<p><strong>2008, ಸೆ. 29:</strong> ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೇಗಾಂವ್ನಲ್ಲಿ ದ್ವಿಚಕ್ರ ವಾಹನದಲ್ಲಿ ಅಳವಡಿಸಲಾಗಿದ್ದ ಬಾಂಬ್ ಸ್ಫೋಟ. ಘಟನೆಯಲ್ಲಿ ಆರು ಮಂದಿ ಸಾವು, 101 ಮಂದಿಗೆ ಗಾಯ</p><p><strong>2008, ಸೆ. 30</strong>: ಮಾಲೇಗಾಂವ್ನ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು</p><p><strong>2008, ಅ. 21:</strong> ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್)</p><p><strong>2008, ಅ.23:</strong> ಎಟಿಎಸ್ನಿಂದ ಪ್ರಜ್ಞಾಸಿಂಗ್ ಠಾಕೂರ್ ಮತ್ತು ಇತರ ಮೂವರ ಬಂಧನ. ಬಲಪಂಥೀಯ ತೀವ್ರವಾದಿಗಳು ಕೃತ್ಯ ಎಸಗಿರುವುದಾಗಿ ಎಟಿಎಸ್ ಪ್ರತಿಪಾದನೆ</p><p><strong>2008, ನವೆಂಬರ್:</strong> ಪ್ರಕರಣ ಸಂಬಂಧ ಪಿತೂರಿ ನಡೆಸಿದ ಆರೋಪದ ಮೇಲೆ ಎಟಿಎಸ್ನಿಂದ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಬಂಧನ</p><p><strong>2009, ಜ. 20:</strong> 11 ಬಂಧಿತ ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ ಎಟಿಎಸ್. ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆ (ಮೋಕಾ), ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), ಐಪಿಸಿಯ ಕಠಿಣ ನಿಯಮಗಳ ಅಡಿ ಪ್ರಕರಣ ದಾಖಲು. ರಾಮ್ಜಿ ಅಲಿಯಾಸ್ ರಾಮಚಂದ್ರ ಮತ್ತು ಸಂದೀಪ್ ಡಾಂಗೆ ಅವರನ್ನು ‘ಬೇಕಾಗಿರುವ ಆರೋಪಿಗಳು’ ಎಂದು ಹೆಸರಿಸಲಾಗಿತ್ತು</p><p><strong>2009 ಜುಲೈ:</strong> ಪ್ರಕರಣವು ‘ಮೋಕಾ’ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದ ವಿಶೇಷ ನ್ಯಾಯಾಲಯ; ನಾಸಿಕ್ನ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಸುವಂತೆ ನಿರ್ದೇಶನ</p><p><strong>2009 ಆಗಸ್ಟ್:</strong> ವಿಶೇಷ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಮಹಾರಾಷ್ಟ್ರ ಸರ್ಕಾರ</p><p><strong>2010 ಜುಲೈ:</strong> ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಿ, ಪ್ರಕರಣವು ‘ಮೋಕಾ’ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಆದೇಶಿಸಿದ ಬಾಂಬೆ ಹೈಕೋರ್ಟ್</p><p><strong>2010 ಆಗಸ್ಟ್:</strong> ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಜ್ಞಾ ಸಿಂಗ್ ಮತ್ತು ಪುರೋಹಿತ್</p><p><strong>2011 ಫೆ. 1:</strong> ಮುಂಬೈ ಎಟಿಎಸ್ನಿಂದ ಮತ್ತೊಬ್ಬ ಆರೋಪಿ ಪ್ರವೀಣ್ ಮುತಾಲಿಕ್ ಬಂಧನ. ಬಂಧಿತರ ಸಂಖ್ಯೆ 12ಕ್ಕೆ ಏರಿಕೆ</p><p><strong>2011 ಏ 13:</strong> ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಪ್ರಕರಣದ ಹಸ್ತಾಂತರ</p><p><strong>2012 ಫೆಬ್ರುವರಿ ಮತ್ತು ಡಿಸೆಂಬರ್:</strong> ಎನ್ಐಎಯಿಂದ ಆರೋಪಿಗಳಾದ ಲೋಕೇಶ್ ಶರ್ಮ ಮತ್ತು ಧನಸಿಂಗ್ ಚೌಧರಿ ಬಂಧನ. ಬಂಧಿತರ ಸಂಖ್ಯೆ 14ಕ್ಕೆ ಏರಿಕೆ</p><p><strong>2015 ಏಪ್ರಿಲ್:</strong> ‘ಮೋಕಾ’ ಅನ್ವಯವಾಗುತ್ತದೆಯೇ ಎಂಬ ಬಗ್ಗೆ ಪುನರ್ಪರಿಶೀಲಿಸುವಂತೆ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವಾಪಸ್ ಕಳುಹಿಸಿದ ಸುಪ್ರೀಂ ಕೋರ್ಟ್</p><p><strong>2016 ಫೆಬ್ರುವರಿ</strong>: ಪ್ರಕರಣಕ್ಕೆ ‘ಮೋಕಾ’ ಅನ್ವಯಿಸುತ್ತದೆಯೇ ಎನ್ನುವ ಬಗ್ಗೆ ಅಟಾರ್ನಿ ಜನರಲ್ ಅವರ ಅಭಿಪ್ರಾಯ ಪಡೆಯಲಾಗಿದೆ ಎಂದು ಕೋರ್ಟ್ಗೆ ತಿಳಿಸಿದ ಎನ್ಐಎ</p><p><strong>2016, ಮೇ 13:</strong> ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ಎನ್ಐಎ. ‘ಮೋಕಾ’ದಿಂದ ಪ್ರಕರಣ ಹೊರಕ್ಕೆ; ಏಳು ಆರೋಪಿಗಳು ಆರೋಪಮುಕ್ತ</p><p><strong>2017, ಏ. 25</strong>: ಬಾಂಬೆ ಹೈಕೋರ್ಟ್ನಿಂದ ಪ್ರಜ್ಞಾ ಸಿಂಗ್ ಅವರಿಗೆ ಜಾಮೀನು; ಪುರೋಹಿತ್ ಅವರಿಗೆ ಜಾಮೀನು ನಿರಾಕರಣೆ</p><p><strong>2017, ಸೆ. 21</strong>: ಪುರೋಹಿತ್ ಅವರಿಗೆ ಸುಪ್ರೀಂ ಕೋರ್ಟ್ನಿಂದ ಜಾಮೀನು; ವರ್ಷಾಂತ್ಯದ ಹೊತ್ತಿಗೆ ಎಲ್ಲ ಆರೋಪಿಗಳಿಗೂ ಜಾಮೀನು</p><p><strong>2017, ಡಿ. 27</strong>: ಶಿವನಾರಾಯಣ, ಶ್ಯಾಮ್ ಸಾಹು ಮತ್ತು ಪ್ರವೀಣ್ ಮುತಾಲಿಕ್ ನಾಯ್ಕ್ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿದ ಎನ್ಐಎ ವಿಶೇಷ ನ್ಯಾಯಾಲಯ. ಭಯೋತ್ಪಾದನಾ ಸಂಘಟನೆಗೆ ಸೇರಿದವರು ಎನ್ನುವ ಆರೋಪದಿಂದ ಮುಕ್ತಿ; ಯುಎಪಿಎ ಅಡಿ ದಾಖಲಾಗಿದ್ದ ಭಯೋತ್ಪಾದನಾ ಚಟುವಟಿಕೆಗಳಿಗಾಗಿ ಧನಸಂಗ್ರಹ ಆರೋಪದಿಂದಲೂ ಮುಕ್ತಿ</p><p><strong>2018, ಅ. 30:</strong> ಪ್ರಜ್ಞಾ, ಪುರೋಹಿತ್, ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ, ಅಜಯ್ ರಾಹಿರ್ಕರ್, ಸುಧಾಕರ್ ದ್ವಿವೇದಿ ಮತ್ತು ಸುಧಾಕರ್ ಚತುರ್ವೇದಿ– ಈ ಏಳು ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ</p><p><strong>2018 ಡಿ. 3:</strong> ನ್ಯಾಯಾಲಯದಲ್ಲಿ ಪ್ರಕರಣದ ಮೊದಲ ಸಾಕ್ಷಿಯ ವಿಚಾರಣೆ ಆರಂಭ</p><p><strong>2023, ಸೆ. 14:</strong> 323 ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆಯೊಂದಿಗೆ (ಈ ಪೈಕಿ 37 ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾದರು) ಪ್ರಾಸಿಕ್ಯೂಷನ್ ವಾದ ಅಂತ್ಯ</p><p><strong>2024, ಜುಲೈ 23:</strong> ಎಂಟು ಮಂದಿ ಆರೋಪಿಪರ ಸಾಕ್ಷಿಗಳ ವಿಚಾರಣೆ ಅಂತ್ಯ</p><p><strong>2024, ಆ. 12</strong>: ವಿಶೇಷ ನ್ಯಾಯಾಲಯದಿಂದ ಆರೋಪಿಗಳ ಅಂತಿಮ ಹೇಳಿಕೆ ದಾಖಲು. ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳಿಂದ ಅಂತಿಮ ಹಂತದ ವಾದ ಮಂಡನೆ</p><p><strong>2025, ಏ. 19:</strong> ವಿಚಾರಣೆ ಅಂತ್ಯಗೊಳಿಸಿದ ವಿಶೇಷ ನ್ಯಾಯಾಲಯ</p><p><strong>2025, ಜುಲೈ 31</strong>: ‘ಸಮರ್ಪಕ ಹಾಗೂ ವಿಶ್ವಾಸಾರ್ಹ’ ಸಾಕ್ಷ್ಯಗಳಿಲ್ಲ ಎಂದು ಎಲ್ಲ ಏಳು ಆರೋಪಿಗಳನ್ನು ದೋಷಮುಕ್ತಗೊಳಿಸಿದ ಎನ್ಐಎ ವಿಶೇಷ ನ್ಯಾಯಲಯದ ನ್ಯಾಯಾಧೀಶ ಎ.ಕೆ.ಲಾಹೋಟಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>2008, ಸೆ. 29:</strong> ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೇಗಾಂವ್ನಲ್ಲಿ ದ್ವಿಚಕ್ರ ವಾಹನದಲ್ಲಿ ಅಳವಡಿಸಲಾಗಿದ್ದ ಬಾಂಬ್ ಸ್ಫೋಟ. ಘಟನೆಯಲ್ಲಿ ಆರು ಮಂದಿ ಸಾವು, 101 ಮಂದಿಗೆ ಗಾಯ</p><p><strong>2008, ಸೆ. 30</strong>: ಮಾಲೇಗಾಂವ್ನ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು</p><p><strong>2008, ಅ. 21:</strong> ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್)</p><p><strong>2008, ಅ.23:</strong> ಎಟಿಎಸ್ನಿಂದ ಪ್ರಜ್ಞಾಸಿಂಗ್ ಠಾಕೂರ್ ಮತ್ತು ಇತರ ಮೂವರ ಬಂಧನ. ಬಲಪಂಥೀಯ ತೀವ್ರವಾದಿಗಳು ಕೃತ್ಯ ಎಸಗಿರುವುದಾಗಿ ಎಟಿಎಸ್ ಪ್ರತಿಪಾದನೆ</p><p><strong>2008, ನವೆಂಬರ್:</strong> ಪ್ರಕರಣ ಸಂಬಂಧ ಪಿತೂರಿ ನಡೆಸಿದ ಆರೋಪದ ಮೇಲೆ ಎಟಿಎಸ್ನಿಂದ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಬಂಧನ</p><p><strong>2009, ಜ. 20:</strong> 11 ಬಂಧಿತ ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ ಎಟಿಎಸ್. ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆ (ಮೋಕಾ), ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), ಐಪಿಸಿಯ ಕಠಿಣ ನಿಯಮಗಳ ಅಡಿ ಪ್ರಕರಣ ದಾಖಲು. ರಾಮ್ಜಿ ಅಲಿಯಾಸ್ ರಾಮಚಂದ್ರ ಮತ್ತು ಸಂದೀಪ್ ಡಾಂಗೆ ಅವರನ್ನು ‘ಬೇಕಾಗಿರುವ ಆರೋಪಿಗಳು’ ಎಂದು ಹೆಸರಿಸಲಾಗಿತ್ತು</p><p><strong>2009 ಜುಲೈ:</strong> ಪ್ರಕರಣವು ‘ಮೋಕಾ’ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದ ವಿಶೇಷ ನ್ಯಾಯಾಲಯ; ನಾಸಿಕ್ನ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಸುವಂತೆ ನಿರ್ದೇಶನ</p><p><strong>2009 ಆಗಸ್ಟ್:</strong> ವಿಶೇಷ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಮಹಾರಾಷ್ಟ್ರ ಸರ್ಕಾರ</p><p><strong>2010 ಜುಲೈ:</strong> ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಿ, ಪ್ರಕರಣವು ‘ಮೋಕಾ’ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಆದೇಶಿಸಿದ ಬಾಂಬೆ ಹೈಕೋರ್ಟ್</p><p><strong>2010 ಆಗಸ್ಟ್:</strong> ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಜ್ಞಾ ಸಿಂಗ್ ಮತ್ತು ಪುರೋಹಿತ್</p><p><strong>2011 ಫೆ. 1:</strong> ಮುಂಬೈ ಎಟಿಎಸ್ನಿಂದ ಮತ್ತೊಬ್ಬ ಆರೋಪಿ ಪ್ರವೀಣ್ ಮುತಾಲಿಕ್ ಬಂಧನ. ಬಂಧಿತರ ಸಂಖ್ಯೆ 12ಕ್ಕೆ ಏರಿಕೆ</p><p><strong>2011 ಏ 13:</strong> ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಪ್ರಕರಣದ ಹಸ್ತಾಂತರ</p><p><strong>2012 ಫೆಬ್ರುವರಿ ಮತ್ತು ಡಿಸೆಂಬರ್:</strong> ಎನ್ಐಎಯಿಂದ ಆರೋಪಿಗಳಾದ ಲೋಕೇಶ್ ಶರ್ಮ ಮತ್ತು ಧನಸಿಂಗ್ ಚೌಧರಿ ಬಂಧನ. ಬಂಧಿತರ ಸಂಖ್ಯೆ 14ಕ್ಕೆ ಏರಿಕೆ</p><p><strong>2015 ಏಪ್ರಿಲ್:</strong> ‘ಮೋಕಾ’ ಅನ್ವಯವಾಗುತ್ತದೆಯೇ ಎಂಬ ಬಗ್ಗೆ ಪುನರ್ಪರಿಶೀಲಿಸುವಂತೆ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವಾಪಸ್ ಕಳುಹಿಸಿದ ಸುಪ್ರೀಂ ಕೋರ್ಟ್</p><p><strong>2016 ಫೆಬ್ರುವರಿ</strong>: ಪ್ರಕರಣಕ್ಕೆ ‘ಮೋಕಾ’ ಅನ್ವಯಿಸುತ್ತದೆಯೇ ಎನ್ನುವ ಬಗ್ಗೆ ಅಟಾರ್ನಿ ಜನರಲ್ ಅವರ ಅಭಿಪ್ರಾಯ ಪಡೆಯಲಾಗಿದೆ ಎಂದು ಕೋರ್ಟ್ಗೆ ತಿಳಿಸಿದ ಎನ್ಐಎ</p><p><strong>2016, ಮೇ 13:</strong> ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ಎನ್ಐಎ. ‘ಮೋಕಾ’ದಿಂದ ಪ್ರಕರಣ ಹೊರಕ್ಕೆ; ಏಳು ಆರೋಪಿಗಳು ಆರೋಪಮುಕ್ತ</p><p><strong>2017, ಏ. 25</strong>: ಬಾಂಬೆ ಹೈಕೋರ್ಟ್ನಿಂದ ಪ್ರಜ್ಞಾ ಸಿಂಗ್ ಅವರಿಗೆ ಜಾಮೀನು; ಪುರೋಹಿತ್ ಅವರಿಗೆ ಜಾಮೀನು ನಿರಾಕರಣೆ</p><p><strong>2017, ಸೆ. 