‘ನಿರ್ವಹಣೆ ಕೊರತೆಯಿಂದ ಕೊಳಚೆ ನೀರು ನಿರಂತರವಾಗಿ ಕೆರೆ ಅಂಗಳವನ್ನು ಸೇರುತ್ತಿದೆ. ಅಕ್ಕಪಕ್ಕದ ನಿವಾಸಿಗಳು ಕಸ ಕಡ್ಡಿಗಳನ್ನು, ಸತ್ತ ಸಾಕು ಪ್ರಾಣಿಗಳನ್ನು ಕೆರೆಯ ಬಳಿ ಬಿಸಾಡಿ ಹೋಗುತ್ತಿದ್ದಾರೆ. ಕೆರೆಗೆ ತ್ಯಾಜ್ಯ ಹರಿಯುವುದನ್ನು ತಡೆಯಲು ಕೊಳವೆಗಳಿಗೆ ಜಾಲರಿಗಳನ್ನೂ ಅಳವಡಿಸಿಲ್ಲ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಕೆರೆ ಅವಸಾನದ ಅಂಚು ತಲುಪುತ್ತಿದೆ’ ಎಂದು ಸ್ಥಳೀಯ ನಿವಾಸಿ ಗುರು ಬೇಸರ ವ್ಯಕ್ತಪಡಿಸಿದರು.