<p><strong>ತಿರುವನಂತಪುರ</strong>: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಶುಕ್ರವಾರ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ.</p>.<p>2018ರಲ್ಲಿ ಸಿಎಂಡಿಆರ್ಎಫ್(ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿ)ನಲ್ಲಿ ಹಣ ದುರುಪಯೋಗಪಡಿಸಿಕೊಂಡ ಆರೋಪದಡಿ ಪಿಣರಾಯಿ ವಿಜಯನ್ ವಿರುದ್ಧ, ಸಾಮಾಜಿಕ ಕಾರ್ಯಕರ್ತ ಆರ್.ಎಸ್. ಶಶಿಕುಮಾರ್ ಪ್ರಕರಣ ದಾಖಲಿಸಿದ್ದರು.</p>.<p> ಕಳೆದ ವಾರ ಅರ್ಜಿದಾರ ಕೇರಳ ಹೈಕೋರ್ಟ್ಗೆ ಮೊರೆ ಹೋದ ನಂತರವೇ ಈ ಪ್ರಕರಣದ ತೀರ್ಪಿನ ಪ್ರಕ್ರಿಯೆ ಚುರುಕುಗೊಂಡಿದೆ.</p>.<p>ಸಿಪಿಐ(ಎಂ) ಮೃತ ಶಾಸಕರ ಕುಟುಂಬ, ಉನ್ನತ ರಾಜಕೀಯ ನಾಯಕರು ಸೇರಿದಂತೆ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಮೃತಟ್ಟಿದ್ದರು. ಇವರ ಕುಟುಂಬಕ್ಕೆ ಪರಿಹಾರ ನೀಡದೆ, ಪರಿಹಾರ ನೀಡಲಾಗಿದೆ ಎಂದು ಹೇಳಲಾಗಿತ್ತು. ಈ ಮೂಲಕ ಸಿಎಂಡಿಆರ್ಎಫ್ನಲ್ಲಿ ಹಣ ದುರುಪಯೋಗ ಮಾಡಲಾಗಿದೆ ಎಂದು ಅರ್ಜಿದಾರ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಲೋಕಾಯುಕ್ತದ ಉಭಯ ನ್ಯಾಯಮೂರ್ತಿಗಳ ಪೀಠ ಶುಕ್ರವಾರ ತೀರ್ಪು ನೀಡುವ ನೀರಿಕ್ಷೆ ಇದೆ.</p>.<p>ಸೆಪ್ಟೆಂಬರ್ 2018 ರಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂಬಂಧ ವಿಚಾರಣೆಯು ಮಾರ್ಚ್ 18, 2022 ರಂದು ಕೊನೆಗೊಂಡಿತ್ತು. ಅಂದಿನಿಂದ ತೀರ್ಪನ್ನು ಬಾಕಿ ಇರಿಸಲಾಗಿದೆ.</p>.<p>ಈ ಹಿಂದಿನ ವಿಜಯನ್ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಕೆ.ಟಿ. ಜಲೀಲ್, ಅಧಿಕಾರ ದುರ್ಬಳಕೆ ಪ್ರಕರಣದಲ್ಲಿ ಲೋಕಾಯುಕ್ತ ತೀರ್ಪಿನ ಬಳಿಕ ರಾಜೀನಾಮೆ ನೀಡಿದ್ದರು.</p>.<p>ಇವನ್ನೂ ಓದಿ: <a href="https://www.prajavani.net/india-news/alert-citizens-found-cricketer-kedar-jadhavs-father-hours-after-he-went-missing-says-pune-police-1027556.html" itemprop="url">ನಾಪತ್ತೆಯಾಗಿದ್ದ ಕ್ರಿಕೆಟಿಗ ಕೇದಾರ್ ಜಾಧವ್ ತಂದೆ ಪತ್ತೆ: ಪುಣೆ ಪೊಲೀಸರು </a></p>.<p> <a href="https://www.prajavani.net/india-news/india-witnesses-3016-fresh-covid-19-cases-highest-in-nearly-six-months-1027555.html" itemprop="url">India Covid Update | ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ </a></p>.<p> <a href="https://www.prajavani.net/india-news/powerful-blast-creates-crater-in-ground-near-india-pak-border-in-jammu-and-kashmirs-kathua-1027554.html" itemprop="url">ಕಾಶ್ಮೀರದ ಕಥುವಾದಲ್ಲಿ ಪ್ರಬಲ ಸ್ಫೋಟ: ಐಇಡಿ ದಾಳಿ ಶಂಕೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಶುಕ್ರವಾರ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ.</p>.<p>2018ರಲ್ಲಿ ಸಿಎಂಡಿಆರ್ಎಫ್(ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿ)ನಲ್ಲಿ ಹಣ ದುರುಪಯೋಗಪಡಿಸಿಕೊಂಡ ಆರೋಪದಡಿ ಪಿಣರಾಯಿ ವಿಜಯನ್ ವಿರುದ್ಧ, ಸಾಮಾಜಿಕ ಕಾರ್ಯಕರ್ತ ಆರ್.ಎಸ್. ಶಶಿಕುಮಾರ್ ಪ್ರಕರಣ ದಾಖಲಿಸಿದ್ದರು.</p>.<p> ಕಳೆದ ವಾರ ಅರ್ಜಿದಾರ ಕೇರಳ ಹೈಕೋರ್ಟ್ಗೆ ಮೊರೆ ಹೋದ ನಂತರವೇ ಈ ಪ್ರಕರಣದ ತೀರ್ಪಿನ ಪ್ರಕ್ರಿಯೆ ಚುರುಕುಗೊಂಡಿದೆ.</p>.<p>ಸಿಪಿಐ(ಎಂ) ಮೃತ ಶಾಸಕರ ಕುಟುಂಬ, ಉನ್ನತ ರಾಜಕೀಯ ನಾಯಕರು ಸೇರಿದಂತೆ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಮೃತಟ್ಟಿದ್ದರು. ಇವರ ಕುಟುಂಬಕ್ಕೆ ಪರಿಹಾರ ನೀಡದೆ, ಪರಿಹಾರ ನೀಡಲಾಗಿದೆ ಎಂದು ಹೇಳಲಾಗಿತ್ತು. ಈ ಮೂಲಕ ಸಿಎಂಡಿಆರ್ಎಫ್ನಲ್ಲಿ ಹಣ ದುರುಪಯೋಗ ಮಾಡಲಾಗಿದೆ ಎಂದು ಅರ್ಜಿದಾರ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಲೋಕಾಯುಕ್ತದ ಉಭಯ ನ್ಯಾಯಮೂರ್ತಿಗಳ ಪೀಠ ಶುಕ್ರವಾರ ತೀರ್ಪು ನೀಡುವ ನೀರಿಕ್ಷೆ ಇದೆ.</p>.<p>ಸೆಪ್ಟೆಂಬರ್ 2018 ರಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂಬಂಧ ವಿಚಾರಣೆಯು ಮಾರ್ಚ್ 18, 2022 ರಂದು ಕೊನೆಗೊಂಡಿತ್ತು. ಅಂದಿನಿಂದ ತೀರ್ಪನ್ನು ಬಾಕಿ ಇರಿಸಲಾಗಿದೆ.</p>.<p>ಈ ಹಿಂದಿನ ವಿಜಯನ್ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಕೆ.ಟಿ. ಜಲೀಲ್, ಅಧಿಕಾರ ದುರ್ಬಳಕೆ ಪ್ರಕರಣದಲ್ಲಿ ಲೋಕಾಯುಕ್ತ ತೀರ್ಪಿನ ಬಳಿಕ ರಾಜೀನಾಮೆ ನೀಡಿದ್ದರು.</p>.<p>ಇವನ್ನೂ ಓದಿ: <a href="https://www.prajavani.net/india-news/alert-citizens-found-cricketer-kedar-jadhavs-father-hours-after-he-went-missing-says-pune-police-1027556.html" itemprop="url">ನಾಪತ್ತೆಯಾಗಿದ್ದ ಕ್ರಿಕೆಟಿಗ ಕೇದಾರ್ ಜಾಧವ್ ತಂದೆ ಪತ್ತೆ: ಪುಣೆ ಪೊಲೀಸರು </a></p>.<p> <a href="https://www.prajavani.net/india-news/india-witnesses-3016-fresh-covid-19-cases-highest-in-nearly-six-months-1027555.html" itemprop="url">India Covid Update | ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ </a></p>.<p> <a href="https://www.prajavani.net/india-news/powerful-blast-creates-crater-in-ground-near-india-pak-border-in-jammu-and-kashmirs-kathua-1027554.html" itemprop="url">ಕಾಶ್ಮೀರದ ಕಥುವಾದಲ್ಲಿ ಪ್ರಬಲ ಸ್ಫೋಟ: ಐಇಡಿ ದಾಳಿ ಶಂಕೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>