ಭೋಪಾಲ್, ಮಧ್ಯಪ್ರದೇಶ: ಮುಂದಿನ ವರ್ಷದ ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಶಿವನ ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯವಿರುವ ಉಜ್ಜಯಿನಿ ನಗರವನ್ನು ವಿಶೇಷವಾಗಿ ಅಲಂಕರಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ಮುಂದಿನ ವರ್ಷ ಮಾರ್ಚ್ 1 ರಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.
‘ಉಜ್ಜಯಿನಿ ಒಂದು ಅದ್ಭುತ ನಗರವಾಗಿದ್ದು ಮುಂದಿನ ವರ್ಷದ ಮಹಾಶಿವರಾತ್ರಿಗೂ ಮೊದಲು ಮಹಾಕಾಳ ಶಿವನ ನಗರವನ್ನು ಅಲಂಕರಿಸಲಾಗುವುದು. ಇದು ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದು’ ಎಂದು ಚೌಹಾಣ್ ಹೇಳಿದರು.
ಉಜ್ಜಯಿನಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಧು–ಸಂತರ ಸನ್ಮಾನ ಕಾರ್ಯಕ್ರಮದಲ್ಲಿ ಚೌಹಾಣ್ ಈ ವಿಷಯ ತಿಳಿಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.