<p><strong>ಹೈದರಾಬಾದ್</strong>: ಕೊರೊನಾ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಗ್ರಾಮಸ್ಥರು ಅಂತ್ಯಕ್ರಿಯೆಗೆ ವಿರೋಧಿಸಿದ ಕಾರಣ,ಜನಿಸುವ ಮುನ್ನವೇ ಮೃತಪಟ್ಟಿದ್ದ ಹೆಣ್ಣುಮಗುವಿನ ಶವವನ್ನು ತಂದೆಯೇ ನೀರಿನ ಕಾಲುವೆಯಲ್ಲಿ ಎಸೆದ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶ ಕರ್ನೂಲು ಜಿಲ್ಲೆಯಲ್ಲಿ ನಡೆದಿದೆ.</p>.<p>ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಕರ್ನೂಲು–ಕಡಪ ನೀರಾವರಿ ಕಾಲುವೆಯಲ್ಲಿ ಮಗುವಿನ ಮೃತದೇಹ ನೋಡಿದ ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು, ಮಗುವಿನ ಪಾಲಕರನ್ನು ಪತ್ತೆ ಹಚ್ಚಿದ್ದಾರೆ. ನಂತರ, ಮಗುವನ್ನು ಗ್ರಾಮಕ್ಕೆ ಒಯ್ದು ಅಂತ್ಯಕ್ರಿಯೆ ನಡೆಸುವಂತೆ ಪಾಲಕರನ್ನು ಮನವೊಲಿಸಿದ್ದಾರೆ.</p>.<p>ಜಿಲ್ಲೆಯ ಸಿರಿವೆಲ್ಲಾ ಮಂಡಲದ ಕೋಟಪಾಡು ಗ್ರಾಮದ ಶಂಷೀರ್ ಶಾ ಅಲಿ ಎಂಬುವವರು ಗರ್ಭಿಣಿ ಪತ್ನಿ ಮದರ್ಬೀ ಅವರನ್ನು ಶುಕ್ರವಾರ ನಂದ್ಯಾಲದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗು ಗರ್ಭದಲ್ಲಿಯೇ ಮೃತಪಟ್ಟಿದ್ದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರ ತೆಗೆದಿದ್ದಾರೆ.</p>.<p>‘ಮಗುವಿನ ಅಂತ್ಯಕ್ರಿಯೆ ನಡೆಸದಂತೆ ಗ್ರಾಮಸ್ಥರು ನನಗೆ ಪ್ರತಿರೋಧ ಒಡ್ಡಿದರು. ಜೋರಾಗಿ ಮಳೆ ಬೀಳುತ್ತಿತ್ತು. ಹೀಗಾಗಿ ಬೇರೆ ದಾರಿ ಕಾಣದೇ ಹಸುಳೆಯ ಮೃತದೇಹವನ್ನು ಕಾಲುವೆಯಲ್ಲಿ ಎಸೆದೆ ಎಂಬುದಾಗಿ ಅಲಿ ತಿಳಿಸಿದ್ದಾರೆ’ ಎಂದು ನಂದ್ಯಾಲ ತಾಲ್ಲೂಕು ಇನ್ಸ್ಟೆಪಕ್ಟರ್ ದಿವಾಕರ್ ರೆಡ್ಡಿ ವಿವರಿಸಿದರು.</p>.<p>‘ಮಗುವಿಗೆ ಕೊರೊನಾ ಸೋಂಕು ಇತ್ತು ಎಂಬುದನ್ನು ವೈದ್ಯರು ದೃಢಪಡಿಸಿಲ್ಲ. ಆದರೆ, ನಂದ್ಯಾಲದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚು ಇರುವ ಕಾರಣ ಗ್ರಾಮಸ್ಥರು ಭಯದಿಂದ ಈ ರೀತಿ ಪ್ರತಿರೋಧ ಒಡ್ಡಿರಬಹುದು’ ಎಂದು ರೆಡ್ಡಿ ಹೇಳಿದರು.</p>.<p>‘ಅಲಿ ಕೂಲಿಕಾರ್ಮಿಕ. ಸಣ್ಣ ಆದಾಯ ಹೊಂದಿರುವ ಆತ, ಕಾಯಿಲೆಯಿಂದ ಬಳಲುತ್ತಿರುವ ಪತ್ನಿಯ ಆರೈಕೆ ಮಾಡಬೇಕಿದೆ. ಮಗುವನ್ನು ಕಳೆದುಕೊಂಡು ಅತೀವ ದುಃಖದಲ್ಲಿದ್ದಾನೆ. ಹೀಗಾಗಿ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದೂ ರೆಡ್ಡಿ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಕೊರೊನಾ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಗ್ರಾಮಸ್ಥರು ಅಂತ್ಯಕ್ರಿಯೆಗೆ ವಿರೋಧಿಸಿದ ಕಾರಣ,ಜನಿಸುವ ಮುನ್ನವೇ ಮೃತಪಟ್ಟಿದ್ದ ಹೆಣ್ಣುಮಗುವಿನ ಶವವನ್ನು ತಂದೆಯೇ ನೀರಿನ ಕಾಲುವೆಯಲ್ಲಿ ಎಸೆದ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶ ಕರ್ನೂಲು ಜಿಲ್ಲೆಯಲ್ಲಿ ನಡೆದಿದೆ.</p>.<p>ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಕರ್ನೂಲು–ಕಡಪ ನೀರಾವರಿ ಕಾಲುವೆಯಲ್ಲಿ ಮಗುವಿನ ಮೃತದೇಹ ನೋಡಿದ ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು, ಮಗುವಿನ ಪಾಲಕರನ್ನು ಪತ್ತೆ ಹಚ್ಚಿದ್ದಾರೆ. ನಂತರ, ಮಗುವನ್ನು ಗ್ರಾಮಕ್ಕೆ ಒಯ್ದು ಅಂತ್ಯಕ್ರಿಯೆ ನಡೆಸುವಂತೆ ಪಾಲಕರನ್ನು ಮನವೊಲಿಸಿದ್ದಾರೆ.</p>.<p>ಜಿಲ್ಲೆಯ ಸಿರಿವೆಲ್ಲಾ ಮಂಡಲದ ಕೋಟಪಾಡು ಗ್ರಾಮದ ಶಂಷೀರ್ ಶಾ ಅಲಿ ಎಂಬುವವರು ಗರ್ಭಿಣಿ ಪತ್ನಿ ಮದರ್ಬೀ ಅವರನ್ನು ಶುಕ್ರವಾರ ನಂದ್ಯಾಲದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗು ಗರ್ಭದಲ್ಲಿಯೇ ಮೃತಪಟ್ಟಿದ್ದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರ ತೆಗೆದಿದ್ದಾರೆ.</p>.<p>‘ಮಗುವಿನ ಅಂತ್ಯಕ್ರಿಯೆ ನಡೆಸದಂತೆ ಗ್ರಾಮಸ್ಥರು ನನಗೆ ಪ್ರತಿರೋಧ ಒಡ್ಡಿದರು. ಜೋರಾಗಿ ಮಳೆ ಬೀಳುತ್ತಿತ್ತು. ಹೀಗಾಗಿ ಬೇರೆ ದಾರಿ ಕಾಣದೇ ಹಸುಳೆಯ ಮೃತದೇಹವನ್ನು ಕಾಲುವೆಯಲ್ಲಿ ಎಸೆದೆ ಎಂಬುದಾಗಿ ಅಲಿ ತಿಳಿಸಿದ್ದಾರೆ’ ಎಂದು ನಂದ್ಯಾಲ ತಾಲ್ಲೂಕು ಇನ್ಸ್ಟೆಪಕ್ಟರ್ ದಿವಾಕರ್ ರೆಡ್ಡಿ ವಿವರಿಸಿದರು.</p>.<p>‘ಮಗುವಿಗೆ ಕೊರೊನಾ ಸೋಂಕು ಇತ್ತು ಎಂಬುದನ್ನು ವೈದ್ಯರು ದೃಢಪಡಿಸಿಲ್ಲ. ಆದರೆ, ನಂದ್ಯಾಲದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚು ಇರುವ ಕಾರಣ ಗ್ರಾಮಸ್ಥರು ಭಯದಿಂದ ಈ ರೀತಿ ಪ್ರತಿರೋಧ ಒಡ್ಡಿರಬಹುದು’ ಎಂದು ರೆಡ್ಡಿ ಹೇಳಿದರು.</p>.<p>‘ಅಲಿ ಕೂಲಿಕಾರ್ಮಿಕ. ಸಣ್ಣ ಆದಾಯ ಹೊಂದಿರುವ ಆತ, ಕಾಯಿಲೆಯಿಂದ ಬಳಲುತ್ತಿರುವ ಪತ್ನಿಯ ಆರೈಕೆ ಮಾಡಬೇಕಿದೆ. ಮಗುವನ್ನು ಕಳೆದುಕೊಂಡು ಅತೀವ ದುಃಖದಲ್ಲಿದ್ದಾನೆ. ಹೀಗಾಗಿ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದೂ ರೆಡ್ಡಿ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>