<p><strong>ಜೋದ್ಪುರ:</strong> ದೇಶದ ಬಡ ಜನರಿಗೆ ನ್ಯಾಯದಾನ ವ್ಯವಸ್ಥೆಯು ಕೈಗೆ ನಿಲುಕದಂತಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>‘ದೇಶದ ನ್ಯಾಯದಾನ ವ್ಯವಸ್ಥೆಯು ದುಬಾರಿಯಾಗಿದೆ. ಬಡಜನರಿಗೆ ಇದು ನಿಲುಕದಂತಾಗಿದೆ. ಕಾರಣಗಳು ಹಲವಾರು ಇರಬಹುದು. ಆದರೆ, ಸಾಮಾನ್ಯ ನಾಗರಿಕರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ಹೋರಾಟ ನಡೆಸಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಸೃಷ್ಟಿಯಾಗಿದೆ,’ ಎಂದು ಅವರು ಆತಂಕ ವ್ಯಕ್ತಪಡಿಸಿದರು.</p>.<p>ರಾಜಸ್ಥಾನದ ಹೊಸ ಹೈಕೋರ್ಟ್ ಕಟ್ಟಡ ಉದ್ಘಾಟನೆ ವೇಳೆ ರಾಷ್ಟ್ರಪತಿಗಳು ಈ ಮಾತುಗಳನ್ನಾಡಿದ್ದಾರೆ.</p>.<p>‘ಇಂದು ಅರ್ಥಿಕ ದುರ್ಬಲನೊಬ್ಬ ಅಥವಾ ಶೋಷಿತನೊಬ್ಬ ತನ್ನ ಪ್ರಕರಣವನ್ನು ಇಲ್ಲಿಗೆ ತರಲು ಸಾಧ್ಯವಿದೆಯೇ? ನನ್ನ ಈ ಪ್ರಶ್ನೆ ಅತ್ಯಂತ ಪ್ರಮುಖವಾದದ್ದು. ಏಕೆಂದರೆ ದೇಶದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಹೊಣೆಗಾರಿಕೆ ನಾವೆಲ್ಲ ಒಪ್ಪಿರುವ ಸಂವಿಧಾನದ ಮುನ್ನುಡಿಯಲ್ಲೇ ಇದೆ,’ ಎಂದು ಕೋವಿಂದ್ ಹೇಳಿದ್ದಾರೆ.</p>.<p>‘ನ್ಯಾಯ ಪಡೆಯುವ ಪ್ರಕ್ರಿಯೆಲ್ಲಿ ವೆಚ್ಚವಾಗುವ ಕುರಿತು ಗಾಂಧೀಜಿ ಅವರೂ ಆತಂಕ ಹೊಂದಿದ್ದರು. ಬಡವರು ಮತ್ತು ಶೋಷಿತರ ಕಲ್ಯಾಣವನ್ನು ಅವರು ಪರಮ ಗುರಿ ಎಂದು ಭಾವಿಸಿದ್ದರು,’ ಎಂದು ಕೋವಿಂದ್ ಇದೇ ವೇಳೆ ನೆನೆಪಿಸಿಕೊಂಡರು.</p>.<p>ಹೈದರಾಬಾದ್ ಅತ್ಯಾಚಾರ ಪ್ರಕರಣ, ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ನ್ಯಾಯಾಂಗ ಹೋರಾಟ ಮತ್ತು ದುರಂತ ಅಂತ್ಯದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಈ ಮಾತುಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೋದ್ಪುರ:</strong> ದೇಶದ ಬಡ ಜನರಿಗೆ ನ್ಯಾಯದಾನ ವ್ಯವಸ್ಥೆಯು ಕೈಗೆ ನಿಲುಕದಂತಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>‘ದೇಶದ ನ್ಯಾಯದಾನ ವ್ಯವಸ್ಥೆಯು ದುಬಾರಿಯಾಗಿದೆ. ಬಡಜನರಿಗೆ ಇದು ನಿಲುಕದಂತಾಗಿದೆ. ಕಾರಣಗಳು ಹಲವಾರು ಇರಬಹುದು. ಆದರೆ, ಸಾಮಾನ್ಯ ನಾಗರಿಕರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ಹೋರಾಟ ನಡೆಸಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಸೃಷ್ಟಿಯಾಗಿದೆ,’ ಎಂದು ಅವರು ಆತಂಕ ವ್ಯಕ್ತಪಡಿಸಿದರು.</p>.<p>ರಾಜಸ್ಥಾನದ ಹೊಸ ಹೈಕೋರ್ಟ್ ಕಟ್ಟಡ ಉದ್ಘಾಟನೆ ವೇಳೆ ರಾಷ್ಟ್ರಪತಿಗಳು ಈ ಮಾತುಗಳನ್ನಾಡಿದ್ದಾರೆ.</p>.<p>‘ಇಂದು ಅರ್ಥಿಕ ದುರ್ಬಲನೊಬ್ಬ ಅಥವಾ ಶೋಷಿತನೊಬ್ಬ ತನ್ನ ಪ್ರಕರಣವನ್ನು ಇಲ್ಲಿಗೆ ತರಲು ಸಾಧ್ಯವಿದೆಯೇ? ನನ್ನ ಈ ಪ್ರಶ್ನೆ ಅತ್ಯಂತ ಪ್ರಮುಖವಾದದ್ದು. ಏಕೆಂದರೆ ದೇಶದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಹೊಣೆಗಾರಿಕೆ ನಾವೆಲ್ಲ ಒಪ್ಪಿರುವ ಸಂವಿಧಾನದ ಮುನ್ನುಡಿಯಲ್ಲೇ ಇದೆ,’ ಎಂದು ಕೋವಿಂದ್ ಹೇಳಿದ್ದಾರೆ.</p>.<p>‘ನ್ಯಾಯ ಪಡೆಯುವ ಪ್ರಕ್ರಿಯೆಲ್ಲಿ ವೆಚ್ಚವಾಗುವ ಕುರಿತು ಗಾಂಧೀಜಿ ಅವರೂ ಆತಂಕ ಹೊಂದಿದ್ದರು. ಬಡವರು ಮತ್ತು ಶೋಷಿತರ ಕಲ್ಯಾಣವನ್ನು ಅವರು ಪರಮ ಗುರಿ ಎಂದು ಭಾವಿಸಿದ್ದರು,’ ಎಂದು ಕೋವಿಂದ್ ಇದೇ ವೇಳೆ ನೆನೆಪಿಸಿಕೊಂಡರು.</p>.<p>ಹೈದರಾಬಾದ್ ಅತ್ಯಾಚಾರ ಪ್ರಕರಣ, ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ನ್ಯಾಯಾಂಗ ಹೋರಾಟ ಮತ್ತು ದುರಂತ ಅಂತ್ಯದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಈ ಮಾತುಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>