<p><strong>ತಿರುವನಂತಪುರಂ:</strong> ‘ಮಲಪ್ಪುರದ ಕರಿಪ್ಪೂರ್ ವಿಮಾನನಿಲ್ದಾಣದಲ್ಲಿ ಕಳ್ಳಸಾಗಣೆ ಭಾಗಿಯಾಗುವವರ ಪೈಕಿ ಬಹುತೇಕ ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು’ ಎಂದು ಎಡಪಕ್ಷದ ಶಾಸಕ ಕೆ.ಟಿ.ಜಲೀಲ್ ಅವರು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.</p>.<p>ಈ ಹೇಳಿಕೆಗೆ ಐಯುಎಂಲ್ ಹಾಗೂ ಎಡಪಕ್ಷದ ಬಂಡಾಯ ಶಾಸಕ ಪಿ.ವಿ.ಅನ್ವರ್ ಕಿಡಿಕಾರಿದ್ದಾರೆ.</p>.<p>ಫೇಸ್ಬುಕ್ನಲ್ಲಿ ವಿವರವಾಗಿ ಬರೆದಿರುವ ಜಲೀಲ್ ಅವರು, ‘ಚಿನ್ನ ಕಳ್ಳಸಾಗಣೆ ಹಾಗೂ ಹವಾಲಾ ಅಪರಾಧದಲ್ಲಿ ಭಾಗಿಯಾಗುವವರಲ್ಲಿ ಬಹುಪಾಲು ಮಂದಿ ಮುಸ್ಲಿಂ ಸಮುದಾಯದವರು. ಇಂತಹ ಯಾವುದೇ ಚಟುವಟಿಕೆಗಳು ಕೂಡ ‘ಧಾರ್ಮಿಕವಲ್ಲ’. ಈ ವಿಚಾರದಲ್ಲಿ ಸಮುದಾಯದ ಮುಖಂಡರು ಮಧ್ಯಪ್ರವೇಶಿಸಿ, ಇಂತಹ ಕೃತ್ಯದಲ್ಲಿ ಭಾಗಿಯಾದವರಿಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದ್ದಾರೆ.</p>.<p>‘ಯಾವುದೇ ಸಮುದಾಯದವರು ತಪ್ಪು ಮಾಡಿದ್ದರೆ, ಸಮುದಾಯದ ಸದಸ್ಯರು ಕಟುವಾಗಿ ವಿರೋಧಿಸಬೇಕು. ಕ್ರೈಸ್ತರು ತಪ್ಪು ಮಾಡಿದರೆ, ಆ ಸಮುದಾಯದವರು ವಿರೋಧಿಸಬೇಕು. ಮುಸಲ್ಮಾನರು ತಪ್ಪು ಮಾಡಿದ ವೇಳೆ ಸಮುದಾಯದವರು ಖಂಡಿಸಬೇಕು. ಹಿಂದೂ ಸಮುದಾಯದಲ್ಲಿ ತಪ್ಪುಗಳು ನಡೆದಾಗ, ಅದನ್ನು ಆ ಸಮುದಾಯವರು ಅದನ್ನು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ, ಇತರೆ ಧರ್ಮಗಳನ್ನು ಕೀಳುಮಟ್ಟದಲ್ಲಿ ನೋಡುವ ಪ್ರಯತ್ನಗಳು ನಡೆಯುತ್ತವೆ’ ಎಂದು ವಿವರಿಸಿದ್ದಾರೆ.</p>.<p>‘ಇಂತಹ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ಮಲಪ್ಪುರ ಕುರಿತು ಸದಾಭಿಪ್ರಾಯ ಹೊಂದಲು ಹೇಗೆ ಸಾಧ್ಯ? ಇಂತಹ ವಿಚಾರ ಹೇಳಿದ ತಕ್ಷಣ ಕೆಲವರು ಏಕೆ ಹತಾಶೆಗೊಳ್ಳುತ್ತಾರೆ ಎಂದು ಅರ್ಥವಾಗುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ.</p>.<p><strong>ಖಂಡನೆ:</strong> ಜಲೀಲ್ ಹೇಳಿಕೆಯು ‘ಅತ್ಯಂತ ಅವಹೇಳನಕಾರಿಯಾದುದು’ ಎಂದು ಇಂಡಿಯುನ್ ಯೂನಿಯನ್ ಮುಸ್ಲಿಂ ಲೀಗ್ ಕಿಡಿಕಾರಿದೆ.</p>.<p>‘ಮುಸ್ಲಿಂ ಸಮುದಾಯದವರು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಎಲ್ಲಿಂದ ಸಿಕ್ಕಿತು? ಯಾವ ಆಧಾರದ ಮೇಲೆ ಈ ರೀತಿ ಹೇಳುತ್ತಿದ್ದಾರೆ. ಜಲೀಲ್ ಹತಾಶೆಗೊಂಡಿರಬಹುದು. ಆದರೆ, ಇಡೀ ಸಮುದಾಯಕ್ಕೆ ಕಳಂಕ ತರುವ ಪ್ರಯತ್ನವನ್ನು ಮಾಡಬಾರದು’ ಎಂದು ಹಿರಿಯ ಮುಖಂಡ ಪಿ.ಎಂ.ಎ. ಸಲಾಂ ಪ್ರಶ್ನಿಸಿದ್ದಾರೆ.</p>.<p>ಜಲೀಲ್ ಹೇಳಿಕೆಯು ಸಾರ್ವಜನಿಕ ಜೀವನದಲ್ಲಿ ‘ಅತ್ಯಂತ ಕೆಟ್ಟ ನಡೆ’ ಎಂದು ಎಡಪಕ್ಷ ಬಂಡಾಯ ಶಾಸಕ ಅನ್ವರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರಂ:</strong> ‘ಮಲಪ್ಪುರದ ಕರಿಪ್ಪೂರ್ ವಿಮಾನನಿಲ್ದಾಣದಲ್ಲಿ ಕಳ್ಳಸಾಗಣೆ ಭಾಗಿಯಾಗುವವರ ಪೈಕಿ ಬಹುತೇಕ ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು’ ಎಂದು ಎಡಪಕ್ಷದ ಶಾಸಕ ಕೆ.ಟಿ.ಜಲೀಲ್ ಅವರು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.</p>.<p>ಈ ಹೇಳಿಕೆಗೆ ಐಯುಎಂಲ್ ಹಾಗೂ ಎಡಪಕ್ಷದ ಬಂಡಾಯ ಶಾಸಕ ಪಿ.ವಿ.ಅನ್ವರ್ ಕಿಡಿಕಾರಿದ್ದಾರೆ.</p>.<p>ಫೇಸ್ಬುಕ್ನಲ್ಲಿ ವಿವರವಾಗಿ ಬರೆದಿರುವ ಜಲೀಲ್ ಅವರು, ‘ಚಿನ್ನ ಕಳ್ಳಸಾಗಣೆ ಹಾಗೂ ಹವಾಲಾ ಅಪರಾಧದಲ್ಲಿ ಭಾಗಿಯಾಗುವವರಲ್ಲಿ ಬಹುಪಾಲು ಮಂದಿ ಮುಸ್ಲಿಂ ಸಮುದಾಯದವರು. ಇಂತಹ ಯಾವುದೇ ಚಟುವಟಿಕೆಗಳು ಕೂಡ ‘ಧಾರ್ಮಿಕವಲ್ಲ’. ಈ ವಿಚಾರದಲ್ಲಿ ಸಮುದಾಯದ ಮುಖಂಡರು ಮಧ್ಯಪ್ರವೇಶಿಸಿ, ಇಂತಹ ಕೃತ್ಯದಲ್ಲಿ ಭಾಗಿಯಾದವರಿಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದ್ದಾರೆ.</p>.<p>‘ಯಾವುದೇ ಸಮುದಾಯದವರು ತಪ್ಪು ಮಾಡಿದ್ದರೆ, ಸಮುದಾಯದ ಸದಸ್ಯರು ಕಟುವಾಗಿ ವಿರೋಧಿಸಬೇಕು. ಕ್ರೈಸ್ತರು ತಪ್ಪು ಮಾಡಿದರೆ, ಆ ಸಮುದಾಯದವರು ವಿರೋಧಿಸಬೇಕು. ಮುಸಲ್ಮಾನರು ತಪ್ಪು ಮಾಡಿದ ವೇಳೆ ಸಮುದಾಯದವರು ಖಂಡಿಸಬೇಕು. ಹಿಂದೂ ಸಮುದಾಯದಲ್ಲಿ ತಪ್ಪುಗಳು ನಡೆದಾಗ, ಅದನ್ನು ಆ ಸಮುದಾಯವರು ಅದನ್ನು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ, ಇತರೆ ಧರ್ಮಗಳನ್ನು ಕೀಳುಮಟ್ಟದಲ್ಲಿ ನೋಡುವ ಪ್ರಯತ್ನಗಳು ನಡೆಯುತ್ತವೆ’ ಎಂದು ವಿವರಿಸಿದ್ದಾರೆ.</p>.<p>‘ಇಂತಹ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ಮಲಪ್ಪುರ ಕುರಿತು ಸದಾಭಿಪ್ರಾಯ ಹೊಂದಲು ಹೇಗೆ ಸಾಧ್ಯ? ಇಂತಹ ವಿಚಾರ ಹೇಳಿದ ತಕ್ಷಣ ಕೆಲವರು ಏಕೆ ಹತಾಶೆಗೊಳ್ಳುತ್ತಾರೆ ಎಂದು ಅರ್ಥವಾಗುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ.</p>.<p><strong>ಖಂಡನೆ:</strong> ಜಲೀಲ್ ಹೇಳಿಕೆಯು ‘ಅತ್ಯಂತ ಅವಹೇಳನಕಾರಿಯಾದುದು’ ಎಂದು ಇಂಡಿಯುನ್ ಯೂನಿಯನ್ ಮುಸ್ಲಿಂ ಲೀಗ್ ಕಿಡಿಕಾರಿದೆ.</p>.<p>‘ಮುಸ್ಲಿಂ ಸಮುದಾಯದವರು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಎಲ್ಲಿಂದ ಸಿಕ್ಕಿತು? ಯಾವ ಆಧಾರದ ಮೇಲೆ ಈ ರೀತಿ ಹೇಳುತ್ತಿದ್ದಾರೆ. ಜಲೀಲ್ ಹತಾಶೆಗೊಂಡಿರಬಹುದು. ಆದರೆ, ಇಡೀ ಸಮುದಾಯಕ್ಕೆ ಕಳಂಕ ತರುವ ಪ್ರಯತ್ನವನ್ನು ಮಾಡಬಾರದು’ ಎಂದು ಹಿರಿಯ ಮುಖಂಡ ಪಿ.ಎಂ.ಎ. ಸಲಾಂ ಪ್ರಶ್ನಿಸಿದ್ದಾರೆ.</p>.<p>ಜಲೀಲ್ ಹೇಳಿಕೆಯು ಸಾರ್ವಜನಿಕ ಜೀವನದಲ್ಲಿ ‘ಅತ್ಯಂತ ಕೆಟ್ಟ ನಡೆ’ ಎಂದು ಎಡಪಕ್ಷ ಬಂಡಾಯ ಶಾಸಕ ಅನ್ವರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>