<p><strong>ಮುಂಬೈ:</strong> ಮಹಾರಾಷ್ಟ್ರದ ಕೃಷಿ ಸಚಿವ, ಎನ್ಸಿಪಿ ನಾಯಕ ಮಾಣಿಕ್ರಾವ್ ಕೋಕಟೆ ಅವರಿಗೆ ವಂಚನೆ ಪ್ರಕರಣದಲ್ಲಿ ನಾಸಿಕ್ನ ಜಿಲ್ಲಾ ಸೆಷನ್ಸ್ ಕೋರ್ಟ್, ಎರಡು ವರ್ಷ ಸಜೆ ವಿಧಿಸಿದೆ. ಅವರಿಗೆ ಈಗ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.</p><p>ಸಚಿವರೇ ಶಿಕ್ಷೆಗೆ ಒಳಗಾಗಿರುವುದು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಸರ್ಕಾರಕ್ಕೂ ಇರಿಸುಮುರಿಸು ಮೂಡಿಸಿದೆ.</p><p>ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಎರಡು ಫ್ಲ್ಯಾಟ್ಗಳನ್ನು ಸ್ವಾಧೀನ ಪಡೆಯಲು ಮಾಣಿಕ್ರಾವ್ ಕೋಕಟೆ ಅವರು ದಾಖಲೆಗಳನ್ನು ತಿರುಚಿ ವಂಚನೆ ಎಸಗಿದ್ದಾರೆ ಎಂಬ 30 ವರ್ಷ ಹಳೆಯ ಪ್ರಕರಣದಲ್ಲಿ ಕೋರ್ಟ್ ಶಿಕ್ಷೆ ವಿಧಿಸಿದೆ.</p><p>ಕೋಕಟೆ ವಿರುದ್ಧ ಮಾಜಿ ಸಚಿವ, ದಿವಂಗತ ಟಿ.ಎಸ್. ದಿಘೋಲೆ 1997ರಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನಾಸಿಕ್ನ ಸೆಷನ್ಸ್ ಕೋರ್ಟ್, ಮಾಣಿಕ್ರಾವ್ ಮತ್ತು ಅವರ ಸಹೋದರ ವಿಜಯ್ ಕೋಕಟೆ ಅವರಿಗೆ ಶಿಕ್ಷೆ ವಿಧಿಸಿ ಆದೇಶಿಸಿತು. ಅಲ್ಲದೆ, ಸಹೋದರರಿಬ್ಬರಿಗೂ ಕೋರ್ಟ್ ತಲಾ ₹ 50 ಸಾವಿರ ದಂಡವನ್ನು ವಿಧಿಸಿದೆ.</p><p>67 ವರ್ಷದ ಕೋಕಟೆ ಅವರು ನಾಸಿಕ್ ಜಿಲ್ಲೆಯ ಸಿನ್ನರ್ ಕ್ಷೇತ್ರದಿಂದ ಐದು ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದಾರೆ. ಮೈತ್ರಿ ಕೂಟದ ಭಾಗವಾಗಿರುವ ಎನ್ಸಿಪಿ ಬಣದ ನಾಯಕ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಆಪ್ತ ವಲಯದಲ್ಲಿ ಇದ್ದಾರೆ.</p><p>ಫ್ಲ್ಯಾಟ್ ಸ್ವಾಧೀನ ಪಡೆಯುವ ಸಂದರ್ಭದಲ್ಲಿ, ನಮಗೆ ಬೇರಾವುದೇ ಸ್ವಂತ ಮನೆಯಿಲ್ಲ ಹಾಗೂ ಆರ್ಥಿಕ ಸ್ಥಿತಿ ಕೂಡಾ ಉತ್ತಮವಾಗಿಲ್ಲ ಎಂದು ತಿರುಚಲಾದ ದಾಖಲೆ ನೀಡಿದ್ದರು ಎಂದು ಎಪಿಪಿ ಪೂನಂ ಗೋಟ್ಕೆ ಅವರು ತಿಳಿಸಿದರು.