<p><strong>ಚೆನ್ನೈ:</strong> ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಅಪರೂಪ ಎನ್ನಬಹುದಾದ ಬೆಳವಣಿಗೆಯೊಂದರಲ್ಲಿ ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ತಮ್ಮ ಎರಡು ವರ್ಷಗಳ ಕೆಲಸದ ಪ್ರಗತಿಯ ವಿವರಗಳನ್ನು ವಕೀಲರಿಗೆ ನೀಡಿದ್ದಾರೆ.</p>.<p>ಎರಡು ವರ್ಷಗಳ ಕಾರ್ಯಸಾಧನೆ ಪ್ರಗತಿಯನ್ನು ಕುರಿತು ವಕೀಲರ ಸಂಘದ ಸದಸ್ಯರುಗಳಿಗೆ ಪತ್ರವನ್ನು ಬರೆದಿದಿದ್ದಾರೆ. ಸಾಧನೆಗಳ ಜೊತೆಗೆ ವೈಫಲ್ಯಗಳನ್ನೂ ಪಟ್ಟಿ ಮಾಡಿದ್ದಾರೆ.</p>.<p>‘ನ್ಯಾಯಮೂರ್ತಿಯಾಗಿ ನಾಳೆ ನನ್ನ ಮೂರನೇ ವರ್ಷ ಆರಂಭವಾಗಲಿದೆ. ನಿಮ್ಮಿಂದ ನಾನು ಹೆಚ್ಚು ನಿರೀಕ್ಷೆ ಮಾಡುತ್ತಿದ್ದೇನೆ. ನಿಮ್ಮ ವಾದದ ಸರಣಿ ಪರಿಣಾಮಕಾರಿಯಾಗಿದ್ದರೆ ಉತ್ತಮ ತೀರ್ಪು ಬರುತ್ತದೆ. ಕೆಟ್ಟ ಅಥವಾ ಸಡಿಲವಾದ ವಾದವು ಕೆಟ್ಟದಾದ ತೀರ್ಪುಗಳಿಗೂ ಕಾರಣವಾಗಬಹುದು’ ಎಂದು ವಕೀಲರಿಗೆ ಕಿವಿಮಾತು ಹೇಳಿದ್ದಾರೆ.</p>.<p>ಜೂನ್ 27ರಂದು ಬರೆದಿರುವ ಎರಡು ಪುಟಗಳ ಪತ್ರದಲ್ಲಿ ಸ್ವಾಮಿನಾಥನ್ ಅವರು, ‘ಎರಡು ವರ್ಷದಲ್ಲಿ ಒಟ್ಟು 18,944 ಪ್ರಕರಣಗಳು, ವಿಭಿನ್ನ ಪೀಠಗಳ ಭಾಗವಾಗಿ 2,534 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇನೆ’ ಎಂದು ವಿವರಿಸಿದ್ದಾರೆ.</p>.<p>ನ್ಯಾಯಮೂರ್ತಿಯೊಬ್ಬರು ತಮ್ಮ ಕಾರ್ಯಸಾಧನೆಯ ವಿವರಗಳನ್ನು ನೀಡುತ್ತಿರುವುದು ಇದೇ ಮೊದಲು. ಜೂನ್ 28, 2017ರಂದು ಅವರು ಅಧಿಕಾರ ವಹಿಸಿಕೊಂಡಿದ್ದರು.</p>.<p>‘ನನ್ನ ಬಳಿಗೆ ಅನೇಕ ಪ್ರಕರಣಗಳು ಬಂದವು. ಪೂರ್ಣ ವಾದವನ್ನು ಆಲಿಸದೇ ತೀರ್ಪು ನೀಡುವುದು ಕಷ್ಟವಾಗುತ್ತಿತ್ತು. ಹಾಗೆಯೇ ಬಂದ ಎಲ್ಲ ಪ್ರಕರಣಗಳನ್ನು ಉಳಿಸಿಕೊಳ್ಳುವುದು ಸೂಕ್ತ ಎನಿಸುವುದಿಲ್ಲ. ಈ ಕಾರಣದಿಂದ ನೋವಿನಿಂದಲೇ ಎರಡು ವರ್ಷಗಳ ಅವಧಿಯಲ್ಲಿ 75 ಪ್ರಕರಣಗಳನ್ನು ಹಿಂದಿರುಗಿಸಿದ್ದೇನೆ’ ಎಂದು ವಿವರಿಸಿದ್ದಾರೆ.</p>.