<p><strong>ಶಿಲ್ಲಾಂಗ್</strong>: ಮೇಘಾಲಯದಲ್ಲಿ ವಾರ್ಷಿಕ ಮಳೆಯಿಂದಾಗಿ ಸುಮಾರು 63 ಬಿಲಿಯನ್ ಕ್ಯೂಬಿಕ್ ಲೀಟರ್ ನೀರು ಹರಿದುಬರಲಿದ್ದು, ಈ ಪೈಕಿ ರಾಜ್ಯವು ಕೇವಲ 1 ಬಿಲಿಯನ್ ಕ್ಯೂಬಿಕ್ ಲೀಟರ್ ನೀರನ್ನು ಮಾತ್ರವೇ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿ.ಕೆ.ಸಂಗ್ಮಾ ಹೇಳಿದ್ದಾರೆ.</p>.<p>ಜಲಜೀವನ ಮಿಷನ್ ಯೋಜನೆಯಡಿ ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ಮೇಘಾಲಯ ವಾಟರ್ ಸ್ಮಾರ್ಟ್ ಕಿಡ್ ಯೋಜನೆಗೆ ಚಾಲನೆ ನೀಡಿ ಅವರು ಈ ಮಾತು ಹೇಳಿದರು. ಮಕ್ಕಳಲ್ಲಿ ನೀರು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.</p>.<p>ಮೇಘಾಲಯವು ಭೂಮಂಡಲದಲ್ಲಿಯೇ ಅತ್ಯಂತ ತೇವಯುಕ್ತವಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಸುರಿಯುವ ಒಟ್ಟು ಮಳೆ ಪ್ರಮಾಣದಲ್ಲಿ ಸುಮಾರು 31 ಬಿಲಿಯನ್ ಕ್ಯೂಬಿಕ್ ಲೀಟರ್ ನೀರು ಬಾಂಗ್ಲಾದೇಶಕ್ಕೆ ಹರಿದುಹೋದರೆ, ಅಷ್ಟೇ ಪ್ರಮಾಣದ ನೀರು ಅಸ್ಸಾಂಗೆ ಹರಿದುಹೋಗಲಿದೆ ಎಂದು ತಿಳಿಸಿದರು.</p>.<p>ನೀರು ಸಂರಕ್ಷಣೆ ಮತ್ತು ಸುಸ್ಥಿರಾಭಿವೃದ್ಧಿಗೆ ಒತ್ತು ನೀಡಲು ಕೇಂದ್ರ ಜಲ ಸಚಿವಾಲಯದ ವಿವಿಧ ಕಾರ್ಯಕ್ರಮಗಳ ನೆರವಿನಲ್ಲಿ ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದೆ. ರಾಜ್ಯದಲ್ಲಿ 1000 ಜಲಸಂಗ್ರಹಾಗಾರಗಳನ್ನು ನಿರ್ಮಿಸಲು ಒತ್ತು ನೀಡಲಾಗಿದೆ ಎಂದು ತಿಳಿಸಿದರು.</p>.<p>ನೀರು ಸಂರಕ್ಷಣೆಗೆ ಪ್ರಯತ್ನ ನಡೆಸುತ್ತಿದ್ದು, ಜಲಸುಸ್ಥಿರತೆ ಮತ್ತು ಜಲಮೂಲಗಳ ಮರುಪೂರಿಕರಣಕ್ಕೆ ಒತ್ತು ನೀಡಲಾಗಿದೆ. ರಾಜ್ಯದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆಗೆ ಜಲಜೀವನ್ ಮಿಷನ್ ಮತ್ತು ಇಎಪಿ ಯೋಜನೆಯಡಿ ಸುಮಾರು 8000 ಕೋಟಿ ರೂಪಾಯಿ ನೆರವು ಬಂದಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಲ್ಲಾಂಗ್</strong>: ಮೇಘಾಲಯದಲ್ಲಿ ವಾರ್ಷಿಕ ಮಳೆಯಿಂದಾಗಿ ಸುಮಾರು 63 ಬಿಲಿಯನ್ ಕ್ಯೂಬಿಕ್ ಲೀಟರ್ ನೀರು ಹರಿದುಬರಲಿದ್ದು, ಈ ಪೈಕಿ ರಾಜ್ಯವು ಕೇವಲ 1 ಬಿಲಿಯನ್ ಕ್ಯೂಬಿಕ್ ಲೀಟರ್ ನೀರನ್ನು ಮಾತ್ರವೇ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿ.ಕೆ.ಸಂಗ್ಮಾ ಹೇಳಿದ್ದಾರೆ.</p>.<p>ಜಲಜೀವನ ಮಿಷನ್ ಯೋಜನೆಯಡಿ ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ಮೇಘಾಲಯ ವಾಟರ್ ಸ್ಮಾರ್ಟ್ ಕಿಡ್ ಯೋಜನೆಗೆ ಚಾಲನೆ ನೀಡಿ ಅವರು ಈ ಮಾತು ಹೇಳಿದರು. ಮಕ್ಕಳಲ್ಲಿ ನೀರು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.</p>.<p>ಮೇಘಾಲಯವು ಭೂಮಂಡಲದಲ್ಲಿಯೇ ಅತ್ಯಂತ ತೇವಯುಕ್ತವಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಸುರಿಯುವ ಒಟ್ಟು ಮಳೆ ಪ್ರಮಾಣದಲ್ಲಿ ಸುಮಾರು 31 ಬಿಲಿಯನ್ ಕ್ಯೂಬಿಕ್ ಲೀಟರ್ ನೀರು ಬಾಂಗ್ಲಾದೇಶಕ್ಕೆ ಹರಿದುಹೋದರೆ, ಅಷ್ಟೇ ಪ್ರಮಾಣದ ನೀರು ಅಸ್ಸಾಂಗೆ ಹರಿದುಹೋಗಲಿದೆ ಎಂದು ತಿಳಿಸಿದರು.</p>.<p>ನೀರು ಸಂರಕ್ಷಣೆ ಮತ್ತು ಸುಸ್ಥಿರಾಭಿವೃದ್ಧಿಗೆ ಒತ್ತು ನೀಡಲು ಕೇಂದ್ರ ಜಲ ಸಚಿವಾಲಯದ ವಿವಿಧ ಕಾರ್ಯಕ್ರಮಗಳ ನೆರವಿನಲ್ಲಿ ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದೆ. ರಾಜ್ಯದಲ್ಲಿ 1000 ಜಲಸಂಗ್ರಹಾಗಾರಗಳನ್ನು ನಿರ್ಮಿಸಲು ಒತ್ತು ನೀಡಲಾಗಿದೆ ಎಂದು ತಿಳಿಸಿದರು.</p>.<p>ನೀರು ಸಂರಕ್ಷಣೆಗೆ ಪ್ರಯತ್ನ ನಡೆಸುತ್ತಿದ್ದು, ಜಲಸುಸ್ಥಿರತೆ ಮತ್ತು ಜಲಮೂಲಗಳ ಮರುಪೂರಿಕರಣಕ್ಕೆ ಒತ್ತು ನೀಡಲಾಗಿದೆ. ರಾಜ್ಯದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆಗೆ ಜಲಜೀವನ್ ಮಿಷನ್ ಮತ್ತು ಇಎಪಿ ಯೋಜನೆಯಡಿ ಸುಮಾರು 8000 ಕೋಟಿ ರೂಪಾಯಿ ನೆರವು ಬಂದಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>