ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್ ಕೇಳಿದ್ದಕ್ಕೆ ಶಾಸಕನ ರಂಪ

Last Updated 18 ಜುಲೈ 2018, 17:13 IST
ಅಕ್ಷರ ಗಾತ್ರ

ತ್ರಿಶೂರ್ (ಪಿಟಿಐ): ಹಣ ಪಾವತಿಸುವಂತೆ ಕೇಳಿದ್ದಕ್ಕೆ ಸಿಟ್ಟಿಗೆದ್ದ ಶಾಸಕ ಪಿ.ಸಿ. ಜಾರ್ಜ್ ಅವರು ಟೋಲ್‌ ಪ್ಲಾಜಾದ ಗೇಟ್ ಮುರಿದು ಹಾಕಿದ್ದಾರೆ.

ಮಂಗಳವಾರ ರಾತ್ರಿ ತಮ್ಮ ಐಷಾರಾಮಿ ಕಾರಿನಲ್ಲಿ ಕೊಚ್ಚಿಯಿಂದ ತ್ರಿಶೂರ್‌ಗೆ ವಾಪಸಾಗುತ್ತಿದ್ದ ಶಾಸಕರು, ಪಳಿಯಕ್ಕರ ಎಂಬಲ್ಲಿ ಟೋಲ್‌ ಅನ್ನು ಪ್ರವೇಶಿಸಿದಾಗ ಈ ಘಟನೆ ನಡೆದಿದೆ. ಕಾರಿನ ಮೇಲೆ ‘ಎಂಎಲ್‌ಎ ಫಲಕ’ ಇದ್ದರೂ ಪ್ರವೇಶ ನಿರಾಕರಿಸಲಾಯಿತು ಎಂಬುದು ಜಾರ್ಜ್ ಅವರ ವಾದ.

ಕಾರಿನಿಂದ ಇಳಿದ ಶಾಸಕರು, ಬೆಂಬಲಿಗರ ಜೊತೆ ಟೋಲ್‌ನ ಗೇಟ್‌ ಅನ್ನು ಮುರಿದುಹಾಕುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ವಾಹನಗಳು ಸರತಿ ಸಾಲಿನಲ್ಲಿ ಸಾಗುವಾಗ ಸ್ವಲ್ಪ ವಿಳಂಬವಾಯಿತು ಎಂದು ಟೋಲ್ ಸಿಬ್ಬಂದಿ ಹೇಳಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿಲ್ಲ.

ಈ ಹಿಂದೆಯೂ ಅವರು ವಿವಾದದಲ್ಲಿ ಸಿಲುಕಿದ್ದರು. ಶಾಸಕರ ಭವನದಲ್ಲಿ ಊಟವನ್ನು ತಡವಾಗಿ ತಂದವನ ಕಪಾಳಕ್ಕೆ ಬಾರಿಸಿದ್ದರು. ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ ಎಸ್ಟೇಟ್‌ ಕಾರ್ಮಿಕರ ಮೇಲೆ ಪಿಸ್ತೂಲ್ ತೋರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT