ನವದೆಹಲಿ: ‘ಧರ್ಮ, ಭಾಷೆ, ಪ್ರದೇಶ ಅಥವಾ ಇತರ ಯಾವುದೇ ಮಿತಿಯನ್ನು ಮೀರಿ ದೇಶದ ಸಹೋದರತೆಯನ್ನು ಕಾಪಾಡುವ, ಸೌಹಾರ್ದವನ್ನು ಉತ್ತೇಜಿಸುವ ಕೆಲಸ ಮಾಡುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ. ಅದರಲ್ಲೂ ನ್ಯಾಯಮೂರ್ತಿಗಳಿಗೆ ಈ ಸಂಬಂಧ ಹೆಚ್ಚಿನ ಜವಾಬ್ದಾರಿ ಇರುತ್ತದೆ’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.