<p><strong>ಉನ್ನಾವೊ</strong>: ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಪುರಾತನ ಬಿಲ್ಲೇಶ್ವರ ಮಹಾದೇವ ದೇವಾಲಯದ ಶಿವಲಿಂಗವನ್ನು ಧ್ವಂಸ ಮಾಡಲಾಗಿದ್ದು, ಪ್ರಕರಣ ಸಂಬಂಧ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.</p><p>ಪೂರ್ವ–ಮೌರಾವಾನ್ ರಸ್ತೆಯ ಪೂರ್ವ ಕೊತ್ವಾಲಿಯಲ್ಲಿರುವ ಈ ದೇಗುಲದಲ್ಲಿ ದುಷ್ಕೃತ್ಯ ಕಂಡು ಸ್ಥಳೀಯರು ಪ್ರತಿಭಟನೆ ನಡೆಸಿದರು. ಬಂಧಿತ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ.</p><p>ಬಂಧಿತನನ್ನು ಅವದೇಶ್ ಕುರ್ಮಿ ಎಂದು ಗುರುತಿಸಲಾಗಿದ್ದು, ಅಮೊನೌ ಖೇರಾ ಹಳ್ಳಿಯ ನಿವಾಸಿ. ಪತ್ನಿಯ ದೀರ್ಘ ಕಾಲದ ಅನಾರೋಗ್ಯದಿಂದ ಈತ ತೀವ್ರ ಬೇಸತ್ತಿದ್ದ ಎಂದು ಎಎಸ್ಪಿ ಅಖಿಲೇಶ್ ಸಿಂಗ್ ಹೇಳಿದ್ದಾರೆ. ಸಮೀಪದ ಮತ್ತೊಂದು ಶಿವಲಿಂಗವನ್ನೂ ಧ್ವಂಸ ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.</p><p>ಕೃತ್ಯವನ್ನು ಖಂಡಿಸಿರುವ ಹಿಂದೂ ಜಾಗರಣ್ ಮಂಚ್ನ ಅಜಯ್ ತ್ರಿವೇದಿ, ಶಿವಲಿಂಗವನ್ನು ಭಿನ್ನಗೊಳಿಸಿರುವುದು ನಮ್ಮ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆ ತಂದಿದೆ ಎಂದಿದ್ದಾರೆ.</p><p>ಮಹಾಭಾರತದ ಕಾಲದಲ್ಲಿ ಪ್ರತಿಷ್ಠಾಪನೆ ಆಗಿರುವ ಈ ಶಿವಲಿಂಗ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಪಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.</p><p>ಮಹಾಭಾರತದ ಕಾಲದಲ್ಲಿ ಹಸ್ತಿನಾಪುರದಿಂದ ಪ್ರಯಾಣಕ್ಕೆ ಹೊರಟಿದ್ದ ಭಗವಂತ ಕೃಷ್ಣ ಮತ್ತು ಅರ್ಜುನ ಇಲ್ಲಿ ತಂಗಿದ್ದರು ಎಂಬ ನಂಬಿಕೆ ಇದೆ. ಶ್ರೀಕೃಷ್ಣನು ಈ ದೇಗುಲದಲ್ಲಿ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದನು. ಅರ್ಜುನನು ಬಾಣ ಹೂಡಿ ಭೂಮಿಯಿಂದ ಗಂಗೆಯನ್ನು ಅಭಿಷೇಕಕ್ಕೆ ಕರೆತಂದನು. ಈಗಲೂ ಆ ಕಲ್ಯಾಣಿ ನೀರನ್ನೇ ದೇಗುಲದಲ್ಲಿ ಬಳಸಲಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.