<p>ವಾಪಸು ಕಳುಹಿಸಿದ ವ್ಯಾಜ್ಯಗಳ ಅರ್ಜಿದಾರರಿಗೆ ಪತ್ರದಲ್ಲಿ ಕ್ಷಮೆಯನ್ನು ಕೋರಿರುವ ಅವರು, ‘ಬಹುತೇಕ ಎಲ್ಲ ತೀರ್ಪುಗಳನ್ನು ತೆರೆದ ನ್ಯಾಯಾಲಯದಲ್ಲಿಯೇ ಹೇಳಿ, ಬರೆಯಿಸಿದ್ದೇನೆ’ ಎಂದು ಹೇಳಿದ್ದಾರೆ.</p>.<p>‘ಆತ್ಮಾವಲೋಕನ ಮಾಡಿಕೊಂಡರೆ ಇನ್ನೂ ಉತ್ತಮ ಕೆಲಸ ಸಾಧ್ಯವಿತ್ತೇ ಎಂಬ ಪ್ರಶ್ನೆ ಮೂಡುತ್ತದೆ. ನನ್ನ ಮನಃಸಾಕ್ಷಿ ಪ್ರಕಾರ ಉತ್ತರ, ‘ಹೌದು’. ಕೆಲವೊಮ್ಮೆ ತಾಳ್ಮೆ ತಪ್ಪಿದ್ದೇನೆ. ನಿಷ್ಠುರವಾಗಿ ನಡೆದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ.</p>.<p>***</p>.<p>ವಕೀಲರು ಹೆಚ್ಚು ಸಹಕಾರ ನೀಡಬೇಕು. ಒಮ್ಮೆ ರೋಸ್ಟರ್ ಪಟ್ಟಿ ಪ್ರಕಟವಾದಂತೆಯೇ ತಮ್ಮ ಕಕ್ಷಿದಾರರನ್ನು ಸಂಪರ್ಕಿಸಲು ವಕೀಲರು ಸಿದ್ಧರಿರಬೇಕು. ದಾವೆ ಇತ್ಯರ್ಥಕ್ಕೆ ಒಮ್ಮೆ ಮುಂದೂಡುವುದಕ್ಕಿಂತಲೂ ಹೆಚ್ಚು ಸಮಯ ಬಯಸಬಾರದು<br /><em><strong>– ಜಿ.ಆರ್.ಸ್ವಾಮಿನಾಥನ್, ನ್ಯಾಯಮೂರ್ತಿ, ಮದ್ರಾಸ್ ಹೈಕೋರ್ಟ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಅಪರೂಪ ಎನ್ನಬಹುದಾದ ಬೆಳವಣಿಗೆಯೊಂದರಲ್ಲಿ ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ತಮ್ಮ ಎರಡು ವರ್ಷಗಳ ಕೆಲಸದ ಪ್ರಗತಿಯ ವಿವರಗಳನ್ನು ವಕೀಲರಿಗೆ ನೀಡಿದ್ದಾರೆ.</p>.<p>ಎರಡು ವರ್ಷಗಳ ಕಾರ್ಯಸಾಧನೆ ಪ್ರಗತಿಯನ್ನು ಕುರಿತು ವಕೀಲರ ಸಂಘದ ಸದಸ್ಯರುಗಳಿಗೆ ಪತ್ರವನ್ನು ಬರೆದಿದಿದ್ದಾರೆ. ಸಾಧನೆಗಳ ಜೊತೆಗೆ ವೈಫಲ್ಯಗಳನ್ನೂ ಪಟ್ಟಿ ಮಾಡಿದ್ದಾರೆ.</p>.<p>‘ನ್ಯಾಯಮೂರ್ತಿಯಾಗಿ ನಾಳೆ ನನ್ನ ಮೂರನೇ ವರ್ಷ ಆರಂಭವಾಗಲಿದೆ. ನಿಮ್ಮಿಂದ ನಾನು ಹೆಚ್ಚು ನಿರೀಕ್ಷೆ ಮಾಡುತ್ತಿದ್ದೇನೆ. ನಿಮ್ಮ ವಾದದ ಸರಣಿ ಪರಿಣಾಮಕಾರಿಯಾಗಿದ್ದರೆ ಉತ್ತಮ ತೀರ್ಪು ಬರುತ್ತದೆ. ಕೆಟ್ಟ ಅಥವಾ ಸಡಿಲವಾದ ವಾದವು ಕೆಟ್ಟದಾದ ತೀರ್ಪುಗಳಿಗೂ ಕಾರಣವಾಗಬಹುದು’ ಎಂದು ವಕೀಲರಿಗೆ ಕಿವಿಮಾತು ಹೇಳಿದ್ದಾರೆ.</p>.