<p><strong>ನವದೆಹಲಿ:</strong> ‘ಮಹಾಕುಂಭ ಮುಕ್ತಾಯಗೊಂಡಿದೆ; ಏಕತೆಯ ‘ಮಹಾಯಜ್ಞ’ಯೊಂದು ಮುಕ್ತಾಯಗೊಂಡಿದೆ. ಗಂಗಾ ಮಾತೆ, ತಾಯಿ ಯಮುನೆ ಮತ್ತು ಸರಸ್ವತಿ ಹಾಗೂ ಜನರು ನನಗೆ ದೇವರ ಸಮಾನ. ನಿಮ್ಮ ಸೇವೆಯಲ್ಲಿ ಏನಾದರೂ ಅಪಚಾರವಾಗಿದ್ದರೆ ನನ್ನನ್ನು ಕ್ಷಮಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸುದೀರ್ಘವಾದ ಬರಹವನ್ನು ಬರೆದಿದ್ದಾರೆ.</p>.<p>ಜ.13ರಿಂದ ಆರಂಭಗೊಂಡು, 45 ದಿನಗಳವರೆಗೆ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭ ಮೇಳವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಲೇಖನ ಬರೆದಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ.</p>.<p>‘ಗಂಗೆ, ಯಮುನೆ ಸೇರಿ ಇತರ ನದಿಗಳ ಸ್ವಚ್ಛತೆಯು ಜನರ ಬದುಕಿನೊಂದಿಗೆ ನಂಟು ಹೊಂದಿದೆ. ಈ ನದಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬ ನನ್ನ ಬದ್ಧತೆಗೆ ಈ ಮಹಾ ಕಾರ್ಯಕ್ರಮವು ಇಂಬು ನೀಡಿದೆ’ ಎಂದರು. </p>.<p>‘ಅಮೆರಿಕದ ಜನಸಂಖ್ಯೆಯ ಎರಡರಷ್ಟು ಜನರು ಮೇಳದಲ್ಲಿ ಭಾಗವಹಿಸಿದ್ದಾರೆ. ಕಳೆದ ಬಾರಿಯ ಕುಂಭಮೇಳವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ, ಅಂದಾಜು ಮಾಡಿಕೊಂಡಿದ್ದಕ್ಕಿಂತ ಅತ್ಯಧಿಕ ಸಂಖ್ಯೆಯಲ್ಲಿ ಜನರು ಬಂದರು. ಇಷ್ಟೊಂದು ಜನರಿಗೆ ವ್ಯವಸ್ಥೆ ಮಾಡುವುದು ಸುಲಭದ ವಿಚಾರವಲ್ಲ’ ಎಂದರು. </p>.<p>ಇದೇ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.</p>.<div><blockquote>144 ವರ್ಷಗಳ ಬಳಿಕ ನಡೆದ ಮಹಾಕುಂಭ ಮೇಳವು ಭಾರತದ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗುವ ಸಂದೇಶವನ್ನು ನೀಡಿದೆ. ಇದು ‘ವಿಕಸಿತ ಭಾರತ’ದ ಸಂದೇಶ</blockquote><span class="attribution">- ನರೇಂದ್ರ ಮೋದಿ ಪ್ರಧಾನಿ</span></div>.