ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಣರಾಯಿ ಭೇಟಿಗೆ ಚಾಕು ತಂದಿದ್ದ ಮಾನಸಿಕ ಅಸ್ವಸ್ಥ!

Last Updated 4 ಆಗಸ್ಟ್ 2018, 17:46 IST
ಅಕ್ಷರ ಗಾತ್ರ

ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಂಗಿದ್ದ ಇಲ್ಲಿನ ಕೇರಳ ಭವನದೊಳಗೆ ಶನಿವಾರ ಬೆಳಿಗ್ಗೆ ಮಾನಸಿಕ ಅಸ್ವಸ್ಥನೊಬ್ಬ ಚಾಕು ಹಿಡಿದು ಬಂದಿದ್ದ.

ಮುಖ್ಯಮಂತ್ರಿ ಭೇಟಿಗೆ ಒಳ ನುಗ್ಗಲು ಯತ್ನಿಸಿದ ಕೇರಳದವಿಮಲ್‌ ರಾಜ್‌ (46) ಎಂಬ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಡೆದು ತಪಾಸಣೆ ನಡೆಸಿದಾಗ ಆತನ ಚೀಲದಲ್ಲಿ ತರಕಾರಿ ಕತ್ತರಿಸುವ ಚಾಕು, ವೈದ್ಯಕೀಯ ವರದಿ ಪತ್ತೆಯಾಗಿವೆ. ಆತ ತನ್ನೊಂದಿಗೆ ರಾಷ್ಟ್ರದ್ವಜವನ್ನೂ ತಂದಿದ್ದ.

ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದ ತಕ್ಷಣ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ.

ಖಿನ್ನತೆ ಮತ್ತು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಆತನನ್ನು ಪೊಲೀಸರು ದೆಹಲಿಯ ಮನೋರೋಗ ವೈದ್ಯಕೀಯ ಆಸ್ಪತ್ರೆಗೆಕಳುಹಿಸಿದ್ದಾರೆ.

'ನನಗೆ ಎರಡು ಮಕ್ಕಳಿದ್ದು, ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದೆ. ದಿನಕ್ಕೆ ₹500–₹600ಕ್ಕಿಂತ ಹೆಚ್ಚು ಸಂಪಾದಿಸಲು ಆಗುತ್ತಿರಲಿಲ್ಲ. ಇದರಿಂದ ಬದುಕಿನಲ್ಲಿ ಜುಗುಪ್ಸೆಗೊಂಡಿದ್ದೆ. ನನಗೆ ಬದುಕಲು ಇಷ್ಟವಿರಲಿಲ್ಲ. ಎಲ್ಲವನ್ನೂ ಪತ್ರದಲ್ಲಿ ಬರೆದಿದ್ದೇನೆ. ನಾನು ಮುಖ್ಯಮಂತ್ರಿಯಿಂದ ಏನನ್ನೂ ಬಯಸುವುದಿಲ್ಲ’ ಎಂದು ವಿಮಲ್‌ ರಾಜ್‌ ತಿಳಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT