‘ಇಂತಹ ಕೃತ್ಯದಲ್ಲಿ ಆತ ಹೇಗೆ ಭಾಗಿಯಾದ ಎಂಬುದೇ ನಮಗೆ ತಿಳಿದಿಲ್ಲ. ಆತ ಎಂದೂ ತೊಂದರೆಗೆ ಸಿಲುಕಿದವನಲ್ಲ. ಸಣ್ಣಂದಿನಿಂದಲೇ ಶಾಂತ ಸ್ವಭಾವದನಾಗಿದ್ದನಲ್ಲದೆ, ಅಂತರ್ಮುಖಿಯಾಗಿರುತ್ತಿದ್ದ. ಎನ್ಜಿಒಗೆ ಕೆಲಸ ಮಾಡುತ್ತಿದ್ದ ಎಂಬುದು ನಮಗೆ ಗೊತ್ತಿತ್ತು. ಸುದ್ದಿವಾಹಿನಿಗಳಲ್ಲಿ ಆತನನ್ನು ತೋರಿಸಿದಾಗ ನಮಗೆ ಆಘಾತವಾಯಿತು’ ಎಂದು ಶುಕ್ರವಾರ ಹೇಳಿದ್ದಾರೆ.