<div><blockquote>ಮಹಾಕುಂಭದ ಯಶಸ್ಸು ಸಂಪೂರ್ಣವಾಗಿ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು. ಅವರ ದೂರದೃಷ್ಟಿ ಕಾರಣದಿಂದ ಈ ಯಶಸ್ಸು ಲಭಿಸಿದೆ</blockquote><span class="attribution">ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿ</span></div>.<h2> ‘ಹೊಸ ಭಾಷ್ಯ ಬರೆದ ಮಹಾಕುಂಭ’ </h2>.<p>‘ಕೋಟ್ಯಂತರ ಭಾರತೀಯರು ಅತ್ಯುತ್ಸಾಹದಿಂದ ಮಹಾಕುಂಭದಲ್ಲಿ ಪಾಲ್ಗೊಂಡ ಬಗ್ಗೆ ಅಧ್ಯಾತ್ಮದ ವಿಧ್ವಾಂಸರು ವಿಶ್ಲೇಷಣೆ ಮಾಡಿದರೆ ‘ಪರಂಪರೆಗಳ ಬಗ್ಗೆ ಹೆಮ್ಮೆ ಇರುವ ಭಾರತವು ಈಗ ಹೊಸದೊಂದು ಶಕ್ತಿಯನ್ನು ಸಂಚಯಿಸಿಕೊಂಡು ಮುನ್ನುಗ್ಗುತ್ತಿದೆ’ ಎಂದೇ ಹೇಳುತ್ತಾರೆ. </p><p>ಹೊಸದೊಂದು ಯುಗದ ಆರಂಭ ಇದು ಎಂದು ನಾನು ನಂಬಿದ್ದೇನೆ. ಇದು ಭಾರತದ ಭವಿಷ್ಯದ ಭಾಷ್ಯ ಬರೆಯುತ್ತದೆ’ ಎಂದರು. ‘ಪ್ರಯಾಗರಾಜ್ನಲ್ಲಿ ಜನವರಿ 13ರ ನಂತರ ನಡೆದ ಮಹಾಕುಂಭದ ದೃಶ್ಯಗಳು ಹೇಗಿದ್ದವು ಎಂದರೆ ದೇಶವೊಂದರ ಪ್ರಜ್ಞೆಯು ಜಾಗೃತಗೊಂಡಂತೆ; ನೂರಾರು ವರ್ಷಗಳ ಗುಲಾಮಗಿರಿಯ ಸಂಕೋಲೆಗಳನ್ನು ಕಿತ್ತೆಸೆದು ಹೊಸ ಪ್ರಜ್ಞೆಯನ್ನು ಉಸಿರಾಡಿದಂತೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಮಹಾಕುಂಭ ಮುಕ್ತಾಯಗೊಂಡಿದೆ; ಏಕತೆಯ ‘ಮಹಾಯಜ್ಞ’ಯೊಂದು ಮುಕ್ತಾಯಗೊಂಡಿದೆ. ಗಂಗಾ ಮಾತೆ, ತಾಯಿ ಯಮುನೆ ಮತ್ತು ಸರಸ್ವತಿ ಹಾಗೂ ಜನರು ನನಗೆ ದೇವರ ಸಮಾನ. ನಿಮ್ಮ ಸೇವೆಯಲ್ಲಿ ಏನಾದರೂ ಅಪಚಾರವಾಗಿದ್ದರೆ ನನ್ನನ್ನು ಕ್ಷಮಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸುದೀರ್ಘವಾದ ಬರಹವನ್ನು ಬರೆದಿದ್ದಾರೆ.</p>.<p>ಜ.13ರಿಂದ ಆರಂಭಗೊಂಡು, 45 ದಿನಗಳವರೆಗೆ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭ ಮೇಳವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಲೇಖನ ಬರೆದಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ.</p>.<p>‘ಗಂಗೆ, ಯಮುನೆ ಸೇರಿ ಇತರ ನದಿಗಳ ಸ್ವಚ್ಛತೆಯು ಜನರ ಬದುಕಿನೊಂದಿಗೆ ನಂಟು ಹೊಂದಿದೆ. ಈ ನದಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬ ನನ್ನ ಬದ್ಧತೆಗೆ ಈ ಮಹಾ ಕಾರ್ಯಕ್ರಮವು ಇಂಬು ನೀಡಿದೆ’ ಎಂದರು. </p>.