‘ಚಿಕಿತ್ಸೆಗಾಗಿ ತಾಯಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆ. ಆದರೆ ದಾರಿ ಮಧ್ಯೆಯೇ ಅಸುನೀಗಿದ್ದಾರೆ ಎಂದು ವೈದ್ಯರು ಘೋಷಿಸಿದರು’ ಎಂದು ಮಹಿಳೆಯ ಪುತ್ರ ನಾರಾಯಣ ಪಟೇಲ್ ತಿಳಿಸಿದ್ದಾರೆ.
ನಾನು ಹಲವು ಬಾರಿ ಮನವಿ ಮಾಡಿದರೂ, ತುಂಬಾ ಸಮಯದವರೆಗೆ ಶವ ಸಾಗಣೆ ವಾಹನ ನೀಡಲಿಲ್ಲ. ಹೀಗಾಗಿ ದ್ವಿಚಕ್ರ ವಾಹನದಲ್ಲಿ ಸಾಗಿಸಲು ಮುಂದಾಗಿದ್ದೆ. ಆದರೆ ಯಾರೋ ಒಬ್ಬರು ಆಟೊ ಮಾಡಿಕೊಟ್ಟರು ಎಂದು ಅವರು ಹೇಳಿದ್ದಾರೆ.