<p><strong>ತಿರುವನಂತಪುರ:</strong> ಕೇರಳ ಸರ್ಕಾರದ ತಿರುಓಣಂ ಬಂಪರ್ ಲಾಟರಿಯಲ್ಲಿ ಪೇಂಟ್ ಅಂಗಡಿಯ ಕಾರ್ಮಿಕರೊಬ್ಬರು ಬರೋಬ್ಬರಿ ₹25 ಕೋಟಿ ಬಹುಮಾನವನ್ನು ಪಡೆದಿದ್ದಾರೆ.</p><p>ಆಲಪ್ಪುಳ ನಿವಾಸಿ, ಕೊಚ್ಚಿಯ ಪೇಂಟ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶರತ್ ಎಸ್.ನಾಯರ್ ಅವರು ₹500 ಕೊಟ್ಟು ಖರೀದಿಸಿದ ಲಾಟರಿ ಟಿಕೆಟ್, ಅವರನ್ನು ಕೋಟ್ಯಧಿಪತಿಯನ್ನಾಗಿಸಿದೆ. ಶನಿವಾರ ಬಹುಮಾನ ಘೋಷಣೆಯಾಗಿದ್ದು, ಶರತ್ ಅವರು ಸೋಮವಾರ ಬ್ಯಾಂಕ್ನಲ್ಲಿ ಚೆಕ್ ಜಮೆ ಮಾಡಿದರು.</p><p>ನೆಟ್ಟೂರಿನಲ್ಲಿರುವ ಏಜೆಂಟ್ ಲತೀಶ್ ಎಂಬವರಿಂದ ಶರತ್ ಟಿಕೆಟ್ ಖರೀದಿಸಿದ್ದರು. </p><p>‘ಇದೇ ಮೊದಲ ಬಾರಿ ನಾನು ಬಂಪರ್ ಟಿಕೆಟ್ ಅನ್ನು ಖರಿದೀಸಿದ್ದು, ಮೊದಲು ಸಣ್ಣ ಬಹುಮಾನಗಳನ್ನು ಹೊಂದಿದ್ದ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತಿದ್ದೆ’ ಎಂದು ಶರತ್ ಅವರು ಹೇಳಿದ್ದಾರೆ.</p><p>ಕೇರಳ ರಾಜ್ಯ ಲಾಟರಿ ಇಲಾಖೆ ನಡೆಸುವ ಲಾಟರಿಗಳಲ್ಲಿ ‘ತಿರುಓಣಂ ಬಂಪರ್’ ಅತೀ ಹೆಚ್ಚು ಬಹುಮಾನವನ್ನು ಹೊಂದಿರುವ ಲಾಟರಿಯಾಗಿದೆ.</p>.‘ಲಾಟರಿ ರಾಜ’ ಪ್ರಕರಣ | ಎಲೆಕ್ಟ್ರಾನಿಕ್ ಸಾಧನ ಪರಿಶೀಲನೆಗೆ ನಿರ್ಬಂಧ: 'ಸುಪ್ರೀಂ'.EVM ಇದ್ದರೆ ಎಲ್ಲವೂ ಸಾಧ್ಯ; ಮಹಾಯುತಿ ವಿಜಯ ಬಂಪರ್ ಲಾಟರಿ ಇದ್ದಂತೆ: ಸಾಮ್ನಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಕೇರಳ ಸರ್ಕಾರದ ತಿರುಓಣಂ ಬಂಪರ್ ಲಾಟರಿಯಲ್ಲಿ ಪೇಂಟ್ ಅಂಗಡಿಯ ಕಾರ್ಮಿಕರೊಬ್ಬರು ಬರೋಬ್ಬರಿ ₹25 ಕೋಟಿ ಬಹುಮಾನವನ್ನು ಪಡೆದಿದ್ದಾರೆ.</p><p>ಆಲಪ್ಪುಳ ನಿವಾಸಿ, ಕೊಚ್ಚಿಯ ಪೇಂಟ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶರತ್ ಎಸ್.ನಾಯರ್ ಅವರು ₹500 ಕೊಟ್ಟು ಖರೀದಿಸಿದ ಲಾಟರಿ ಟಿಕೆಟ್, ಅವರನ್ನು ಕೋಟ್ಯಧಿಪತಿಯನ್ನಾಗಿಸಿದೆ. ಶನಿವಾರ ಬಹುಮಾನ ಘೋಷಣೆಯಾಗಿದ್ದು, ಶರತ್ ಅವರು ಸೋಮವಾರ ಬ್ಯಾಂಕ್ನಲ್ಲಿ ಚೆಕ್ ಜಮೆ ಮಾಡಿದರು.</p><p>ನೆಟ್ಟೂರಿನಲ್ಲಿರುವ ಏಜೆಂಟ್ ಲತೀಶ್ ಎಂಬವರಿಂದ ಶರತ್ ಟಿಕೆಟ್ ಖರೀದಿಸಿದ್ದರು. </p><p>‘ಇದೇ ಮೊದಲ ಬಾರಿ ನಾನು ಬಂಪರ್ ಟಿಕೆಟ್ ಅನ್ನು ಖರಿದೀಸಿದ್ದು, ಮೊದಲು ಸಣ್ಣ ಬಹುಮಾನಗಳನ್ನು ಹೊಂದಿದ್ದ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತಿದ್ದೆ’ ಎಂದು ಶರತ್ ಅವರು ಹೇಳಿದ್ದಾರೆ.</p><p>ಕೇರಳ ರಾಜ್ಯ ಲಾಟರಿ ಇಲಾಖೆ ನಡೆಸುವ ಲಾಟರಿಗಳಲ್ಲಿ ‘ತಿರುಓಣಂ ಬಂಪರ್’ ಅತೀ ಹೆಚ್ಚು ಬಹುಮಾನವನ್ನು ಹೊಂದಿರುವ ಲಾಟರಿಯಾಗಿದೆ.</p>.‘ಲಾಟರಿ ರಾಜ’ ಪ್ರಕರಣ | ಎಲೆಕ್ಟ್ರಾನಿಕ್ ಸಾಧನ ಪರಿಶೀಲನೆಗೆ ನಿರ್ಬಂಧ: 'ಸುಪ್ರೀಂ'.EVM ಇದ್ದರೆ ಎಲ್ಲವೂ ಸಾಧ್ಯ; ಮಹಾಯುತಿ ವಿಜಯ ಬಂಪರ್ ಲಾಟರಿ ಇದ್ದಂತೆ: ಸಾಮ್ನಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>