21</strong>: ಪುರೋಹಿತ್ ಅವರಿಗೆ ಸುಪ್ರೀಂ ಕೋರ್ಟ್ನಿಂದ ಜಾಮೀನು; ವರ್ಷಾಂತ್ಯದ ಹೊತ್ತಿಗೆ ಎಲ್ಲ ಆರೋಪಿಗಳಿಗೂ ಜಾಮೀನು</p><p><strong>2017, ಡಿ. 27</strong>: ಶಿವನಾರಾಯಣ, ಶ್ಯಾಮ್ ಸಾಹು ಮತ್ತು ಪ್ರವೀಣ್ ಮುತಾಲಿಕ್ ನಾಯ್ಕ್ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿದ ಎನ್ಐಎ ವಿಶೇಷ ನ್ಯಾಯಾಲಯ. ಭಯೋತ್ಪಾದನಾ ಸಂಘಟನೆಗೆ ಸೇರಿದವರು ಎನ್ನುವ ಆರೋಪದಿಂದ ಮುಕ್ತಿ; ಯುಎಪಿಎ ಅಡಿ ದಾಖಲಾಗಿದ್ದ ಭಯೋತ್ಪಾದನಾ ಚಟುವಟಿಕೆಗಳಿಗಾಗಿ ಧನಸಂಗ್ರಹ ಆರೋಪದಿಂದಲೂ ಮುಕ್ತಿ</p><p><strong>2018, ಅ. 30:</strong> ಪ್ರಜ್ಞಾ, ಪುರೋಹಿತ್, ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ, ಅಜಯ್ ರಾಹಿರ್ಕರ್, ಸುಧಾಕರ್ ದ್ವಿವೇದಿ ಮತ್ತು ಸುಧಾಕರ್ ಚತುರ್ವೇದಿ– ಈ ಏಳು ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ</p><p><strong>2018 ಡಿ. 3:</strong> ನ್ಯಾಯಾಲಯದಲ್ಲಿ ಪ್ರಕರಣದ ಮೊದಲ ಸಾಕ್ಷಿಯ ವಿಚಾರಣೆ ಆರಂಭ</p><p><strong>2023, ಸೆ. 14:</strong> 323 ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆಯೊಂದಿಗೆ (ಈ ಪೈಕಿ 37 ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾದರು) ಪ್ರಾಸಿಕ್ಯೂಷನ್ ವಾದ ಅಂತ್ಯ</p><p><strong>2024, ಜುಲೈ 23:</strong> ಎಂಟು ಮಂದಿ ಆರೋಪಿಪರ ಸಾಕ್ಷಿಗಳ ವಿಚಾರಣೆ ಅಂತ್ಯ</p><p><strong>2024, ಆ. 12</strong>: ವಿಶೇಷ ನ್ಯಾಯಾಲಯದಿಂದ ಆರೋಪಿಗಳ ಅಂತಿಮ ಹೇಳಿಕೆ ದಾಖಲು. ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳಿಂದ ಅಂತಿಮ ಹಂತದ ವಾದ ಮಂಡನೆ</p><p><strong>2025, ಏ. 19:</strong> ವಿಚಾರಣೆ ಅಂತ್ಯಗೊಳಿಸಿದ ವಿಶೇಷ ನ್ಯಾಯಾಲಯ</p><p><strong>2025, ಜುಲೈ 31</strong>: ‘ಸಮರ್ಪಕ ಹಾಗೂ ವಿಶ್ವಾಸಾರ್ಹ’ ಸಾಕ್ಷ್ಯಗಳಿಲ್ಲ ಎಂದು ಎಲ್ಲ ಏಳು ಆರೋಪಿಗಳನ್ನು ದೋಷಮುಕ್ತಗೊಳಿಸಿದ ಎನ್ಐಎ ವಿಶೇಷ ನ್ಯಾಯಲಯದ ನ್ಯಾಯಾಧೀಶ ಎ.ಕೆ.ಲಾಹೋಟಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>