<p><strong>ಲಖನೌ</strong>: ಆ್ಯಕ್ಸಿಯಂ–4 ಯೋಜನೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್ಎಸ್) ಪಯಣಿಸಿ, ಯಶಸ್ವಿಯಾಗಿ ಹಿಂದಿರುಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಭಾರತಕ್ಕೆ ಭಾನುವಾರ ಮರಳಲಿದ್ದಾರೆ. ಶುಭಾಂಶು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಹುಟ್ಟೂರು ಲಖನೌನಲ್ಲಿ ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ.</p>.<p>ಭಾನುವಾರ ಭಾರತಕ್ಕೆ ಮರಳಲಿರುವ ಶುಭಾಂಶು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಭೇಟಿಯಾಗುವ ನಿರೀಕ್ಷೆ ಇದೆ. ಬಳಿಕ ಆಗಸ್ಟ್ 25ರಂದು ಲಖನೌಗೆ ಭೇಟಿ ನೀಡಲಿದ್ದಾರೆ.</p>.<p>ಈ ವೇಳೆ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಲಖೌನದಲ್ಲಿ ಶುಭಾಂಶು ವ್ಯಾಸಂಗ ಮಾಡಿದ ಸಿಟಿ ಮಾಂಟೆಸ್ಸರಿ ಸ್ಕೂಲ್ನ (ಸಿಎಂಎಸ್) ಗೆಳಯರು ಹಾಗೂ ಶಾಲಾ ಆಡಳಿತ ಸಜ್ಜಾಗಿದೆ. </p>.<p>ಶುಭಾಂಶು ಅವರನ್ನು ಮೆರವಣಿಗೆ ಮೂಲಕ ಕರೆತರಲು ಸಿದ್ದತೆ ನಡೆದಿದ್ದು, ಎಲ್ಲಾ ರಸ್ತೆಗಳಲ್ಲೂ ಧ್ವಜವನ್ನು ಹಾರಿಸುತ್ತಾ ಅವರನ್ನು ಸ್ವಾಗತಿಸಲು ಜನರಿಗೆ ಶಾಲಾ ಆಡಳಿತ ಕರೆ ನೀಡಿದೆ.</p>.<p>ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು, ಗಣ್ಯರು ಶುಭಾಂಶು ಅವರಿಗೆ ಸ್ವಾಗತ ಕೋರಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನೂ ಆಹ್ವಾನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಶಾಲೆಯ ಸಂವಹನ ವಿಭಾಗದ ಮುಖ್ಯಸ್ಥರಾದ ರಿಶಿ ಖನ್ನಾ ಹೇಳಿದ್ದಾರೆ. </p>.<p>ಜೂನ್ 25ರಂದು ಬಾಹ್ಯಾಕಾಶ ನಿಲ್ದಾಣದ ಪಯಣ ಕೈಗೊಂಡಿದ್ದ ಶುಕ್ಲಾ, ಜೂನ್ 26ರಂದು ಐಎಸ್ಎಸ್ ತಲುಪಿದ್ದರು. ಜುಲೈ 15ರಂದು ಭೂಮಿಗೆ ಹಿಂದಿರುಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಆ್ಯಕ್ಸಿಯಂ–4 ಯೋಜನೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್ಎಸ್) ಪಯಣಿಸಿ, ಯಶಸ್ವಿಯಾಗಿ ಹಿಂದಿರುಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಭಾರತಕ್ಕೆ ಭಾನುವಾರ ಮರಳಲಿದ್ದಾರೆ. ಶುಭಾಂಶು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಹುಟ್ಟೂರು ಲಖನೌನಲ್ಲಿ ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ.</p>.<p>ಭಾನುವಾರ ಭಾರತಕ್ಕೆ ಮರಳಲಿರುವ ಶುಭಾಂಶು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಭೇಟಿಯಾಗುವ ನಿರೀಕ್ಷೆ ಇದೆ. ಬಳಿಕ ಆಗಸ್ಟ್ 25ರಂದು ಲಖನೌಗೆ ಭೇಟಿ ನೀಡಲಿದ್ದಾರೆ.</p>.<p>ಈ ವೇಳೆ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಲಖೌನದಲ್ಲಿ ಶುಭಾಂಶು ವ್ಯಾಸಂಗ ಮಾಡಿದ ಸಿಟಿ ಮಾಂಟೆಸ್ಸರಿ ಸ್ಕೂಲ್ನ (ಸಿಎಂಎಸ್) ಗೆಳಯರು ಹಾಗೂ ಶಾಲಾ ಆಡಳಿತ ಸಜ್ಜಾಗಿದೆ. </p>.<p>ಶುಭಾಂಶು ಅವರನ್ನು ಮೆರವಣಿಗೆ ಮೂಲಕ ಕರೆತರಲು ಸಿದ್ದತೆ ನಡೆದಿದ್ದು, ಎಲ್ಲಾ ರಸ್ತೆಗಳಲ್ಲೂ ಧ್ವಜವನ್ನು ಹಾರಿಸುತ್ತಾ ಅವರನ್ನು ಸ್ವಾಗತಿಸಲು ಜನರಿಗೆ ಶಾಲಾ ಆಡಳಿತ ಕರೆ ನೀಡಿದೆ.</p>.<p>ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು, ಗಣ್ಯರು ಶುಭಾಂಶು ಅವರಿಗೆ ಸ್ವಾಗತ ಕೋರಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನೂ ಆಹ್ವಾನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಶಾಲೆಯ ಸಂವಹನ ವಿಭಾಗದ ಮುಖ್ಯಸ್ಥರಾದ ರಿಶಿ ಖನ್ನಾ ಹೇಳಿದ್ದಾರೆ. </p>.<p>ಜೂನ್ 25ರಂದು ಬಾಹ್ಯಾಕಾಶ ನಿಲ್ದಾಣದ ಪಯಣ ಕೈಗೊಂಡಿದ್ದ ಶುಕ್ಲಾ, ಜೂನ್ 26ರಂದು ಐಎಸ್ಎಸ್ ತಲುಪಿದ್ದರು. ಜುಲೈ 15ರಂದು ಭೂಮಿಗೆ ಹಿಂದಿರುಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>