ಅವರದೇ ಪಕ್ಷದ ಬಾವುಟವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ರಾಹುಲ್ ಅವರಿಗೆ ಧೈರ್ಯವಿಲ್ಲ ಎಂದೂ ಅವರು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ‘ಐಯುಎಂಎಲ್ನ ಮತಗಳು ಬೇಕು. ಆದರೆ ಅದರ ಬಾವುಟ ಮುಖ್ಯವಲ್ಲ ಎಂಬ ನಿಲುವನ್ನು ಕಾಂಗ್ರೆಸ್ ಪಕ್ಷವು ಹೊಂದಿದೆ. ಅದು ಕೋಮುವಾದಿ ಶಕ್ತಿಗಳಿಗೆ ಬೆದರಿದೆ’ ಎಂದೂ ಹೇಳಿದರು. ಕಾಂಗ್ರೆಸ್ ತನ್ನ ನಿಲುವನ್ನು ಜನರ ಮುಂದೆ ಸ್ಪಷ್ಟಪಡಿಸಬೇಕು ಎಂದೂ ಆಗ್ರಹಿಸಿದರು.