<p><strong>ಕೊಲ್ಲಂ:</strong> ಪತ್ನಿಯ ಸಹಜೀವನ ಸಂಗಾತಿಯಿಂದ ಚಾಕು ಇರಿತಕ್ಕೆ ಒಳಗಾಗಿದ್ದ ವ್ಯಕ್ತಿಯು ಕೊನೆಯುಸಿರೆಳೆದ ಘಟನೆಯು ಕೇರಳದ ನಡುವತ್ತೂರಿನಲ್ಲಿ ಜರುಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. </p><p>ಶ್ಯಾಮಸುಂದರ(41) ಎನ್ನುವವರನ್ನು ಕೊಲೆ ಮಾಡಿದ ಆರೋಪದ ಮೇಲೆ ಧನುಷ್(37) ಅವರನ್ನು ಬಂಧಿಸಲಾಗಿದೆ. </p><p>ನಾಲ್ಕು ವರ್ಷದ ಹಿಂದೆ ಇಬ್ಬರಿಗೂ ಜಗಳವಾಗಿತ್ತು. ನಂತರ ಶ್ಯಾಮಸುಂದರ ಅವರ ಪತ್ನಿ ಹಾಗೂ ಮಗು, ಆರೋಪಿಯ ಜೊತೆಯಲ್ಲೇ ವಾಸವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. </p><p>ಶುಕ್ರವಾರ ರಾತ್ರಿ ಮತ್ತೆ ಅವರಿಬ್ಬರ ನಡುವೆ ಜಗಳವಾಗಿತ್ತು. ತನ್ನ ಪತ್ನಿಯನ್ನು ಉಪಯೋಗಿಸಿಕೊಂಡು, ಆಸ್ತಿ ಕಬಳಿಸುವ ಪ್ರಯತ್ನ ಮಾಡುತ್ತಿರುವುದಾಗಿ ಶ್ಯಾಮಸುಂದರ ಅವರು ಧನುಷ್ ಮೇಲೆ ಆರೋಪಿಸಿದ್ದರು. ನೆರೆಹೊರೆಯವರು ಜಗಳ ಬಿಡಿಸಿದ್ದರು. ಆದರೆ, ನಂತರ ಆರೋಪಿಯು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. </p><p>ಸ್ಥಳೀಯರು ತಕ್ಷಣವೇ ಶ್ಯಾಮಸುಂದರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲ್ಲಂ:</strong> ಪತ್ನಿಯ ಸಹಜೀವನ ಸಂಗಾತಿಯಿಂದ ಚಾಕು ಇರಿತಕ್ಕೆ ಒಳಗಾಗಿದ್ದ ವ್ಯಕ್ತಿಯು ಕೊನೆಯುಸಿರೆಳೆದ ಘಟನೆಯು ಕೇರಳದ ನಡುವತ್ತೂರಿನಲ್ಲಿ ಜರುಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. </p><p>ಶ್ಯಾಮಸುಂದರ(41) ಎನ್ನುವವರನ್ನು ಕೊಲೆ ಮಾಡಿದ ಆರೋಪದ ಮೇಲೆ ಧನುಷ್(37) ಅವರನ್ನು ಬಂಧಿಸಲಾಗಿದೆ. </p><p>ನಾಲ್ಕು ವರ್ಷದ ಹಿಂದೆ ಇಬ್ಬರಿಗೂ ಜಗಳವಾಗಿತ್ತು. ನಂತರ ಶ್ಯಾಮಸುಂದರ ಅವರ ಪತ್ನಿ ಹಾಗೂ ಮಗು, ಆರೋಪಿಯ ಜೊತೆಯಲ್ಲೇ ವಾಸವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. </p><p>ಶುಕ್ರವಾರ ರಾತ್ರಿ ಮತ್ತೆ ಅವರಿಬ್ಬರ ನಡುವೆ ಜಗಳವಾಗಿತ್ತು. ತನ್ನ ಪತ್ನಿಯನ್ನು ಉಪಯೋಗಿಸಿಕೊಂಡು, ಆಸ್ತಿ ಕಬಳಿಸುವ ಪ್ರಯತ್ನ ಮಾಡುತ್ತಿರುವುದಾಗಿ ಶ್ಯಾಮಸುಂದರ ಅವರು ಧನುಷ್ ಮೇಲೆ ಆರೋಪಿಸಿದ್ದರು. ನೆರೆಹೊರೆಯವರು ಜಗಳ ಬಿಡಿಸಿದ್ದರು. ಆದರೆ, ನಂತರ ಆರೋಪಿಯು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. </p><p>ಸ್ಥಳೀಯರು ತಕ್ಷಣವೇ ಶ್ಯಾಮಸುಂದರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>