<p><strong>ತಿರುವನಂತಪುರಂ:</strong> ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಇಬ್ಬರು ಮೃತಪಟ್ಟಿದ್ದು, ತಮಿಳುನಾಡಿನ ಮೂವರು ಸೇರಿದಂತೆ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ.ಕಾಸರಗೂಡು ಜಿಲ್ಲೆಯ ಕೂಡ್ಲುವಿನಲ್ಲಿ ಶನಿವಾರದವರೆಗೆ 30 ಸೆಂ.ಮೀ ಮಳೆ ದಾಖಲಾಗಿದೆ.</p>.<p>ಇಡುಕ್ಕಿ ಜಿಲ್ಲೆಯಕೊನ್ನತ್ತಡಿ ಗ್ರಾಮದಲ್ಲಿ ಶನಿವಾರ ಸಣ್ಣ ಪ್ರಮಾಣದಲ್ಲಿ ಭೂ ಕುಸಿತವಾಗಿದ್ದು,ಬೆಳೆ ನಷ್ಟವಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.</p>.<p>ಮೀನುಗಾರಿಕೆಗೆ ಹೋಗಿದ್ದ ಕೋಶಿ ವರ್ಗೀಸ್ (53) ಅವರು ತಿರುವಲ್ಲ ಬಳಿಯ ಮಣಿಮಲ ನದಿಗೆ ಜಾರಿ ಮೃತಪಟ್ಟಿದ್ದಾರೆ.ಕೊಲ್ಲಂನಲ್ಲಿ ತೆಂಗಿನ ಮರ ಬಿದ್ದುದಿಲೀಪ್ ಕುಮಾರ್ (54) ಎಂಬುವರು ಸತ್ತಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಮೂಲಗಳು ತಿಳಿಸಿವೆ.</p>.<p>ಕೊಲ್ಲಂನ ನೀಂದಕರದಿಂದ ಸಮುದ್ರಕ್ಕೆ ಹೊರಟಿದ್ದ ತಮಿಳುನಾಡಿನ ಮೂವರು ಮೀನುಗಾರರು ಕಾಣೆಯಾಗಿದ್ದಾರೆ. ಅವರ ದೋಣಿಯಲ್ಲಿದ್ದ ಇತರ ಇಬ್ಬರು ಈಜಿ ಯಶಸ್ವಿಯಾಗಿ ದಡ ಸೇರಿದ್ದಾರೆ. ಫೋರ್ಟ್ ಕೊಚ್ಚಿ ಬೀಚ್ನಲ್ಲಿ ವ್ಯಕ್ತಿಯೊಬ್ಬರು ಕಾಣೆಯಾಗಿದ್ದಾರೆ.</p>.<p><strong>ದೆಹಲಿಯ ಕೆಲವೆಡೆ ಮಳೆ</strong></p>.<p>ದೇಶದ ರಾಜಧಾನಿ ದೆಹಲಿಯ ಕೆಲವೆಡೆ ಶನಿವಾರ ಮಳೆಯಾಗಿದ್ದು, ತಾಪಮಾನ ಇಳಿಕೆಯಾಗಿದೆ.ಒಣ ಹವೆಯಿಂದ ಕಂಗಾಲಾಗಿದ್ದ ರಾಜಧಾನಿಯ ಜನರೀಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರಂ:</strong> ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಇಬ್ಬರು ಮೃತಪಟ್ಟಿದ್ದು, ತಮಿಳುನಾಡಿನ ಮೂವರು ಸೇರಿದಂತೆ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ.ಕಾಸರಗೂಡು ಜಿಲ್ಲೆಯ ಕೂಡ್ಲುವಿನಲ್ಲಿ ಶನಿವಾರದವರೆಗೆ 30 ಸೆಂ.ಮೀ ಮಳೆ ದಾಖಲಾಗಿದೆ.</p>.<p>ಇಡುಕ್ಕಿ ಜಿಲ್ಲೆಯಕೊನ್ನತ್ತಡಿ ಗ್ರಾಮದಲ್ಲಿ ಶನಿವಾರ ಸಣ್ಣ ಪ್ರಮಾಣದಲ್ಲಿ ಭೂ ಕುಸಿತವಾಗಿದ್ದು,ಬೆಳೆ ನಷ್ಟವಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.</p>.<p>ಮೀನುಗಾರಿಕೆಗೆ ಹೋಗಿದ್ದ ಕೋಶಿ ವರ್ಗೀಸ್ (53) ಅವರು ತಿರುವಲ್ಲ ಬಳಿಯ ಮಣಿಮಲ ನದಿಗೆ ಜಾರಿ ಮೃತಪಟ್ಟಿದ್ದಾರೆ.ಕೊಲ್ಲಂನಲ್ಲಿ ತೆಂಗಿನ ಮರ ಬಿದ್ದುದಿಲೀಪ್ ಕುಮಾರ್ (54) ಎಂಬುವರು ಸತ್ತಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಮೂಲಗಳು ತಿಳಿಸಿವೆ.</p>.<p>ಕೊಲ್ಲಂನ ನೀಂದಕರದಿಂದ ಸಮುದ್ರಕ್ಕೆ ಹೊರಟಿದ್ದ ತಮಿಳುನಾಡಿನ ಮೂವರು ಮೀನುಗಾರರು ಕಾಣೆಯಾಗಿದ್ದಾರೆ. ಅವರ ದೋಣಿಯಲ್ಲಿದ್ದ ಇತರ ಇಬ್ಬರು ಈಜಿ ಯಶಸ್ವಿಯಾಗಿ ದಡ ಸೇರಿದ್ದಾರೆ. ಫೋರ್ಟ್ ಕೊಚ್ಚಿ ಬೀಚ್ನಲ್ಲಿ ವ್ಯಕ್ತಿಯೊಬ್ಬರು ಕಾಣೆಯಾಗಿದ್ದಾರೆ.</p>.<p><strong>ದೆಹಲಿಯ ಕೆಲವೆಡೆ ಮಳೆ</strong></p>.<p>ದೇಶದ ರಾಜಧಾನಿ ದೆಹಲಿಯ ಕೆಲವೆಡೆ ಶನಿವಾರ ಮಳೆಯಾಗಿದ್ದು, ತಾಪಮಾನ ಇಳಿಕೆಯಾಗಿದೆ.ಒಣ ಹವೆಯಿಂದ ಕಂಗಾಲಾಗಿದ್ದ ರಾಜಧಾನಿಯ ಜನರೀಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>