<p class="title"><strong>ನವದೆಹಲಿ: </strong>ಕೇರಳದ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಹೊರಡಿಸಿರುವ ಸುಗ್ರೀವಾಜ್ಞೆ ಕುರಿತು ಮರುಪರಿಶೀಲನೆ ನಡೆಯಲಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸೋಮವಾರ ತಿಳಿಸಿದ್ದಾರೆ.</p>.<p class="title">ತಿದ್ದುಪಡಿ ಸುಗ್ರೀವಾಜ್ಞೆಯು ವಿವಾದದ ಸ್ವರೂಪ ತಳೆಯುತ್ತಿದ್ದಂತೆ ಈ ಹೇಳಿಕೆ ಹೊರಬಿದ್ದಿದೆ. ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಹೆಚ್ಚವರಿಯಾಗಿ ಸೆಕ್ಷನ್ 118–ಎ ಸೇರ್ಪಡೆಗೊಳಿಸಲು ಕೇರಳ ಸಚಿವ ಸಂಪುಟ ಕಳೆದ ತಿಂಗಳು ತೀರ್ಮಾನಿಸಿತ್ತು.</p>.<p class="title">ಈ ತಿದ್ದುಪಡಿ ಅನುಸಾರ, ವ್ಯಕ್ತಿಗೆ ಅವಮಾನಿಸುವ ಉದ್ದೇಶದ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವುದು ಸಾಬೀತಾದಲ್ಲಿ ಐದು ವರ್ಷದವರೆಗೂ ಸಜೆ, ₹ 10 ಸಾವಿರ ರೂಪಾಯಿವರೆಗೂ ದಂಡ ವಿಧಿಸಲು ಅವಕಾಶವಿದೆ.</p>.<p class="title">ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರವು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಇದರಿಂದ ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳು ಕುಗ್ಗಲಿವೆ ಎಂದು ಪ್ರತಿಪಾದಿಸಿತ್ತು.</p>.<p class="title">ಸುಗ್ರೀವಾಜ್ಞೆ ಪರಿಶೀಲಿಸಲಾಗುವುದು ಎಂದು ಯೆಚೂರಿ ತಿಳಿಸಿದರು. ಅಂದರೆ ಅದರ ಪರಿಣಾಮ ಕುಗ್ಗಿಸುವುದೇ ಎಂಬ ಪ್ರಶ್ನೆಗೆ, ‘ಅದನ್ನು ಕೈಬಿಡಲಾಗುವುದು’ ಎಂದು ಪ್ರತಿಕ್ರಿಯಿಸಿದರು. ಸಿಪಿಐ ಮತ್ತು ಸಿಪಿಎಂ ಎರಡೂ ಈ ಕುರಿತು ಇಂಗಿತವನ್ನು ನೀಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ: </strong>ಕೇರಳದ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಹೊರಡಿಸಿರುವ ಸುಗ್ರೀವಾಜ್ಞೆ ಕುರಿತು ಮರುಪರಿಶೀಲನೆ ನಡೆಯಲಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸೋಮವಾರ ತಿಳಿಸಿದ್ದಾರೆ.</p>.<p class="title">ತಿದ್ದುಪಡಿ ಸುಗ್ರೀವಾಜ್ಞೆಯು ವಿವಾದದ ಸ್ವರೂಪ ತಳೆಯುತ್ತಿದ್ದಂತೆ ಈ ಹೇಳಿಕೆ ಹೊರಬಿದ್ದಿದೆ. ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಹೆಚ್ಚವರಿಯಾಗಿ ಸೆಕ್ಷನ್ 118–ಎ ಸೇರ್ಪಡೆಗೊಳಿಸಲು ಕೇರಳ ಸಚಿವ ಸಂಪುಟ ಕಳೆದ ತಿಂಗಳು ತೀರ್ಮಾನಿಸಿತ್ತು.</p>.<p class="title">ಈ ತಿದ್ದುಪಡಿ ಅನುಸಾರ, ವ್ಯಕ್ತಿಗೆ ಅವಮಾನಿಸುವ ಉದ್ದೇಶದ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವುದು ಸಾಬೀತಾದಲ್ಲಿ ಐದು ವರ್ಷದವರೆಗೂ ಸಜೆ, ₹ 10 ಸಾವಿರ ರೂಪಾಯಿವರೆಗೂ ದಂಡ ವಿಧಿಸಲು ಅವಕಾಶವಿದೆ.</p>.<p class="title">ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರವು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಇದರಿಂದ ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳು ಕುಗ್ಗಲಿವೆ ಎಂದು ಪ್ರತಿಪಾದಿಸಿತ್ತು.</p>.<p class="title">ಸುಗ್ರೀವಾಜ್ಞೆ ಪರಿಶೀಲಿಸಲಾಗುವುದು ಎಂದು ಯೆಚೂರಿ ತಿಳಿಸಿದರು. ಅಂದರೆ ಅದರ ಪರಿಣಾಮ ಕುಗ್ಗಿಸುವುದೇ ಎಂಬ ಪ್ರಶ್ನೆಗೆ, ‘ಅದನ್ನು ಕೈಬಿಡಲಾಗುವುದು’ ಎಂದು ಪ್ರತಿಕ್ರಿಯಿಸಿದರು. ಸಿಪಿಐ ಮತ್ತು ಸಿಪಿಎಂ ಎರಡೂ ಈ ಕುರಿತು ಇಂಗಿತವನ್ನು ನೀಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>