<p><strong>ಆಲಪ್ಪುಳ:</strong> ಕೇರಳ ರಾಜ್ಯದ 'ತಿರುವೋಣಂ ಬಂಪರ್' ಲಾಟರಿಯಲ್ಲಿ ಆಲಪ್ಪುಳ ಜಿಲ್ಲೆಯ ಶರತ್ ನಾಯರ್ ಎಂಬವರು ₹25 ಕೋಟಿ ಬಹುಮಾನ ಗೆದ್ದಿದ್ದಾರೆ. </p><p>ಶರತ್ ನಾಯರ್ ಅವರು ಆಲಪ್ಪುಳ ಜಿಲ್ಲೆಯ ಥೈಕಟ್ಟುಶ್ಶೇರಿ ನಿವಾಸಿಯಾಗಿದ್ದಾರೆ. 'TH 577825' ಎಂಬ ಅಂಕಿಯ ಟಿಕೆಟ್ಗೆ ಬಂಪರ್ ಅದೃಷ್ಟ ಒಲಿದು ಬಂದಿದೆ. </p><p>ಲತೀಶ್ ಒಡೆತನದ ಲಾಟರಿ ಏಜೆನ್ಸಿಯಿಂದ ಶರತ್ ಟಿಕೆಟ್ ಖರೀಸಿದ್ದರು. ಇದೀಗ ಬಂಪರ್ ಬಹುಮಾನದ ಟಿಕೆಟ್ ಅನ್ನು ತುರಾವೂರ್ನ ಎಸ್ಬಿಐ ಬ್ಯಾಂಕ್ಗೆ ಸಲ್ಲಿಸಿದ್ದಾರೆ. </p><p>ಅಕ್ಟೋಬರ್ 3ರಂದು ಫಲಿತಾಂಶ ಹೊರಬಿದ್ದಿತ್ತು. 'ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮನೆಗೆ ಹೋಗಿ ಲಾಟರಿ ಟಿಕೆಟ್ ಪರಿಶೀಲಿಸಿದಾಗ ಬಂಪರ್ ಬಹುಮಾನ ಗೆದ್ದಿರುವ ಬಗ್ಗೆ ಖಚಿತವಾಯಿತು' ಎಂದು ಹೇಳಿದ್ದಾರೆ. </p><p>'ನಾನು ವಿರಳವಾಗಿ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತೇನೆ. ಬಂಪರ್ ಟಿಕೆಟ್ ಖರೀದಿಸಿದ್ದು ಇದೇ ಮೊದಲು' ಎಂದು ಹೇಳಿದ್ದಾರೆ. </p><p>'ಬಹುಮಾನ ಮೊತ್ತದ ಯೋಜನೆಗಳ ಬಗ್ಗೆ ಕೇಳಿದಾಗ, ನಾನು ಏನನ್ನೂ ಯೋಜಿಸಿಲ್ಲ. ಸ್ವಲ್ಪ ಸಾಲಗಳನ್ನು ತೀರಿಸಬೇಕಿದೆ. ಕುಟುಂಬದೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ. </p><p>'ನಾನು ಕಳೆದ 12 ವರ್ಷಗಳಿಂದ ಪೇಂಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅದೇ ಕೆಲಸದಲ್ಲಿ ಮುಂದುವರಿಯುತ್ತೇನೆ' ಎಂದು ಹೇಳಿದ್ದಾರೆ. </p><p>ಕೇರಳ ರಾಜ್ಯ ಲಾಟರಿ ಇಲಾಖೆಯ ಅಡಿಯಲ್ಲಿ ಓಣಂ ಹಬ್ಬದ ಪ್ರಯುಕ್ತ ತಿರುವೋಣಂ ಬಂಪರ್ ಲಾಟರಿ ಡ್ರಾ ಏರ್ಪಡಿಸಲಾಗಿತ್ತು. </p>.