<p><strong>ಶಿಲ್ಲಾಂಗ್:</strong> ಮೇಘಾಲಯ ಸಚಿವ ಸಂಪುಟ ಪುನಾರಚನೆಗೆ ಕೆಲವೇ ಗಂಟೆಗಳ ಮುನ್ನವೇ ಹಿರಿಯ ನಾಯಕರಾದ ಎ.ಎಲ್. ಹೆಕ್, ಪಾಲ್ ಲಿಂಗ್ಡೋ, ಅಂಪಾರೀನ್ ಲಿಂಗ್ಡೋ ಸೇರಿದಂತೆ ಎಂಟು ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಎನ್ಪಿಪಿ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರನ್ನು ಭೇಟಿ ಮಾಡಿ ಸಚಿವರ ರಾಜೀನಾಮೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. </p><p>ಇಂದು (ಮಂಗಳವಾರ) ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಎಂಟು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಸಚಿವರಾದ ಎನ್ಪಿಪಿಯ ಅಂಪಾರೀನ್ ಲಿಂಗ್ಡೋ, ಕಮಿಂಗೋನ್ ಯಂಬೋನ್, ರಕ್ಕಮ್ ಎ. ಸಂಗ್ಮಾ, ಅಬು ತಾಹೆರ್ ಮೊಂಡಲ್, ಯುಡಿಪಿಯ ಪಾಲ್ ಲಿಂಗ್ಡೋ ಮತ್ತು ಕಿರ್ಮೆನ್ ಶಿಲ್ಲಾ, ಎಚ್ಎಸ್ಪಿಡಿಪಿಯ ಶಕ್ಲಿಯಾರ್ ವಾರ್ಜ್ರಿ ಮತ್ತು ಬಿಜೆಪಿಯ ಎ.ಎಲ್. ಹೆಕ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.</p><p>ಎನ್ಪಿಪಿ ಶಾಸಕರಾದ ವೈಲಾದ್ಮಿಕಿ ಶಿಲ್ಲಾ, ಸೊಸ್ತೇನೆಸ್ ಸೊಹ್ತುನ್, ಬ್ರೆನಿಂಗ್ ಎ. ಸಂಗ್ಮಾ ಮತ್ತು ತಿಮೋತಿ ಡಿ. ಶಿರಾ ಅವರು ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p><p>ಯುಡಿಪಿ ಮುಖ್ಯಸ್ಥ ಮೆಟ್ಬಾ ಲಿಂಗ್ಡೋ ಮತ್ತು ಮಾಜಿ ಸಚಿವ ಲಹ್ಕ್ಮೆನ್ ರಿಂಬುಯಿ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.</p><p>ಶಕ್ಲಿಯಾರ್ ವಾರ್ಜ್ರಿ ಬದಲಿಗೆ ಎಚ್ಎಸ್ಪಿಡಿಪಿ ಶಾಸಕ ಮೆಥೋಡಿಯಸ್ ದಖರ್ ಸಂಪುಟ ಸೇರಲಿದ್ದಾರೆ. ಇತ್ತ ಬಿಜೆಪಿಯ ಎ.ಎಲ್. ಹೆಕ್ ಬದಲಿಗೆ ಸ್ಯಾನ್ಬೋರ್ ಶುಲ್ಲೈ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಲ್ಲಾಂಗ್:</strong> ಮೇಘಾಲಯ ಸಚಿವ ಸಂಪುಟ ಪುನಾರಚನೆಗೆ ಕೆಲವೇ ಗಂಟೆಗಳ ಮುನ್ನವೇ ಹಿರಿಯ ನಾಯಕರಾದ ಎ.ಎಲ್. ಹೆಕ್, ಪಾಲ್ ಲಿಂಗ್ಡೋ, ಅಂಪಾರೀನ್ ಲಿಂಗ್ಡೋ ಸೇರಿದಂತೆ ಎಂಟು ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಎನ್ಪಿಪಿ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರನ್ನು ಭೇಟಿ ಮಾಡಿ ಸಚಿವರ ರಾಜೀನಾಮೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. </p><p>ಇಂದು (ಮಂಗಳವಾರ) ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಎಂಟು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಸಚಿವರಾದ ಎನ್ಪಿಪಿಯ ಅಂಪಾರೀನ್ ಲಿಂಗ್ಡೋ, ಕಮಿಂಗೋನ್ ಯಂಬೋನ್, ರಕ್ಕಮ್ ಎ. ಸಂಗ್ಮಾ, ಅಬು ತಾಹೆರ್ ಮೊಂಡಲ್, ಯುಡಿಪಿಯ ಪಾಲ್ ಲಿಂಗ್ಡೋ ಮತ್ತು ಕಿರ್ಮೆನ್ ಶಿಲ್ಲಾ, ಎಚ್ಎಸ್ಪಿಡಿಪಿಯ ಶಕ್ಲಿಯಾರ್ ವಾರ್ಜ್ರಿ ಮತ್ತು ಬಿಜೆಪಿಯ ಎ.ಎಲ್. ಹೆಕ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.</p><p>ಎನ್ಪಿಪಿ ಶಾಸಕರಾದ ವೈಲಾದ್ಮಿಕಿ ಶಿಲ್ಲಾ, ಸೊಸ್ತೇನೆಸ್ ಸೊಹ್ತುನ್, ಬ್ರೆನಿಂಗ್ ಎ. ಸಂಗ್ಮಾ ಮತ್ತು ತಿಮೋತಿ ಡಿ. ಶಿರಾ ಅವರು ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p><p>ಯುಡಿಪಿ ಮುಖ್ಯಸ್ಥ ಮೆಟ್ಬಾ ಲಿಂಗ್ಡೋ ಮತ್ತು ಮಾಜಿ ಸಚಿವ ಲಹ್ಕ್ಮೆನ್ ರಿಂಬುಯಿ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.</p><p>ಶಕ್ಲಿಯಾರ್ ವಾರ್ಜ್ರಿ ಬದಲಿಗೆ ಎಚ್ಎಸ್ಪಿಡಿಪಿ ಶಾಸಕ ಮೆಥೋಡಿಯಸ್ ದಖರ್ ಸಂಪುಟ ಸೇರಲಿದ್ದಾರೆ. ಇತ್ತ ಬಿಜೆಪಿಯ ಎ.ಎಲ್. ಹೆಕ್ ಬದಲಿಗೆ ಸ್ಯಾನ್ಬೋರ್ ಶುಲ್ಲೈ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>