕತಾವಾದಿಗಳಲ್ಲಿಯೂ ಈ ಬೆಳವಣಿಗೆ ದಿಗಿಲು ಮೂಡಿಸಿದೆ ಎಂದು ಮೂಲಗಳು ಹೇಳಿವೆ. </p>.<p>ಈ ಬೆಳವಣಿಗೆ ಜಮ್ಮು–ಕಾಶ್ಮೀರದಲ್ಲಿ ಮತ್ತೊಂದು ಧಾರ್ಮಿಕ ಉಗ್ರವಾದದ ಅಲೆ ಏಳಲು ಕಾರಣವಾಗುತ್ತಿದೆಯೇ ಎಂಬ ಆತಂಕವನ್ನು ಕೂಡ ಮಾಜಿ ಪ್ರತ್ಯೇಕತಾವಾದಿಗಳು ವ್ಯಕ್ತಪಡಿಸುತ್ತಿದ್ದಾರೆ. </p>.<p>ಇನ್ನೊಂದೆಡೆ, ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ, ವಿಶೇಷವಾಗಿ ಖಾಸಗಿ ಶಾಲೆಗಳ ಬಾಲಕಿಯರನ್ನು ತೀವ್ರಗಾಮಿಗಳನ್ನಾಗಿ ಮಾಡಲಾಗುತ್ತಿರುವ ಕುರಿತು ಕೈಗೊಂಡಿರುವ ತನಿಖೆಯನ್ನು ಭದ್ರತಾಪಡೆಗಳು ಚುರುಕುಗೊಳಿಸಿವೆ.</p>.<p>ಕೆಲ ಖಾಸಗಿ ಶಾಲೆಗಳಲ್ಲಿ, ಮಾದಕದ್ರವ್ಯಗಳ ಬಳಕೆ ಹೆಚ್ಚುತ್ತಿದೆ ಎಂಬ ಬಗ್ಗೆಯೂ ವ್ಯಾಪಕ ಕಳವಳ ವ್ಯಕ್ತವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ಜಮ್ಮು–ಕಾಶ್ಮೀರದ ಬೇರುಮಟ್ಟದಲ್ಲಿ ಉಗ್ರವಾದದ ಕುರಿತು ಸಂಕಥನಗಳನ್ನು ಪ್ರಚುರಪಡಿಸಲಾಗುತ್ತಿದೆ. ಇದರ ವಿರುದ್ಧದ ಹೋರಾಟದ ಭಾಗವಾಗಿ ಶಾಲೆಗಳಲ್ಲಿ ನಡೆಯುತ್ತಿರುವ ಇಂತಹ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುತ್ತಿದೆ. ಈ ಕುರಿತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ ಎಂಧು ಅಧಿಕಾರಿಗಳು ಹೇಳಿದ್ದಾರೆ. </p>.<p>ಭದ್ರತಾ ಪಡೆಗಳು ಮಾತ್ರವಲ್ಲ, ಈಗಾಗಲೇ ಪ್ರತ್ಯೇಕತಾವಾದದಿಂದ ದೂರವಾಗಿರುವ ಗುಂಪುಗಳಲ್ಲಿ ಕೂಡ ಈ ವಿದ್ಯಮಾನ ಆತಂಕ ಮೂಡಿಸಿದೆ.</p>.<p>‘ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಆಚೆ ಕಡೆಯಿಂದ ನುಗ್ಗಿ ಬರುತ್ತಿರುವ ಧಾರ್ಮಿಕ ಉಗ್ರವಾದದ ಮತ್ತೊಂದು ಅಲೆಯು, ಶತಮಾನಗಳಿಂದ ಕಣಿವೆಯಲ್ಲಿ ನೆಲೆಯೂರಿರುವ ಸೂಫಿ ಪರಂಪರೆಯನ್ನು ನಾಶ ಮಾಡಲಿದೆಯೇ ಎಂಬ ಆತಂಕ ಕಾಡುತ್ತಿದೆ’ ಎಂದು ಮಾಜಿ ಪ್ರತ್ಯೇಕತಾವಾದಿಗಳು ಹೇಳುತ್ತಾರೆ.</p>.<p>ಕೆಲ ಸಂಸ್ಥೆಗಳು ಹಾಗೂ ‘ಅನಧಿಕೃತ’ ಮದರಸಾಗಳು ಕೂಡ ಯುವ ಸಮುದಾಯವನ್ನು ಉಗ್ರವಾದದತ್ತ ಸೆಳೆಯುವ ಕಾರ್ಯದಲ್ಲಿ ತೊಡಗಿವೆ ಎಂದು ಇವೇ ಮೂಲಗಳು ಹೇಳುತ್ತವೆ.</p>.<p>‘ಸೂಫಿ ಸಂತರು ಹಾಗೂ ಋಷಿಗಳ ಹೆಸರಿನಲ್ಲಿ ನಿರ್ಮಿಸಿರುವ ಶ್ರದ್ಧಾಕೇಂದ್ರಗಳಿಗೆ ಭೇಟಿ ನೀಡುವುದು, ಪ್ರಾರ್ಥನೆ ಸಲ್ಲಿಸುವುದು ಸೇರಿ ಪರಂಪರಾಗತವಾಗಿ ರೂಢಿಯಲ್ಲಿರುವ ಕಾಶ್ಮೀರಿ ಜನರ ಪದ್ಧತಿಗಳನ್ನು ಧಿಕ್ಕರಿಸುವಂತೆ ಪ್ರಚೋದಿಸಲಾಗುತ್ತಿದೆ. ಇಂತಹ ಪದ್ಧತಿಗಳ ಪಾಲನೆ ಇಸ್ಲಾಂ ಬೋಧನೆಗಳ ಉಲ್ಲಂಘನೆ ಎಂಬುದಾಗಿ ಬೋಧಿಸಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.</p>.<p>‘ಉಗ್ರರು ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡುತ್ತಿರುವುದು ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ. ಇದು, ಜಮ್ಮು–ಕಾಶ್ಮೀರದಲ್ಲಿನ ಭದ್ರತೆಗೆ ಹೊಸ ಸವಾಲಾಗಿ ಪರಿಣಿಮಿಸಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<div><blockquote>ಜಮ್ಮು–ಕಾಶ್ಮೀರದ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲಾಗದ ರೀತಿಯಲ್ಲಿ ಹಾನಿ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಭವಿಷ್ಯದ ದಿನಗಳಿಗಾಗಿ ತಯಾರು ಮಾಡುತ್ತಿಲ್ಲ. ಕಿರುಕುಳ ಅಪಾಯದಿಂದ ಇಸ್ಲಾಂ ಮಾತ್ರ ರಕ್ಷಣೆ ನೀಡಬಲ್ಲದು ಎಂದು ಅವರು ನಂಬುವಂತೆ ಬೋಧಿಸಲಾಗುತ್ತಿದೆ</blockquote><span class="attribution"> ಭದ್ರತಾ ಪಡೆಗಳ ಅಧಿಕಾರಿಗಳು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>