<p><strong>ನವದೆಹಲಿ</strong>: ಗುತ್ತಿಗೆಯು ಕಾನೂನುಬದ್ಧ ಒಪ್ಪಂದವೇ ಆಗಿದ್ದು, ಇದಕ್ಕೆ ಉದ್ಯೋಗದಾತರು ಮತ್ತು ಉದ್ಯೋಗಿಗಳು ಬದ್ಧವಾಗಿರಬೇಕು. ಈ ವಿಚಾರದಲ್ಲಿ ತಾರತಮ್ಯಕ್ಕೆ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>ನ್ಯಾಯಮೂರ್ತಿಗಳಾದ ದೀಪಾಂಕರ ದತ್ತ ಹಾಗೂ ಮನಮೋಹನ್ ಅವರು ಇದ್ದ ನ್ಯಾಯಪೀಠ, ‘ಗುತ್ತಿಗೆ ವಿಚಾರದಲ್ಲಿ ಸಮಾನತೆ ಮುಖ್ಯವಾಗುತ್ತದೆ. ಗುತ್ತಿಗೆ ಒಪ್ಪಂದದ ಭಾಗವಾಗಿರುವ ಕಕ್ಷಿದಾರರ/ವ್ಯಕ್ತಿಗಳ ಪದವಿ ಅಥವಾ ಯೋಗ್ಯತೆ ಆಧಾರದಲ್ಲಿ ಪಕ್ಷಪಾತ ಮಾಡಕೂಡದು. ಹೀಗೆ ಮಾಡುವುದು ಸಮಾನತೆ ತತ್ವದ ಉಲ್ಲಂಘನೆಯಾಗುತ್ತದೆ’ ಎಂದು ಹೇಳಿದೆ.</p>.<p>ಎಚ್ಡಿಎಫ್ಸಿ ಬ್ಯಾಂಕ್ ಉದ್ಯೋಗಿಗಳಾದ ರಾಕೇಶಕುಮಾರ್ ವರ್ಮಾ ಹಾಗೂ ದೀಪ್ತಿ ಭಾಟಿಯಾ ಅವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿ, ನೀಡಿದ ತೀರ್ಪಿನಲ್ಲಿ ಪೀಠ ಈ ಮಾತು ಹೇಳಿದೆ. </p>.<p>‘ಹಕ್ಕುಗಳು ಮತ್ತು ಹೊಣೆಗಾರಿಕೆಗಳು ಒಪ್ಪಂದದ ಭಾಗವಾಗಿರುವ ವ್ಯಕ್ತಿಗಳ ಪದವಿ, ಸಾಮರ್ಥ್ಯ ಅಥವಾ ಪ್ರಭಾವದ ಮೇಲೆ ಅವಲಂಬಿತವಾಗಿರಬಾರದು’ ಎಂದು ಏಪ್ರಿಲ್ 8ರಂದು ಪ್ರಕಟಿಸಿರುವ ತೀರ್ಪಿನಲ್ಲಿ ಪೀಠ ಸ್ಪಷ್ಟಪಡಿಸಿದೆ.</p>.<p>ವರ್ಮಾ ಹಾಗೂ ಭಾಟಿಯಾ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ವ್ಯಾಜ್ಯಗಳನ್ನು ಮುಂಬೈನ ನ್ಯಾಯಾಲಯದಲ್ಲಿಯೇ ನಡೆಸಬೇಕು ಎಂಬುದು ಈ ಇಬ್ಬರ ನೇಮಕಾತಿಗೆ ಸಂಬಂಧಿಸಿದ ಆದೇಶದಲ್ಲಿನ ನಿಬಂಧನೆಯಾಗಿತ್ತು.</p>.<p>ತಮ್ಮನ್ನು ಉದ್ಯೋಗದಿಂದ ತೆಗೆದು ಹಾಕಿದ್ದನ್ನು ಪ್ರಶ್ನಿಸಿದ್ದ ವರ್ಮಾ ಹಾಗೂ ಭಾಟಿಯಾ, ತಮ್ಮ ದೂರಿಗೆ ಸಂಬಂಧಿಸಿದ ವಿಚಾರಣೆಯನ್ನು ಕ್ರಮವಾಗಿ ಪಟ್ನಾ ಹಾಗೂ ದೆಹಲಿ ನ್ಯಾಯಾಲಯಗಳಲ್ಲಿ ನಡೆಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದರು.</p>.<p>ಈ ಇಬ್ಬರ ಮೇಲ್ಮನವಿಗಳನ್ನು ತಿರಸ್ಕರಿಸಿರುವ ಪೀಠ, ‘ನೇಮಕಾತಿಗೆ ಸಂಬಂಧಿಸಿದ ನಿಬಂಧನೆಗಳನ್ನು ಒಪ್ಪಿಕೊಂಡು, ತಮಗೆ ನೀಡಿರುವ ಹುದ್ದೆಗೆ ಸೇರಿದ ಮೇಲೆ ಅದರಂತೆ ಕಾರ್ಯ ನಿರ್ವಹಿಸಬೇಕು. ಮುಂದೊಂದು ದಿನ, ನೇಮಕಾತಿಗೆ ಸಂಬಂಧಿಸಿದ ನಿಯಮವೊಂದು ತಮಗೆ ಅನುಕೂಲಕರವಾಗಿಲ್ಲ ಎಂಬ ಕಾರಣ ನೀಡಿ, ಒಪ್ಪಂದವನ್ನು ಉಲ್ಲಂಘಿಸುವಂತಿಲ್ಲ’ ಎಂದೂ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಗುತ್ತಿಗೆಯು