‘ಲಾಟರಿ ರಾಜ’ ಪ್ರಕರಣ | ಎಲೆಕ್ಟ್ರಾನಿಕ್ ಸಾಧನ ಪರಿಶೀಲನೆಗೆ ನಿರ್ಬಂಧ: 'ಸುಪ್ರೀಂ'.EVM ಇದ್ದರೆ ಎಲ್ಲವೂ ಸಾಧ್ಯ; ಮಹಾಯುತಿ ವಿಜಯ ಬಂಪರ್ ಲಾಟರಿ ಇದ್ದಂತೆ: ಸಾಮ್ನಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಪ್ಪುಳ:</strong> ಕೇರಳ ರಾಜ್ಯದ 'ತಿರುವೋಣಂ ಬಂಪರ್' ಲಾಟರಿಯಲ್ಲಿ ಆಲಪ್ಪುಳ ಜಿಲ್ಲೆಯ ಶರತ್ ನಾಯರ್ ಎಂಬವರು ₹25 ಕೋಟಿ ಬಹುಮಾನ ಗೆದ್ದಿದ್ದಾರೆ. </p><p>ಶರತ್ ನಾಯರ್ ಅವರು ಆಲಪ್ಪುಳ ಜಿಲ್ಲೆಯ ಥೈಕಟ್ಟುಶ್ಶೇರಿ ನಿವಾಸಿಯಾಗಿದ್ದಾರೆ. 'TH 577825' ಎಂಬ ಅಂಕಿಯ ಟಿಕೆಟ್ಗೆ ಬಂಪರ್ ಅದೃಷ್ಟ ಒಲಿದು ಬಂದಿದೆ. </p><p>ಲತೀಶ್ ಒಡೆತನದ ಲಾಟರಿ ಏಜೆನ್ಸಿಯಿಂದ ಶರತ್ ಟಿಕೆಟ್ ಖರೀಸಿದ್ದರು. ಇದೀಗ ಬಂಪರ್ ಬಹುಮಾನದ ಟಿಕೆಟ್ ಅನ್ನು ತುರಾವೂರ್ನ ಎಸ್ಬಿಐ ಬ್ಯಾಂಕ್ಗೆ ಸಲ್ಲಿಸಿದ್ದಾರೆ. </p><p>ಅಕ್ಟೋಬರ್ 3ರಂದು ಫಲಿತಾಂಶ ಹೊರಬಿದ್ದಿತ್ತು. 'ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮನೆಗೆ ಹೋಗಿ ಲಾಟರಿ ಟಿಕೆಟ್ ಪರಿಶೀಲಿಸಿದಾಗ ಬಂಪರ್ ಬಹುಮಾನ ಗೆದ್ದಿರುವ ಬಗ್ಗೆ ಖಚಿತವಾಯಿತು' ಎಂದು ಹೇಳಿದ್ದಾರೆ. </p><p>'ನಾನು ವಿರಳವಾಗಿ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತೇನೆ. ಬಂಪರ್ ಟಿಕೆಟ್ ಖರೀದಿಸಿದ್ದು ಇದೇ ಮೊದಲು' ಎಂದು ಹೇಳಿದ್ದಾರೆ. </p><p>'ಬಹುಮಾನ ಮೊತ್ತದ ಯೋಜನೆಗಳ ಬಗ್ಗೆ ಕೇಳಿದಾಗ, ನಾನು ಏನನ್ನೂ ಯೋಜಿಸಿಲ್ಲ. ಸ್ವಲ್ಪ ಸಾಲಗಳನ್ನು ತೀರಿಸಬೇಕಿದೆ. ಕುಟುಂಬದೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ. </p><p>'ನಾನು ಕಳೆದ 12 ವರ್ಷಗಳಿಂದ ಪೇಂಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅದೇ ಕೆಲಸದಲ್ಲಿ ಮುಂದುವರಿಯುತ್ತೇನೆ' ಎಂದು ಹೇಳಿದ್ದಾರೆ. </p><p>ಕೇರಳ ರಾಜ್ಯ ಲಾಟರಿ ಇಲಾಖೆಯ ಅಡಿಯಲ್ಲಿ ಓಣಂ ಹಬ್ಬದ ಪ್ರಯುಕ್ತ ತಿರುವೋಣಂ ಬಂಪರ್ ಲಾಟರಿ ಡ್ರಾ ಏರ್ಪಡಿಸಲಾಗಿತ್ತು. </p>.‘ಲಾಟರಿ ರಾಜ’ ಪ್ರಕರಣ | ಎಲೆಕ್ಟ್ರಾನಿಕ್ ಸಾಧನ ಪರಿಶೀಲನೆಗೆ ನಿರ್ಬಂಧ: 'ಸುಪ್ರೀಂ'.EVM ಇದ್ದರೆ ಎಲ್ಲವೂ ಸಾಧ್ಯ; ಮಹಾಯುತಿ ವಿಜಯ ಬಂಪರ್ ಲಾಟರಿ ಇದ್ದಂತೆ: ಸಾಮ್ನಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>