ಗಲಭೆಕೋರರಿಂದ ಆಸ್ತಿ ನಷ್ಟದ ಪರಿಹಾರವನ್ನು ವಸೂಲಿ ಮಾಡುವುದನ್ನು ನ್ಯಾಯಮಂಡಳಿಯು ಖಾತ್ರಿ ಪಡಿಸಲಿದೆ. ಭಾನುವಾರ ಖರ್ಗೋನ್ನಲ್ಲಿ ರಾಮ ನವಮಿ ಆಚರಣೆಗೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಹಿಂಸಾಚಾರದ ವೇಳೆ ಆಗಿರುವ ನಷ್ಟದ ಬಗ್ಗೆ ತಿಳಿಯಲು ಹಾಗೂ ಗಲಭೆಕೋರರಿಂದ ನಷ್ಟ ಪರಿಹಾರ ವಸೂಲಿ ಮಾಡಲು ನ್ಯಾಯಮಂಡಳಿ ರಚಿಸುವುದಾಗಿ ಹೇಳಿದ್ದರು.