ಕಾನೂನುಬದ್ಧ ಒಪ್ಪಂದವೇ ಆಗಿದ್ದು, ಇದಕ್ಕೆ ಉದ್ಯೋಗದಾತರು ಮತ್ತು ಉದ್ಯೋಗಿಗಳು ಬದ್ಧವಾಗಿರಬೇಕು. ಈ ವಿಚಾರದಲ್ಲಿ ತಾರತಮ್ಯಕ್ಕೆ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>ನ್ಯಾಯಮೂರ್ತಿಗಳಾದ ದೀಪಾಂಕರ ದತ್ತ ಹಾಗೂ ಮನಮೋಹನ್ ಅವರು ಇದ್ದ ನ್ಯಾಯಪೀಠ, ‘ಗುತ್ತಿಗೆ ವಿಚಾರದಲ್ಲಿ ಸಮಾನತೆ ಮುಖ್ಯವಾಗುತ್ತದೆ. ಗುತ್ತಿಗೆ ಒಪ್ಪಂದದ ಭಾಗವಾಗಿರುವ ಕಕ್ಷಿದಾರರ/ವ್ಯಕ್ತಿಗಳ ಪದವಿ ಅಥವಾ ಯೋಗ್ಯತೆ ಆಧಾರದಲ್ಲಿ ಪಕ್ಷಪಾತ ಮಾಡಕೂಡದು. ಹೀಗೆ ಮಾಡುವುದು ಸಮಾನತೆ ತತ್ವದ ಉಲ್ಲಂಘನೆಯಾಗುತ್ತದೆ’ ಎಂದು ಹೇಳಿದೆ.</p>.<p>ಎಚ್ಡಿಎಫ್ಸಿ ಬ್ಯಾಂಕ್ ಉದ್ಯೋಗಿಗಳಾದ ರಾಕೇಶಕುಮಾರ್ ವರ್ಮಾ ಹಾಗೂ ದೀಪ್ತಿ ಭಾಟಿಯಾ ಅವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿ, ನೀಡಿದ ತೀರ್ಪಿನಲ್ಲಿ ಪೀಠ ಈ ಮಾತು ಹೇಳಿದೆ. </p>.<p>‘ಹಕ್ಕುಗಳು ಮತ್ತು ಹೊಣೆಗಾರಿಕೆಗಳು ಒಪ್ಪಂದದ ಭಾಗವಾಗಿರುವ ವ್ಯಕ್ತಿಗಳ ಪದವಿ, ಸಾಮರ್ಥ್ಯ ಅಥವಾ ಪ್ರಭಾವದ ಮೇಲೆ ಅವಲಂಬಿತವಾಗಿರಬಾರದು’ ಎಂದು ಏಪ್ರಿಲ್ 8ರಂದು ಪ್ರಕಟಿಸಿರುವ ತೀರ್ಪಿನಲ್ಲಿ ಪೀಠ ಸ್ಪಷ್ಟಪಡಿಸಿದೆ.</p>.<p>ವರ್ಮಾ ಹಾಗೂ ಭಾಟಿಯಾ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ವ್ಯಾಜ್ಯಗಳನ್ನು ಮುಂಬೈನ ನ್ಯಾಯಾಲಯದಲ್ಲಿಯೇ ನಡೆಸಬೇಕು ಎಂಬುದು ಈ ಇಬ್ಬರ ನೇಮಕಾತಿಗೆ ಸಂಬಂಧಿಸಿದ ಆದೇಶದಲ್ಲಿನ ನಿಬಂಧನೆಯಾಗಿತ್ತು.</p>.<p>ತಮ್ಮನ್ನು ಉದ್ಯೋಗದಿಂದ ತೆಗೆದು ಹಾಕಿದ್ದನ್ನು ಪ್ರಶ್ನಿಸಿದ್ದ ವರ್ಮಾ ಹಾಗೂ ಭಾಟಿಯಾ, ತಮ್ಮ ದೂರಿಗೆ ಸಂಬಂಧಿಸಿದ ವಿಚಾರಣೆಯನ್ನು ಕ್ರಮವಾಗಿ ಪಟ್ನಾ ಹಾಗೂ ದೆಹಲಿ ನ್ಯಾಯಾಲಯಗಳಲ್ಲಿ ನಡೆಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದರು.</p>.<p>ಈ ಇಬ್ಬರ ಮೇಲ್ಮನವಿಗಳನ್ನು ತಿರಸ್ಕರಿಸಿರುವ ಪೀಠ, ‘ನೇಮಕಾತಿಗೆ ಸಂಬಂಧಿಸಿದ ನಿಬಂಧನೆಗಳನ್ನು ಒಪ್ಪಿಕೊಂಡು, ತಮಗೆ ನೀಡಿರುವ ಹುದ್ದೆಗೆ ಸೇರಿದ ಮೇಲೆ ಅದರಂತೆ ಕಾರ್ಯ ನಿರ್ವಹಿಸಬೇಕು. ಮುಂದೊಂದು ದಿನ, ನೇಮಕಾತಿಗೆ ಸಂಬಂಧಿಸಿದ ನಿಯಮವೊಂದು ತಮಗೆ ಅನುಕೂಲಕರವಾಗಿಲ್ಲ ಎಂಬ ಕಾರಣ ನೀಡಿ, ಒಪ್ಪಂದವನ್ನು ಉಲ್ಲಂಘಿಸುವಂತಿಲ್ಲ’ ಎಂದೂ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>