ಈ ಕುರಿತು ತಮ್ಮ ಸ್ವಗ್ರಾಮ ಅಂತರ್ವಾವಿ ಸಾರಥಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಕೇಳಿದ್ದನ್ನು ಸರ್ಕಾರ ನೀಡಿಲ್ಲ. ರಾಜಕೀಯ ಕಾರಣಗಳಿಗಾಗಿ ಈ ವಿಶೇಷ ಅಧಿವೇಶನ ನಡೆಸಲಾಗಿದೆ. ಮರಾಠರ ಹಿತಾಸಕ್ತಿಗಳನ್ನು ನಾವು ಸಂರಕ್ಷಿಸಬೇಕಾಗಿದೆ. ಪ್ರಸ್ತುತ ಸರ್ಕಾರದ ಮೀಸಲಾತಿಯು ಮೋಟರ್ ಸೈಕಲ್ ಕೊಟ್ಟು, ಪೆಟ್ರೋಲ್ ನೀಡದಂತಾಗಿದೆ. ಇದು ನಮಗೆ ಸ್ವೀಕಾರಾರ್ಹವಲ್ಲ’ ಎಂದು ತಿಳಿಸಿದ್ದಾರೆ.