ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಪ್ರವಾಸೋಧ್ಯಮ ಸಚಿವ ಗಿರೀಶ್ ಮಹಾಜನ್, ‘ಅಂತರರಾಷ್ಟ್ರೀಯ ಗಣೇಶ ಹಬ್ಬ ಕೇವಲ ತೋರಿಕೆಯ ವೈಭವ ಅಲ್ಲ. ಇದು ಮಹಾರಾಷ್ಟ್ರದ ಜೀವಾಳ, ಇಲ್ಲಿನ ಜನರ ನಾಡಿಮಿಡಿತ ಮತ್ತು ಆತ್ಮನಿರ್ಭರ ಗುರಿ ಹೊಂದಿರುವ ದೇಶದ ಅದಮ್ಯ ಚೈತನ್ಯದ ಸಂಕೇತ. ಈ ಹಬ್ಬವು ಸರಿಸಾಟಿ ಇಲ್ಲದ ನಮ್ಮ ಕಲೆ, ಸಂಸ್ಕೃತಿ ಮತ್ತು ವೈಶಿಷ್ಟತೆಯನ್ನು ಜಾಗತಿಕ ಮಟ್ಟದಲ್ಲಿ ಸಾರುತ್ತದೆ ಎಂದು ಭಾವಿಸುತ್ತೇವೆ’ ಎಂದು ಹೇಳಿದರು.