</p><p>ಬಿಲ್ಲೇಶ್ವರ ಮಹಾದೇವ ದೇವಾಲಯವು ಭಕ್ತಾಧಿಗಳಿಗೆ ಅತ್ಯಂತ ವಿಶೇಷ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿನ ಕಲ್ಯಾಣಿಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉನ್ನಾವೊ</strong>: ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಪುರಾತನ ಬಿಲ್ಲೇಶ್ವರ ಮಹಾದೇವ ದೇವಾಲಯದ ಶಿವಲಿಂಗವನ್ನು ಧ್ವಂಸ ಮಾಡಲಾಗಿದ್ದು, ಪ್ರಕರಣ ಸಂಬಂಧ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.</p><p>ಪೂರ್ವ–ಮೌರಾವಾನ್ ರಸ್ತೆಯ ಪೂರ್ವ ಕೊತ್ವಾಲಿಯಲ್ಲಿರುವ ಈ ದೇಗುಲದಲ್ಲಿ ದುಷ್ಕೃತ್ಯ ಕಂಡು ಸ್ಥಳೀಯರು ಪ್ರತಿಭಟನೆ ನಡೆಸಿದರು. ಬಂಧಿತ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ.</p><p>ಬಂಧಿತನನ್ನು ಅವದೇಶ್ ಕುರ್ಮಿ ಎಂದು ಗುರುತಿಸಲಾಗಿದ್ದು, ಅಮೊನೌ ಖೇರಾ ಹಳ್ಳಿಯ ನಿವಾಸಿ. ಪತ್ನಿಯ ದೀರ್ಘ ಕಾಲದ ಅನಾರೋಗ್ಯದಿಂದ ಈತ ತೀವ್ರ ಬೇಸತ್ತಿದ್ದ ಎಂದು ಎಎಸ್ಪಿ ಅಖಿಲೇಶ್ ಸಿಂಗ್ ಹೇಳಿದ್ದಾರೆ. ಸಮೀಪದ ಮತ್ತೊಂದು ಶಿವಲಿಂಗವನ್ನೂ ಧ್ವಂಸ ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.</p><p>ಕೃತ್ಯವನ್ನು ಖಂಡಿಸಿರುವ ಹಿಂದೂ ಜಾಗರಣ್ ಮಂಚ್ನ ಅಜಯ್ ತ್ರಿವೇದಿ, ಶಿವಲಿಂಗವನ್ನು ಭಿನ್ನಗೊಳಿಸಿರುವುದು ನಮ್ಮ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆ ತಂದಿದೆ ಎಂದಿದ್ದಾರೆ.</p><p>ಮಹಾಭಾರತದ ಕಾಲದಲ್ಲಿ ಪ್ರತಿಷ್ಠಾಪನೆ ಆಗಿರುವ ಈ ಶಿವಲಿಂಗ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಪಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.</p><p>ಮಹಾಭಾರತದ ಕಾಲದಲ್ಲಿ ಹಸ್ತಿನಾಪುರದಿಂದ ಪ್ರಯಾಣಕ್ಕೆ ಹೊರಟಿದ್ದ ಭಗವಂತ ಕೃಷ್ಣ ಮತ್ತು ಅರ್ಜುನ ಇಲ್ಲಿ ತಂಗಿದ್ದರು ಎಂಬ ನಂಬಿಕೆ ಇದೆ. ಶ್ರೀಕೃಷ್ಣನು ಈ ದೇಗುಲದಲ್ಲಿ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದನು. ಅರ್ಜುನನು ಬಾಣ ಹೂಡಿ ಭೂಮಿಯಿಂದ ಗಂಗೆಯನ್ನು ಅಭಿಷೇಕಕ್ಕೆ ಕರೆತಂದನು. ಈಗಲೂ ಆ ಕಲ್ಯಾಣಿ ನೀರನ್ನೇ ದೇಗುಲದಲ್ಲಿ ಬಳಸಲಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.</p><p>ಬಿಲ್ಲೇಶ್ವರ ಮಹಾದೇವ ದೇವಾಲಯವು ಭಕ್ತಾಧಿಗಳಿಗೆ ಅತ್ಯಂತ ವಿಶೇಷ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿನ ಕಲ್ಯಾಣಿಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>