<p>‘ಅಮೆರಿಕದ ಜನಸಂಖ್ಯೆಯ ಎರಡರಷ್ಟು ಜನರು ಮೇಳದಲ್ಲಿ ಭಾಗವಹಿಸಿದ್ದಾರೆ. ಕಳೆದ ಬಾರಿಯ ಕುಂಭಮೇಳವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ, ಅಂದಾಜು ಮಾಡಿಕೊಂಡಿದ್ದಕ್ಕಿಂತ ಅತ್ಯಧಿಕ ಸಂಖ್ಯೆಯಲ್ಲಿ ಜನರು ಬಂದರು. ಇಷ್ಟೊಂದು ಜನರಿಗೆ ವ್ಯವಸ್ಥೆ ಮಾಡುವುದು ಸುಲಭದ ವಿಚಾರವಲ್ಲ’ ಎಂದರು. </p>.<p>ಇದೇ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.</p>.<div><blockquote>144 ವರ್ಷಗಳ ಬಳಿಕ ನಡೆದ ಮಹಾಕುಂಭ ಮೇಳವು ಭಾರತದ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗುವ ಸಂದೇಶವನ್ನು ನೀಡಿದೆ. ಇದು ‘ವಿಕಸಿತ ಭಾರತ’ದ ಸಂದೇಶ</blockquote><span class="attribution">- ನರೇಂದ್ರ ಮೋದಿ ಪ್ರಧಾನಿ</span></div>.<div><blockquote>ಮಹಾಕುಂಭದ ಯಶಸ್ಸು ಸಂಪೂರ್ಣವಾಗಿ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು. ಅವರ ದೂರದೃಷ್ಟಿ ಕಾರಣದಿಂದ ಈ ಯಶಸ್ಸು ಲಭಿಸಿದೆ</blockquote><span class="attribution">ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿ</span></div>.<h2> ‘ಹೊಸ ಭಾಷ್ಯ ಬರೆದ ಮಹಾಕುಂಭ’ </h2>.<p>‘ಕೋಟ್ಯಂತರ ಭಾರತೀಯರು ಅತ್ಯುತ್ಸಾಹದಿಂದ ಮಹಾಕುಂಭದಲ್ಲಿ ಪಾಲ್ಗೊಂಡ ಬಗ್ಗೆ ಅಧ್ಯಾತ್ಮದ ವಿಧ್ವಾಂಸರು ವಿಶ್ಲೇಷಣೆ ಮಾಡಿದರೆ ‘ಪರಂಪರೆಗಳ ಬಗ್ಗೆ ಹೆಮ್ಮೆ ಇರುವ ಭಾರತವು ಈಗ ಹೊಸದೊಂದು ಶಕ್ತಿಯನ್ನು ಸಂಚಯಿಸಿಕೊಂಡು ಮುನ್ನುಗ್ಗುತ್ತಿದೆ’ ಎಂದೇ ಹೇಳುತ್ತಾರೆ. </p><p>ಹೊಸದೊಂದು ಯುಗದ ಆರಂಭ ಇದು ಎಂದು ನಾನು ನಂಬಿದ್ದೇನೆ. ಇದು ಭಾರತದ ಭವಿಷ್ಯದ ಭಾಷ್ಯ ಬರೆಯುತ್ತದೆ’ ಎಂದರು. ‘ಪ್ರಯಾಗರಾಜ್ನಲ್ಲಿ ಜನವರಿ 13ರ ನಂತರ ನಡೆದ ಮಹಾಕುಂಭದ ದೃಶ್ಯಗಳು ಹೇಗಿದ್ದವು ಎಂದರೆ ದೇಶವೊಂದರ ಪ್ರಜ್ಞೆಯು ಜಾಗೃತಗೊಂಡಂತೆ; ನೂರಾರು ವರ್ಷಗಳ ಗುಲಾಮಗಿರಿಯ ಸಂಕೋಲೆಗಳನ್ನು ಕಿತ್ತೆಸೆದು ಹೊಸ ಪ್ರಜ್ಞೆಯನ್ನು ಉಸಿರಾಡಿದಂತೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>