‘ಮುಂದಿನ ಹತ್ತು ದಿನಗಳ ಕಾಲ ಯಾರೂ ನನ್ನನ್ನು ಭೇಟಿಯಾಗುವುದು ಬೇಡ. ಎಲ್ಲರೂ ಅವರವರ ಕೆಲಸಕ್ಕೆ ಮರಳಿ. ಆಸ್ಪತ್ರೆಯಲ್ಲಿ ದಾಖಲಾಗಿರುವ ಇತರ ರೋಗಿಗಳ ಆರೋಗ್ಯವೂ ಮುಖ್ಯ. ಅವರ ಸುರಕ್ಷತೆಯೂ ನಮ್ಮೆಲ್ಲರ ಆದ್ಯತೆಯಾಗಿರಬೇಕು. ಗುಣಮುಖನಾದ ನಂತರ ಜನರನ್ನು ಭೇಟಿ ಮಾಡುತ್ತೇನೆ’ ಎಂದಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಅವರ ಸಂಪುಟದ ಸಚಿವರು, ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು, ನಟರಾದ ಚಿರಂಜೀವಿ ಹಾಗೂ ಪ್ರಕಾಶ್ ರಾಜ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕೆಸಿಆರ್ ಆರೋಗ್ಯ ವಿಚಾರಿಸಿದರು.