</p><p>‘ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇನೆ. ಸೆಷನ್ಸ್ ಕೋರ್ಟ್ ನನಗೆ ಸದ್ಯ ಜಾಮೀನು ನೀಡಿದೆ’ ಎಂದು ಸಚಿವ ಮಾಣಿಕ್ರಾವ್ ಕೋಕಟೆ ಅವರು ಪ್ರತಿಕ್ರಿಯಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮಹಾರಾಷ್ಟ್ರದ ಕೃಷಿ ಸಚಿವ, ಎನ್ಸಿಪಿ ನಾಯಕ ಮಾಣಿಕ್ರಾವ್ ಕೋಕಟೆ ಅವರಿಗೆ ವಂಚನೆ ಪ್ರಕರಣದಲ್ಲಿ ನಾಸಿಕ್ನ ಜಿಲ್ಲಾ ಸೆಷನ್ಸ್ ಕೋರ್ಟ್, ಎರಡು ವರ್ಷ ಸಜೆ ವಿಧಿಸಿದೆ. ಅವರಿಗೆ ಈಗ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.</p><p>ಸಚಿವರೇ ಶಿಕ್ಷೆಗೆ ಒಳಗಾಗಿರುವುದು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಸರ್ಕಾರಕ್ಕೂ ಇರಿಸುಮುರಿಸು ಮೂಡಿಸಿದೆ.</p><p>ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಎರಡು ಫ್ಲ್ಯಾಟ್ಗಳನ್ನು ಸ್ವಾಧೀನ ಪಡೆಯಲು ಮಾಣಿಕ್ರಾವ್ ಕೋಕಟೆ ಅವರು ದಾಖಲೆಗಳನ್ನು ತಿರುಚಿ ವಂಚನೆ ಎಸಗಿದ್ದಾರೆ ಎಂಬ 30 ವರ್ಷ ಹಳೆಯ ಪ್ರಕರಣದಲ್ಲಿ ಕೋರ್ಟ್ ಶಿಕ್ಷೆ ವಿಧಿಸಿದೆ.</p><p>ಕೋಕಟೆ ವಿರುದ್ಧ ಮಾಜಿ ಸಚಿವ, ದಿವಂಗತ ಟಿ.ಎಸ್. ದಿಘೋಲೆ 1997ರಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನಾಸಿಕ್ನ ಸೆಷನ್ಸ್ ಕೋರ್ಟ್, ಮಾಣಿಕ್ರಾವ್ ಮತ್ತು ಅವರ ಸಹೋದರ ವಿಜಯ್ ಕೋಕಟೆ ಅವರಿಗೆ ಶಿಕ್ಷೆ ವಿಧಿಸಿ ಆದೇಶಿಸಿತು. ಅಲ್ಲದೆ, ಸಹೋದರರಿಬ್ಬರಿಗೂ ಕೋರ್ಟ್ ತಲಾ ₹ 50 ಸಾವಿರ ದಂಡವನ್ನು ವಿಧಿಸಿದೆ.</p><p>67 ವರ್ಷದ ಕೋಕಟೆ ಅವರು ನಾಸಿಕ್ ಜಿಲ್ಲೆಯ ಸಿನ್ನರ್ ಕ್ಷೇತ್ರದಿಂದ ಐದು ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದಾರೆ. ಮೈತ್ರಿ ಕೂಟದ ಭಾಗವಾಗಿರುವ ಎನ್ಸಿಪಿ ಬಣದ ನಾಯಕ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಆಪ್ತ ವಲಯದಲ್ಲಿ ಇದ್ದಾರೆ.</p><p>ಫ್ಲ್ಯಾಟ್ ಸ್ವಾಧೀನ ಪಡೆಯುವ ಸಂದರ್ಭದಲ್ಲಿ, ನಮಗೆ ಬೇರಾವುದೇ ಸ್ವಂತ ಮನೆಯಿಲ್ಲ ಹಾಗೂ ಆರ್ಥಿಕ ಸ್ಥಿತಿ ಕೂಡಾ ಉತ್ತಮವಾಗಿಲ್ಲ ಎಂದು ತಿರುಚಲಾದ ದಾಖಲೆ ನೀಡಿದ್ದರು ಎಂದು ಎಪಿಪಿ ಪೂನಂ ಗೋಟ್ಕೆ ಅವರು ತಿಳಿಸಿದರು.</p><p>‘ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇನೆ. ಸೆಷನ್ಸ್ ಕೋರ್ಟ್ ನನಗೆ ಸದ್ಯ ಜಾಮೀನು ನೀಡಿದೆ’ ಎಂದು ಸಚಿವ ಮಾಣಿಕ್ರಾವ್ ಕೋಕಟೆ ಅವರು ಪ್ರತಿಕ್ರಿಯಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>