<p>ಜೂನ್ 27ರಂದು ಬರೆದಿರುವ ಎರಡು ಪುಟಗಳ ಪತ್ರದಲ್ಲಿ ಸ್ವಾಮಿನಾಥನ್ ಅವರು, ‘ಎರಡು ವರ್ಷದಲ್ಲಿ ಒಟ್ಟು 18,944 ಪ್ರಕರಣಗಳು, ವಿಭಿನ್ನ ಪೀಠಗಳ ಭಾಗವಾಗಿ 2,534 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇನೆ’ ಎಂದು ವಿವರಿಸಿದ್ದಾರೆ.</p>.<p>ನ್ಯಾಯಮೂರ್ತಿಯೊಬ್ಬರು ತಮ್ಮ ಕಾರ್ಯಸಾಧನೆಯ ವಿವರಗಳನ್ನು ನೀಡುತ್ತಿರುವುದು ಇದೇ ಮೊದಲು. ಜೂನ್ 28, 2017ರಂದು ಅವರು ಅಧಿಕಾರ ವಹಿಸಿಕೊಂಡಿದ್ದರು.</p>.<p>‘ನನ್ನ ಬಳಿಗೆ ಅನೇಕ ಪ್ರಕರಣಗಳು ಬಂದವು. ಪೂರ್ಣ ವಾದವನ್ನು ಆಲಿಸದೇ ತೀರ್ಪು ನೀಡುವುದು ಕಷ್ಟವಾಗುತ್ತಿತ್ತು. ಹಾಗೆಯೇ ಬಂದ ಎಲ್ಲ ಪ್ರಕರಣಗಳನ್ನು ಉಳಿಸಿಕೊಳ್ಳುವುದು ಸೂಕ್ತ ಎನಿಸುವುದಿಲ್ಲ. ಈ ಕಾರಣದಿಂದ ನೋವಿನಿಂದಲೇ ಎರಡು ವರ್ಷಗಳ ಅವಧಿಯಲ್ಲಿ 75 ಪ್ರಕರಣಗಳನ್ನು ಹಿಂದಿರುಗಿಸಿದ್ದೇನೆ’ ಎಂದು ವಿವರಿಸಿದ್ದಾರೆ.</p>.<p>ವಾಪಸು ಕಳುಹಿಸಿದ ವ್ಯಾಜ್ಯಗಳ ಅರ್ಜಿದಾರರಿಗೆ ಪತ್ರದಲ್ಲಿ ಕ್ಷಮೆಯನ್ನು ಕೋರಿರುವ ಅವರು, ‘ಬಹುತೇಕ ಎಲ್ಲ ತೀರ್ಪುಗಳನ್ನು ತೆರೆದ ನ್ಯಾಯಾಲಯದಲ್ಲಿಯೇ ಹೇಳಿ, ಬರೆಯಿಸಿದ್ದೇನೆ’ ಎಂದು ಹೇಳಿದ್ದಾರೆ.</p>.<p>‘ಆತ್ಮಾವಲೋಕನ ಮಾಡಿಕೊಂಡರೆ ಇನ್ನೂ ಉತ್ತಮ ಕೆಲಸ ಸಾಧ್ಯವಿತ್ತೇ ಎಂಬ ಪ್ರಶ್ನೆ ಮೂಡುತ್ತದೆ. ನನ್ನ ಮನಃಸಾಕ್ಷಿ ಪ್ರಕಾರ ಉತ್ತರ, ‘ಹೌದು’. ಕೆಲವೊಮ್ಮೆ ತಾಳ್ಮೆ ತಪ್ಪಿದ್ದೇನೆ. ನಿಷ್ಠುರವಾಗಿ ನಡೆದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ.</p>.<p>***</p>.<p>ವಕೀಲರು ಹೆಚ್ಚು ಸಹಕಾರ ನೀಡಬೇಕು. ಒಮ್ಮೆ ರೋಸ್ಟರ್ ಪಟ್ಟಿ ಪ್ರಕಟವಾದಂತೆಯೇ ತಮ್ಮ ಕಕ್ಷಿದಾರರನ್ನು ಸಂಪರ್ಕಿಸಲು ವಕೀಲರು ಸಿದ್ಧರಿರಬೇಕು. ದಾವೆ ಇತ್ಯರ್ಥಕ್ಕೆ ಒಮ್ಮೆ ಮುಂದೂಡುವುದಕ್ಕಿಂತಲೂ ಹೆಚ್ಚು ಸಮಯ ಬಯಸಬಾರದು<br /><em><strong>– ಜಿ.ಆರ್.ಸ್ವಾಮಿನಾಥನ್, ನ್ಯಾಯಮೂರ್ತಿ, ಮದ್ರಾಸ್ ಹೈಕೋರ್ಟ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>